ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.
ಮಾನವನ ಸುತ್ತ ಅನಾಹುತಗಳ ಸರಮಾಲೆ
ಆದರೂ ಪ್ರಪಂಚವ ನೋಡುವನು ಕಾಮಾಲೆ ಕಣ್ಣಲ್ಲೇ
ಮಾಡುವುದೆಲ್ಲ ದೂರದೃಷ್ಟಿಯಿಂದಲೇ
ಆದರೆ ಆಗುವುದೆಲ್ಲ ದುರಾದ್ರುಸ್ಟದಲ್ಲೇ
ಮಾನವ ಹಾರಾಡುವುದು ವಿಮಾನದಲ್ಲೇ
ಆಗ ಹೇಳುತ್ತಾನೆ ಸ್ವರ್ಗ ಇಲ್ಲೇ ಮೇಲೆ
ಅನಾಹುತವಾದಾಗ ಮದ್ಯದಲ್ಲೇ
ಅವನ ಸಾವು ವಿಮಾನ ಬಿದ್ದ ಸ್ತಳದಲ್ಲೇ.
ಮಾನವನ ಜೀವನ ಸಾಗುವುದು ಬೆಳಕಲ್ಲೇ
ಅದಕ್ಕಾಗಿ ಹರಡಿರುವನು ತಂತಿಯ ಮಾಲೆ
ವಿದುತ್ ಎನ್ನುವ ಮಿಂಚು ಅದರ ಮೇಲೆ
ಕೊಂಚ ಎಚ್ಚರ ತಪ್ಪಿದರೆ ಸಾವು ಕ್ಷಣದಲ್ಲೇ
ಮಾನವ ಈಗ ತಿರುಗಾಡುವುದೆಲ್ಲಕಾರಲ್ಲೇ
ಅದೂ ಘಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲೇ
ಅಪ್ಪಿತಪ್ಪಿ ಕಣ್ಣು ಮುಚ್ಚಿದರೆ ತೂಕಡಿಕೆಯಲ್ಲಿ
ಮತ್ತೆ ಕಣ್ಣು ತೆರೆಯುವುದು ಪರಲೋಕದಲ್ಲೇ.
ಮಾನವನು ಆಹಾರ ಬೆಳೆಯುವುದು ಕಲ್ಮಶದಲ್ಲೇ
ಹೀಗಾಗಿ ಅವನ ಹೊಟ್ಟೆಯೂ ತುಂಬಿರುವುದು ವಿಷದಲ್ಲೇ
ಆದ್ದರಿಂದ ವರ್ಷವಿಡೀ ನರಳುವನು ರೋಗದಲ್ಲೇ
ಅದು ಕೊನೆಯಾಗುವುದು ಆತನ ಸಾವಿನಲ್ಲೆ.
ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ