ಮಂಗಳವಾರ, ಜೂನ್ 16, 2009

ನನ್ನ ಬಗ್ಗೆ ಇನ್ನೊಂದಿಸ್ಟ್ ಮಾತು

ನನ್ ಹೆಸರು ಗೊತ್ತಲ್ಲ ನಿಮಗೆ ಪ್ರಶಾಂತ್ ಅಂತ. ನನ್ ತಂದೆ ಹೆಸರು ಚಂದ್ರಪ್ಪ ಗೌಡ ಎಸ್ ಎ. ತಾಯಿ ಕಲಾವತಿ ಅಂತ.ನಂಗೆ ಇಬ್ಬರು ಅಣ್ಣ ಒಬ್ಬ ತಮ್ಮ ಇದಾನೆ.ಜೊತೆಗೆ ಅಜ್ಜಿ ಇದಾರೆ.ಇದು ನಮ್ಮ ಕುಟುಂಬ.ಹುಟ್ಟೂರು ಶೀರೂರು. ಇದು ತೀರ್ಥಹಳ್ಳಿ ತಾಲ್ಲೋಕು ಶಿವಮೊಗ್ಗ ಜಿಲ್ಲೆಯಲ್ಲಿದೆ.ಈ ಊರು ತೀರ್ಥಹಳ್ಳಿ ಮತ್ತು ನಿಸರ್ಗದ ತವರೂರೆನ್ನಬಹುದಾದ ಆಗುಂಬೆಯ ಮಾರ್ಗಮದ್ಯದಲ್ಲಿ ಸಿಗುವಂತಹ ಸುಂದರವಾದ ಊರು.ಆದರೆ ನಾನು ಬೆಳೆದಿದ್ದು, ಓದಿದ್ದು, ನನ್ನ ಒಡನಾಟ ಮತ್ತು ನಾ ಹೊತ್ತಿರುವ ನೆನಪಿನ ಮೂಟೆಯಲ್ಲಿ ಹೆಚ್ಚಿನ ಪಾಲು ನನ್ನ ಅಜ್ಜಿ ಊರಾದ ಜಡ್ದಗದ್ದೆಯದ್ದು. ಇದು ಸಹ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪವಿದೆ. ಇದು ನನ್ನ ಅಚ್ಚು ಮೆಚ್ಚಿನ ಹಾಗು ಸದಾ ಸ್ಮರಿಸುವ ಊರು.ಈ ಊರಿನಲ್ಲಾದ ನನ್ನ ಬಾಲ್ಯದ ಅನುಭವಗಳನ್ನು ಮೆಲಕು ಹಾಕಿಕೊಂಡರೆ ಮತ್ತೆ ಅದೇ ಊರಿನಲ್ಲಿ ಅದೇ ಸ್ನೇಹಿತರ ಜೊತೆ ಕುಣಿದಾಡಬೇಕು ನಲಿದಾಡಬೇಕು ಅನ್ಸತ್ತೆ. ಹಾಗೇ ನನ್ನಜ್ಜಿ (ಅಮ್ಮನ ತಾಯಿ), ಅಜ್ಜ, ಮಾವಂದಿರು, ಅತ್ತೆ, ಅವರ ಮಕ್ಕಳು, ನೆರೆಹೊರೆಯವರು, ಆ ಪರಿಸರ, ಅವರ ಸಂಸ್ಕೃತಿ, ಅವರ ಕೃಷಿ ಕೆಲಸ ಕಾರ್ಯಗಳು, ಆ ಮಳೆಗಾಲ, ಕೊರೆಯುವ ಚಳಿಗಾಲ, ಉರಿ ಬಿಸಿಲಿನ ಬೆಸಿಗೆಗಾಲ, ಆ ನನ್ನ ಶಾಲೆ, ಆ ಶಾಲೆಗೆ ಹೋಗೋ ಮೂರು ಕಿಲೋಮೀಟರ್ ದಾರಿ, ಹಳ್ಳ, ಗದ್ದೆಬೈಲು, ಕಾಡುಕೋಳಿ ಹಿಂಡು, ನವಿಲುಗರಿಗಳು, ಶಾಲೆವರೆಗೂ ಬಿಟ್ಟುಬರೋ ನಮ್ಮೂರಿನ ನಾಯಿಗಳು. ಚಂದ ಚಂದ ಹುಡುಗಿಯರೂ ಆಹಾ ಎಂಥೆಂಥಾ ಮಧುರ ಅನುಭವಗಳವು. ಹೇಳಿ ಆ ಊರನ್ನ ನಾ ಮರೆಯಲು ಸಾದ್ಯಾನ? ಖಂಡಿತ ಆಗಲ್ಲ. ಈ ಎಲ್ಲದರ ಬಗ್ಗೆ ಬರಿತೀನಿ.ಆ ಸುಂದರ ಅನುಭವಗಳನ್ನ ಈ ಮೂಲಕ ಮತ್ತೆ ಈ ಮೂಲಕ ಮತ್ತೆ ಮತ್ತೆ ಮೆಲಕು ಹಾಕ್ಕೊಳ್ತಿನಿ ಆದರೆ ನನ್ನ ಭಾಷಾ ಬಳಕೆ ನಿಮಗೆ ಕಿರಿಕಿರಿ ಅನ್ನಿಸಿದರೆ ನೇರವಾಗಿ ಹೇಳಿ. ಮಲೆನಾಡಿನ ಆಡು ಭಾಷೆಯಲ್ಲಿ ಹಿರಿಯರಿಗೆ ತುಂಬಾನೆ ಗೌರವ ಇರತ್ತೆ. ಆದರು ನಾವು ಅಮ್ಮಂಗೆ, ಅಜ್ಜಿಗೆ, ಅಥವಾ ಮನೆಯ ಯಾರೇ ಸದಸ್ಯರಿಗೆ ಪ್ರೀತಿಯಿಂದ "ಕಣೇ, ಹೋಗೆ, ಬಾರೆ", ಈ ಥರದ ಮಾತು ರೂಡಿಯಲ್ಲಿದೆ. ಇಂಥಾ ಪದಗಳು ಅತ್ಯಂತ ಪ್ರೀತಿಪೂರ್ವಕ ಮಾತುಗಳು. ದಯವಿಟ್ಟು ಅನ್ಯತಾ ಭಾವಿಸಬೇಡಿ. ಹಾಗೇ ನಾ ಬರೆಯುವಾಗ ಅಲ್ಲಲ್ಲಿ ಘಟನೆಗಳು, ವಿಷಯಗಳು ಹಿಂದೆ ಮುಂದೆ ಆಗಬಹುದು. ಹಾಗಿದ್ದರೂ, ಬರೆಯಬೇಕೆಂಬ ಮನಸ್ಸಿಗೆ ಇದೊಂದು ಮೊದಲ ಮೆಟ್ಟಿಲು ಅಂತ ಭಾವಿಸಿದ್ದೇನೆ. ಇದರಲ್ಲಿ ಹೆಚ್ಚು ವಾತ್ಸವತೆ ಇದ್ದರೂ ಅಲ್ಲಲ್ಲಿ ಕಾಲ್ಪನಿಕ ವಿಚಾರಗಳು ಮನರಂಜನೆಗಾಗಿಯೋ, ಅಥವಾ ವಿಷಯ ಗಂಬೀರತೆಗಾಗಿಯೋ ಬಂದಿರಬಹುದಾಗಿದೆ.ನನಗನ್ನಿಸಿದ್ದನ್ನು ನನ್ನದೇ ಧಾಟಿಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ. ಹ್ಞಾ.... ಇನ್ನೊಂದು ವಿಷಯ, ಈ ನನ್ನ ಬ್ಲಾಗಿನ ಶೀರ್ಷಿಕೆಯಲ್ಲಿ "ನೀನಂದ್ರೆ ನಂಗಿಷ್ಟ ಕಣೇ" ಅಂತಿದೆ. ಇಲ್ಲಿ ನನ್ನಜ್ಜಿ ಇರಬಹುದು, ದೂರದಲ್ಲಿ ನಿಂತು ಕೈ ಬೀಸಿ, ನಗು ಬಿಸಾಕಿದ ಗೆಳತಿ ಇರಬಹುದು, ನನ್ನ ಕಲ್ಪನೆಯಲ್ಲಿನ ಪ್ರೇಯಸಿ ಇರಬಹುದು, ಅಥವಾ ನನ್ನ ಹೃದಯಕ್ಕೆ ಹತ್ತಿರವಾದ ಯಾರೇ ಇರಬಹುದು. ಹಾಗೇನೇ ಇಲ್ಲಿ ಬರೆಯಲು ಸಾಕಸ್ಟ್ ವಿಷಯಗಳಿವೆ. ಆದರೆ ಯಾವುದು ಮೊದಲು ಯಾವುದು ನಂತರ ಅನ್ನೋ ಗೊಂದಲವಿದೆ. ಇದೆಲ್ಲ ಸ್ವಲ್ಪ ಸಮಯದ ನಂತರ ತನಗೆ ತಾನಾಗೇ ಮತ್ತು ನಿಮ್ಮ ಸಲಹೆಗಳಿಂದ ಸರಿಯಾಗುತ್ತದೆಂಬ ಧೃಡ ನಂಬಿಕೆ ನನಗಿದೆ. ಇಲ್ಲಿ ಪ್ರಥಮವಾಗಿ ನನ್ನ ಕೆಲವು ಕವಿತೆಗಳನ್ನ ಬರೆಯುತ್ತೇನೆ. ಹಂತಹಂತವಾಗಿ ಗಂಬೀರವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನನ್ನ ಕವಿತೆಗಳು, ಬರಹಗಳ ಬಗ್ಗೆ ನಿಮಗೇನನ್ನಿಸುತ್ತದೆ ಅದನ್ನ ನೇರವಾಗಿ ತಿಳಿಸಿ ಅಂತ ತಮ್ಮಲ್ಲಿ ವಿನಮ್ಬ್ರವಾಗಿ ಕೇಳಿಕೊಳ್ಳುತ್ತೇನೆ. ಸ್ನೇಹಿತರೇ.... ಬರೆಯಬೇಕು ಎಂದುಕೊಂಡಾಗ ಈ ರೀತಿಯ (ಬ್ಲಾಗ್) ದಾರಿ ತೋರಿಸಿದ ನನ್ನೊಬ್ಬ ಗೆಳೆಯನಿಗೆ, ಆತ ಈಗ ಏನೋ ಸಾದಿಸುವ ತುದಿತದಲ್ಲಿದ್ದಾನೆ. ಅವನಿಗೆ ಆ ದಾರಿಯಲ್ಲಿ ಯಶಸ್ಸು ಸಿಗಲಿ ಅಂತ ಈ ಮೂಲಕ ಶುಭ ಹಾರೈಸುತ್ತೇನೆ. ಹಾಗೆಯೇ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲೆಂದು ಬಯಸುತಾ ನನ್ನ ಬರವಣಿಗೆ ಪ್ರರಂಬಿಸುತ್ತೇನೆ.





3 ಕಾಮೆಂಟ್‌ಗಳು: