tag:blogger.com,1999:blog-3575590508940466212024-02-20T08:15:49.404-08:00ನೀನಂದ್ರೆ ನಂಗಿಷ್ಟ ...ನೀನ್ ಯಾರಾದ್ರೂ ಆಗಿರುprashihttp://www.blogger.com/profile/17424449836173486264noreply@blogger.comBlogger25125truetag:blogger.com,1999:blog-357559050894046621.post-17585295776198292382023-07-31T04:14:00.000-07:002023-07-31T04:14:25.639-07:00<b>ಬೃಹತ್ ಆಲದ ಮರ: ಚಿಕ್ಕಮಲ್ಲಯ್ಯ , ಐ ಐ ಎಂ ಬಿ </b><div></div><div><br /></div><div>ಕೆಲವು ಸಂಭ್ರಮಗಳೇ ಹಾಗೆ ತನ್ನ ವ್ಯಾಪ್ತಿಗಿಂತ ಮಿಗಿಲಾಗಿ ಹರಡಿಕೊಳ್ಳುತ್ತವೆ. ಮೊನ್ನೆ ಶನಿವಾರ ಡಾ. ಚಿಮ್ಮೋಜಿ ರಾವ್ ತಾವು ಪಡೆದ ಡಾಕ್ಟೊರೇಟ್ ಪದವಿಯನ್ನ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಲು ಬಯಸಿ, ಸಣ್ಣ ಗೆಟ್ಟೋಗೆಥೆರ್ ಆಯೋಜಿಸಿದರು. ಆ ಕಾರ್ಯಕ್ರಮಕ್ಕೆ ನಂಗೂ ಆಹ್ವಾನ ನೀಡಿದ್ದರು. ಆದರೆ ನಮ್ಮೆಲ್ಲರ ಜೊತೆ ಅವರು ಈ ಸಂಭ್ರಮವನ್ನ ಚಿಕ್ಕಮಲ್ಲಯ್ಯ ಸರ್ , ಗ್ರಂಥಪಾಲಕರು ಐ ಐ ಎಂ ಬಿ ಅವರ ಸಮ್ಮುಖದಲ್ಲಿ ಆಚರಿಸಲು ಬಯಸಿದರು. ನಾವು ಸಹ ಆ ಚೇತನದ ಜೊತೆ ಮುಖಾಮುಖಿ ಭೇಟಿಯಾಗಲು ಬಹಳ ವರ್ಷಗಳಿಂದ ಬಯಸಿದ್ದೆವು. ಆ ಭಾಗ್ಯ ನಂಗೆ ಮತ್ತು ನನ್ನ ಗೆಳೆಯರಿಗೆ ಮೊನ್ನೆ ನೆರವೇರಿತು. </div><div><br /></div><div>ಆ ಪ್ರಕಾರ, ಎಲ್ಲರೂ ಶನಿವಾರ ಬೆಳಿಗ್ಗೆ ಸುಮಾರು ೧೦:೪೫ ಕ್ಕೆ ಚಿಕ್ಕಮಲ್ಲಯ್ಯ ಸರ್ ಮನೆ ಮುಂದೆ ಸೇರಿದೆವು. ಮೇಲಿನಿಂದ ನೋಡಿದ ಚಿಕ್ಕಮಲ್ಲಯ್ಯ ಸರ್ ಖುದ್ಧು ನಮ್ಮನ್ನೆಲ್ಲ ಬರಮಾಡಿಕೊಂಡರು. ಅವರ ಮನೆಯೊಳಗೆ ಸುಮಾರು ೨೫ ರಿಂದ ೩೦ ಜನರಿದ್ದ ನಾವುಗಳು ಅವರ ಸುತ್ತುವರಿದು ಅವರನ್ನು ಕೇಂದ್ರಿತರಾಗಿ ಕುಳಿತೆವು. ಅವರ ಮನೆಯವರೆಲ್ಲರೂ ಸಹ ನಮ್ಮನ್ನೆಲ್ಲ ಆದರದಿಂದ ಸತ್ಕರಿಸಿದರು. ಸರ್ ಆರೋಗ್ಯ ಹೇಗಿದೆ ಅಂದಾಗ "ವಯಸ್ಸಿಗೆ ತಕ್ಕ ಆರೋಗ್ಯ ಭಗವಂತ ನೀಡಿದ್ದಾನೆ" ಎಂದರು. ಅವರ ಪ್ರತಿಕ್ರಿಯೆಯೇ ಅವರ ನೇರ, ನಿಸ್ಕಲ್ಮಷ ಹಾಗೂ ಪ್ರಭುದ್ಧ ಜೀವನ ಕ್ರಮದ ಸೂಕ್ಷ್ಮ ವಿವರಣೆ ನೀಡಿತು. </div><div><br /></div><div>ಸಾಮಾನ್ಯವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿದ್ಯಾರ್ಥಿಗಳು, ವೃತ್ತಿಪರರು ಕೇವಲ ಚಿಕ್ಕಮಲ್ಲಯ್ಯ ಅಂದ್ರೆ ಗೊತ್ತಾಗದೆ ಇರಬಹುದು. ಐ ಐ ಎಂ ಬಿ ಚಿಕ್ಕಮಲ್ಲಯ್ಯ ಸರ್ ಅಂದ್ರೆ ಪ್ರತಿಯೊಬ್ಬರಿಗೂ ಆ ಹೆಸರಿನ ಪರಿಚಯವಿದೆ. ಮುಖಾಮುಖಿ ನೋಡದೆ, ಭೇಟಿ ಮಾಡದೇ ಹೋದರೂ ಸಹ ಅವರ ಹೆಸರಿನ ಪರಿಚಯವಂತೂ ಇದ್ದೇ ಇದೆ. ಅಷ್ಟು ದೊಡ್ಡ ವ್ಯಕ್ತಿತ್ವ ಅವರದ್ದು. </div><div><br /></div><div>ಇದಿಷ್ಟೇ ಆಗಿದ್ದರೆ ನಾ ಇಲ್ಲಿ ವಿಶೇಷವಾಗಿ ಅವರ ಬಗ್ಗೆ, ಈ ಕಾರ್ಯಕ್ರಮದ ಬಗ್ಗೆ ಬರೆಯಲು ಹೋಗುತ್ತಿರಲಿಲ್ಲ. ಬದಲಾಗಿ ಆ ಹಿರಿಯರನ್ನ ಭೇಟಿಯಾದಾಗ ಆದ ಅನುಭವ ನನ್ನನ್ನು ನಾಲ್ಕಕ್ಷರ ಬರೆಯಲು ಪ್ರೇರೇಪಿಸಿತು. ಅಂತಹ ವ್ಯಕ್ತಿತ್ವ ಅವರದ್ದು. ಪ್ರತಿ ಮಾತಿಗೂ ಭಗವಂತನ ಸಹಾಯ ನೆನೆಯುವ ಅವರು ನಮಗೆ ಮಾದರಿಯಾಗಿದ್ದು ಸುಳ್ಳಲ್ಲ. ಅತ್ಯಂತ ವಿನಯದಿಂದ ನಮ್ಮನ್ನೆಲ್ಲ ಮಾತನಾಡಿಸಿದ ರೀತಿ, ನಮ್ಮ ವೃತ್ತಿಬದುಕಿನ ಏರಿಳಿತಗಳನ್ನ ವಿಚಾರಿಸಿದ ರೀತಿ ಮತ್ತು ಅದರ ವಿಚಾರವಾಗಿ ಅವರು ನೀಡಿದ ಸಲಹೆಗಳು ಅತ್ಯಂತ ಪ್ರಸ್ತುತವಾಗಿತ್ತು. </div><div><br /></div><div>ಅದೆಷ್ಟು ಸರಳತೆ ಅವರದ್ದು. ಐ ಐ ಎಂ ಬಿ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದರೂ ಸಹ ಯಾವ ಬಿಗುಮಾನ ಅವರಲ್ಲಿರಲಿಲ್ಲ. ನಾವು ದಿನ ನಿತ್ಯ ನೋಡುವ ಹಾಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಹಣದ ಹಿಂದೆ ಬಿದ್ದು ವಿದ್ಯಾರ್ಥಿಗಳ ಸುಲಿಗೆ ಮಾಡುವ ಸೊ ಕಾಲ್ಡ್ ಪೊಫೆಸರ್ಸು ಇವರ ನೋಡಿ ಕಲಿಯಬೇಕು. ಅಸಹ್ಯದ ಪರಮಾವದಿ ತಲುಪಿರುವ, ಸರ್ಕಾರಿ ಸಂಬಳದ ಜೊತೆಗೆ ಸದಾ ದೋಚುವ, ಬಾಚುವ ಬಗ್ಗೆಯೇ ಮನಸ್ಸನ್ನ ಕೇಂದ್ರೀಕರಿಸಿರುವ ಬಹುತೇಕರ ನಡುವೆ ಚಿಕ್ಕಮಲ್ಲಯ್ಯ ಸರ್ ಬೇರೆಯದೇ ರೀತಿಯಲ್ಲಿ ಕಾಣುತ್ತಾರೆ. ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದೆ ದೇವಲೋಕದಿಂದ ಇಳಿದು ಬಂದವರಂತೆ ವರ್ತಿಸುವವರ ನಡುವೆ ಸೌಮ್ಯ ಸ್ವಭಾವಾದ ಈ ವ್ಯಕ್ತಿತ್ವ ಮನಸ್ಸಿಗೆ ಹತ್ತಿರವಾದರು. ನಿವೃತ್ತಿ ಹೊಂದಿದ್ದರೂ ಸಹ ಮತ್ತೆ ಪ್ರಭಾವ ಬಳಸಿ, ಮತ್ತೆ ಮತ್ತೆ ಕುರ್ಚಿಗೆ ಅಂಟಿಕೊಂಡಿದ್ದು, ಹೊಸಬರ ಅವಕಾಶಗಳನ್ನ ಕಬಳಿಸುವ ಅದೆಷ್ಟೋ ಮಂದಿಯ ಕಂಡಿರುವ ಹಾಗೂ ಅವರಿಂದ ರೋಸಿ ಹೋಗಿರುವ ನಮಗೆ ಈ ವ್ಯಕ್ತಿತ್ವ ಬೇರೆಯದೇ ರೀತಿಯಲ್ಲಿ ಕಂಡಿತು . </div><div><br /></div><div>ಬಂದಿರುವ ಎಲ್ಲರೂ (ನಾವೊಂದು ೬ ಜನ ಹೊರತುಪಡಿಸಿ) ೧೯೯೫-೧೯೯೬ ರರಲ್ಲಿ ಚಿಕ್ಕಮಲ್ಲಯ್ಯ ಸರ್ ಅವರ ಔದಾರ್ಯದಿಂದ ಐ ಐ ಎಂ ಬಿ ನಲ್ಲಿ ಗ್ರಂಥಾಲಯದಲ್ಲಿ ತರಬೇತಿ ಪಡೆಯಲು ಅವಕಾಶ ದೊರೆತು ಈಗ ಆ ಎಲ್ಲರೂ ಕೂಡ ದೊಡ್ಡ ಹೆಮ್ಮರಗಳಾಗಿ ಇವತ್ತು ಬೇರೆ ಬೇರೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಮಲ್ಲಯ್ಯ ಸರ್ ಅವರ ಪ್ರಭಾವ ಬಹುತೇಕರಲ್ಲಿ ಅಚ್ಚೋತ್ತಿದ್ದಂತೆ ಕಂಡಿದ್ದು ಸುಳ್ಳಲ್ಲ. ಯಾಕೆಂದರೆ, ಬಹುತೇಕರು ತಮ್ಮ ತಮ್ಮ ಗ್ರಂಥಾಲಯದಲ್ಲಿ ಹೊಸದಾಗಿ ವೃತ್ತಿಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳಿಗೆ ತರಬೇತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವಿಚಾರವಾಗಿ ಅವರೆಲ್ಲ ಚಿಕ್ಕಮಲ್ಲಯ್ಯ ಸರ್ ಅವರ ಬಳಿ ಹೇಳಿದಾಗ ಅವರೂ ಖುಷಿಯಿಂದ "ನಾನಾಗಲಿ ನೀವಾಗಲಿ ಸ್ವಯಂ ಪ್ರೇರಣೆಯಿಂದ ಇವೆಲ್ಲ ಮಾಡಲಾಗುವುದಿಲ್ಲ. ಯಾವುದೊ ಶಕ್ತಿ ನಮಗೆ ಪ್ರೇರಣೆ ನೀಡಿ ನಮ್ಮಿಂದ ಈ ಕೆಲಸ ಮಾಡಿಸುತ್ತದೆ" ಎನ್ನುವ ವಿಶಾಲ ಮನಸ್ಸಿನ ಹಿರಿಜೀವ ಅವರದ್ದು. ಇನ್ನೂ ವಿಶೇಷವೆಂದರೆ ಚಿಕ್ಕಮಲ್ಲಯ್ಯ ಸರ್ ಮುಂದೆ ಕುಳಿತಿದ್ದ ಬಹುತೇಕರೇ ಇನ್ನ ನಾಲ್ಕೈದು ವರ್ಷದಲ್ಲಿ ನಿವೃತ್ತಿಯಾಗುವ ವಯಸ್ಸಿನವರು. ಆದರೂ ಸಹ ಗುರುವಿನ ಮುಂದೆ ಚಿಕ್ಕ ಮಕ್ಕಳಂತೆ ವಿನಯ, ವಿಧೇಯದಿಂದ ಕುಳಿತ್ತಿದ್ದು ನಾ ಕಂಡಾಗ ಇದು ಚಿಕ್ಕಮಲ್ಲಯ್ಯ ಸರ್ ಅವರ ಪರಿಶುದ್ಧ ವ್ಯಕ್ತಿತ್ವದ ಕುರುಹು ಎಂದೇ ನಾ ಭಾವಿಸುತ್ತೇನೆ. </div><div><br /></div><div><br /></div><div><div class="separator" style="clear: both; text-align: center;"><a href="https://blogger.googleusercontent.com/img/a/AVvXsEhj2DcnZ81WKUkMNIOndBVBpJwqfMR3mpsZ3z0KNUL4IHAHthkTYUnPbVPsQLK1mjFOPjbHfNR5NoC833kotDl1DSHVyErFsNlVtNAxS9dZKEhe7DJ1YmobsdSV_XTRoaroEupX_OLbMJnIbY8ipNNzpVA8boECVtyb90LaY_wZ0aClrSlAMvEzQYo2" style="margin-left: 1em; margin-right: 1em;"><img alt="" data-original-height="576" data-original-width="1280" height="217" src="https://blogger.googleusercontent.com/img/a/AVvXsEhj2DcnZ81WKUkMNIOndBVBpJwqfMR3mpsZ3z0KNUL4IHAHthkTYUnPbVPsQLK1mjFOPjbHfNR5NoC833kotDl1DSHVyErFsNlVtNAxS9dZKEhe7DJ1YmobsdSV_XTRoaroEupX_OLbMJnIbY8ipNNzpVA8boECVtyb90LaY_wZ0aClrSlAMvEzQYo2=w482-h217" width="482" /></a></div></div><div><br /></div><div><br /></div><div>ಇದೇ ಸಂದರ್ಭದಲ್ಲಿ ಚಿಕ್ಕಮಲ್ಲಯ್ಯ ಸರ್ ಅವರಿಗೆ ಸನ್ಮಾನ ಮಾಡಿ ಅವರ ಆಶೀರ್ವಾದ ಪಡೆದೆವು. </div><div>ನಾವೆಲ್ಲರೂ ಚಿಕ್ಕಮಲ್ಲಯ್ಯ ಸರ್ ಅವರ ಇಡೀ ಕುಟುಂಬದೊಂದಿಗೆ ಒಟ್ಟಿಗೆ ಊಟ ಮಾಡಿದ ಸಂದರ್ಭ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ವಿಶೇಷವಾಗಿ ನಾ ಇಲ್ಲಿ ಹೇಳಲೇ ಬೇಕಾದ ಅತಿ ಮುಖ್ಯವಾದ ವಿಷಯವೆಂದರೆ ಅವರ ಕುಟುಂಬದವರ ಸರಳತೆ, ಅನ್ಯೂನ್ಯತೆ ಮತ್ತೆ ಸಹೃದಯತೆ. ವಿಶೇಷವಾಗಿ, ಸ್ಪಷ್ಟವಾಗಿ ಕನ್ನಡವನ್ನೇ ಮಾತನಾಡುವ ಪ್ರತಿಷ್ಠಿತ ಜೇನುಗೂಡಿನ ಕುಟುಂಬ ಅದು. ಪ್ರತಿಯೊಬ್ಬರೂ ಕೂಡ ಸ್ಪಷ್ಟ ಕನ್ನಡದಲ್ಲೇ ಮಾತನಾಡಿದ್ದು ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿತು. ಈಗ ಇಂಗ್ಲಿಷ್ ಮಾತಾಡಿದರೆ ಮಾತ್ರ ಶ್ರೇಷ್ಠರು ಅಂತ ಸಾಮಾನ್ಯರೂ ಕೂಡ ಇಂಗ್ಲಿಷ್ನಲ್ಲಿ ಉಲಿಯುವಾಗ, ಅವರ ಮೊಮ್ಮಕ್ಕಳೂ ಕೂಡ ಕನ್ನಡದಲ್ಲೇ ಮಾತನಾಡಿದ್ದು ಆ ಕುಟುಂಬದ ಸರಳ ಮತ್ತು ಸ್ವಚ್ಛ ಸಂಪ್ರದಾಯಕ್ಕೆ ಸಾಕ್ಷಿ. ಇವರ ಶಿಷ್ಯ ಕೋಟಿ ಅಂಕೆಗೆ ಮೀರಿದ್ದು. ಮೊನ್ನೆ ಸೇರಿದ ಶಿಷ್ಯರು ಒಂದು ಅವಧಿಯಲ್ಲಿ ಐ ಐ ಎಂ ಬಿ ನಲ್ಲಿ ತರಬೇತಿ ಹೊಂದಿದವರ ಬಳಗ. ಇದೆ ರೀತಿಯಲ್ಲಿ ಅದೆಷ್ಟೋ ಮಂದಿಗೆ ಅವಕಾಶ ನೀಡಿದ ಚೇತನ ಇವರು. ಈ ಎಲ್ಲಾ ಕಾರಣಗಳಿಗಾಗಿಯೇ ಅವರನ್ನು ನಾನು ಬೃಹತ್ ಆಲದ ಮರ ಎಂದು ಭಾವಿಸಲು ಕಾರಣವಾಗಿದ್ದು.</div><div><br /></div><div><div class="separator" style="clear: both; text-align: center;"><a href="https://blogger.googleusercontent.com/img/a/AVvXsEiVXf0dfJ-xVLf466-alCB8BVoG9VyqFZxnY8sHS42R_2d84V_-MaBT3f7cvg2Abu5dWm9QdcWEVdGaPQCZId1jnvOLxuP-Torl6N_H2agHSvFYAwteX5j4ocB4Oj7nK9lQM6NffvEIdU9RNb5KVILOu8C1_EBCf67AXC8GCgIH22PhwbvVk_Mv-4Sy" style="margin-left: 1em; margin-right: 1em;"><img alt="" data-original-height="576" data-original-width="1280" height="213" src="https://blogger.googleusercontent.com/img/a/AVvXsEiVXf0dfJ-xVLf466-alCB8BVoG9VyqFZxnY8sHS42R_2d84V_-MaBT3f7cvg2Abu5dWm9QdcWEVdGaPQCZId1jnvOLxuP-Torl6N_H2agHSvFYAwteX5j4ocB4Oj7nK9lQM6NffvEIdU9RNb5KVILOu8C1_EBCf67AXC8GCgIH22PhwbvVk_Mv-4Sy=w474-h213" width="474" /></a></div><br /><br /></div><div><br /></div><div>ಡಾ. ಚಿಮ್ಮೋಜಿ ಸರ್ ಗೆ ನಾ ಕೇಳಿದೆ "ಇಷ್ಟು ಜನರನ್ನ ಒಟ್ಟಿಗೆ ಸೇರಿಸಿದ್ದು ಸವಾಲೇ ಸರಿ ಅಂತ. ಆಗ ಅವರು ಹೇಳಿದ್ದು, ನಾ ಸೇರಿಸಿಲ್ಲ ಪ್ರಶಾಂತ್ ಚಿಕ್ಕಮಲ್ಲಯ್ಯ ಸರ್ ಹೆಸರೇ ಅಂತದ್ದು. ಅವರ ಹೆಸರಿಗೆ ಇವರೆಲ್ಲ ಬಂದಿದ್ದು" ಅಂದರು. ಅದು ನಿಜ ಕೂಡ. ಅಷ್ಟು ಸರಳ ಬದುಕಿನ ಚಿಕ್ಕಮಲ್ಲಯ್ಯ ಸರ್ ಗೆ ಮತ್ತೊಮ್ಮೆ ನಮಸ್ಕರಿಸಿ ಹೊರಡುವಾಗ, "ಇರುವುದನ್ನ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ" ಎಂಬ ಡಿ ವಿ ಜಿ ಯವರ ಮಾತನ್ನ ತಮ್ಮ ಸಂಭಾಷಣೆಯಲ್ಲಿ ಪದೇ ಪದೇ ಹೇಳುತ್ತಾ ನೀವು ಇದನ್ನೇ ಅನುಸರಿಸಿ ಮತ್ತು ನೆಮ್ಮದಿಯಾಗಿರಿ ಅಂದು ಹರಸಿದರು. </div><div><br /></div><div><div class="separator" style="clear: both; text-align: center;"><a href="https://blogger.googleusercontent.com/img/a/AVvXsEjCVJMhH9Kj9PivHtLFxv1vc0qPa6nI39awElX8ipfnF4C_WGadVP6B1Nx7IOighVsfEYS_HcT5KkZ88oYcURqEaattqdTk2-e18WXwb9DTIULJtl6auNIrdECOx1M3fYcBvUKJLRnYlM-L19lLZmB8un7T06jS7s_x0I6gin_PaLxPRVvEktDYBCUW" style="margin-left: 1em; margin-right: 1em;"><img alt="" data-original-height="963" data-original-width="1280" height="240" src="https://blogger.googleusercontent.com/img/a/AVvXsEjCVJMhH9Kj9PivHtLFxv1vc0qPa6nI39awElX8ipfnF4C_WGadVP6B1Nx7IOighVsfEYS_HcT5KkZ88oYcURqEaattqdTk2-e18WXwb9DTIULJtl6auNIrdECOx1M3fYcBvUKJLRnYlM-L19lLZmB8un7T06jS7s_x0I6gin_PaLxPRVvEktDYBCUW" width="319" /></a></div><br /><div class="separator" style="clear: both; text-align: center;"><a href="https://blogger.googleusercontent.com/img/a/AVvXsEjzmfXp19ssczUkTCFSXLDiebuUVwCKtMOKegSnB41xdOFKQ0MpiUqRGQfyP7xa0JdTJ2ziAIhYl949sIKDHJrUTFF6Y0wrqdBc2N8gGectZuJFH6dSvWzQbO4eK-Q_CJUqLsCAKWmqj0A_b1o8SkGiy1TeAKBzEP3rd2H7NuWekmdmmEX0HSPa5134" style="margin-left: 1em; margin-right: 1em;"><img alt="" data-original-height="1200" data-original-width="1600" height="240" src="https://blogger.googleusercontent.com/img/a/AVvXsEjzmfXp19ssczUkTCFSXLDiebuUVwCKtMOKegSnB41xdOFKQ0MpiUqRGQfyP7xa0JdTJ2ziAIhYl949sIKDHJrUTFF6Y0wrqdBc2N8gGectZuJFH6dSvWzQbO4eK-Q_CJUqLsCAKWmqj0A_b1o8SkGiy1TeAKBzEP3rd2H7NuWekmdmmEX0HSPa5134" width="320" /></a></div><br /><br /></div><div>ಒಂದೊಳ್ಳೆ ಜೀವದ ಜೊತೆ ನೇರಾನೇರ ಮತ್ತು ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದ ಡಾ ಚಿಮಾಜಿ ಸರ್ ಅವರಿಗೆ ಕೃತಜ್ಞತೆ ಹೇಳುತ್ತಾ, ಅವರ ಸಾಧನೆಗೆ ಮತ್ತೊಮ್ಮೆ ಶುಭಾಶಯ ಹೇಳುತ್ತಾ ಇನ್ನೂ ಅನೇಕ ಸಾಧನೆಗಳು ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ. </div><p> </p><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><blockquote style="border: none; margin: 0 0 0 40px; padding: 0px;"><div style="text-align: left;">ಡಾ. ಪ್ರಶಾಂತ ಶೀರೂರು </div></blockquote></blockquote></blockquote></blockquote></blockquote></blockquote></blockquote></blockquote></blockquote></blockquote></blockquote></blockquote><div><br /></div><div><br /></div>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-52499537904854450062020-06-28T09:22:00.000-07:002020-06-28T09:22:58.484-07:00ಕೊರೋನಾ: ಬದುಕು ಮತ್ತು ಸಂಬಂಧಗಳ ಅವಲೋಕನ<div dir="ltr" style="text-align: left;" trbidi="on">
ಕೊರೋನಾ: ಬದುಕು ಮತ್ತು ಸಂಬಂಧಗಳ ಅವಲೋಕನ<br />
<br />
"ಛೆ....! ಯಾರ ಬರುವಿಕೆಯ ಸುಳಿವಿಲ್ಲ ಈ ದಾರಿಯಲ್ಲಿ. ಈಗ ನಾನೇನು ಮಾಡುವುದು. ಸಮಯ ಸುಮಾರಾಗುತ್ತಿದೆ. ಅಲ್ಲೇನಾಗಿದಿಯೋ ಏನೋ!" ರಮೇಶ ವಿಪರೀತ ಕಂಗಾಲಾಗಿದ್ದ. ದಾರಿ ಮಧ್ಯೆ ಬಿದ್ದ ದೊಡ್ಡ ಮರದಿಂದಾಗಿ ಸ್ವಿಫ್ಟ್ ಕಾರು ಮುಂದೆ ಹೋಗಲಾಗದಷ್ಟು ದಾರಿ ಮುಚ್ಚಿದೆ. ಊರಿಗೆ ಹೊಸಬನಾಗಿದ್ದ ರಮೇಶನ ಗಾಬರಿ ಹೆಚ್ಚಾಗಿ, ಅವಸರದಲ್ಲಿ ಮರ ತಳ್ಳುವ ವ್ಯರ್ಥ ಪ್ರಯತ್ನದಲ್ಲಿರುವಾಗಲೇ, ಬೆಟ್ಟಗೇರಿ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಅಂತ ದೊಡ್ಡಪ್ಪಗೌಡರು ಮತ್ತು ಅವರ ಕೆಲಸಗಾರರು ಅದೇ ದಾರಿಯಲ್ಲಿ ಬಂದರು.<br />
ದೊಡ್ಡಪ್ಪಗೌಡರು ಬಾರೀ ಗಡಿಬಿಡಿಯಲ್ಲಿದ್ದರು ಮತ್ತು ಪದೇ ಪದೇ ಆಕಾಶ ನೋಡಿ, "ಮಧಾಹ್ನದ ಒಳಗೆ ಉಳಿದಿರೋ ತೋಟಕ್ಕೆ ಔಷಧಿ ಹೊಡೆದು ಮುಗಿಸ್ಬೇಕು ಮಾರಾಯ. ಇಲ್ಲ ಅಂದ್ರೆ ಮಳೆ ಸಾಯ್ತದೇನೋ!. ಮೊನ್ನೆನೇ ಗುಂಡಗದ್ದೆ ತೋಟದ್ ಆದ್ ಮಾರನೇ ದಿನ ಇದುನ್ನು ಮುಗ್ಸ ಅಂದ್ರೆ ಎಂತದೋ ರಾಗ ಹಾಡ್ಕೊಂಡ್ ಬಂದ. ಮಳೆ ಏನರ ಬಂದು ಔಷಧಿ ತೊಳೆದು ಹೋಗ್ಬಕಲ ಇವತ್ತು" ಅಂತ ಔಷಧಿಯವನಿಗೆ ಬಯ್ತಾ ಬಂದೋರೆ....... ದಾರಿಮೇಲೆ ಬಿದ್ದ ಮರ ನೋಡಿ, "ಥೋ..... ಆತಲ, ಇವತ್ತು ತೋಟಕ್ಕೆ ಹೋದಂಗೆ" ಅಂತ ಕೆಲ್ಸದವರ ಮುಖನ ತಮ್ಮ ಕಣ್ಣುಹುಬ್ಬು ಬಿಗಿ ಮಾಡಿ ನೋಡಿದರು.<br />
<br />
"ಗೌಡ್ರೆ, ಸ್ವಲ್ಪ ಪಿರಿಪಿರಿ ಕಮ್ಮಿ ಮಾಡಿ ಬದಿಗೆ ಬನ್ನಿ" ಅಂದವನೇ ಔಷಧಿ ಹೊಡಿಯೋ ಕುಮಾರ, ಇರಿ, ಯಾರೋ ಮರ ತಳ್ತಾ ಇದಾರೆ ಅವ್ರ ಜೊತೆ ನಾವೂ ಸೇರಿ ತಳ್ಳೋಣ ಎಂದು ಮರ ಸರಿಸುವ ಅಪರಿಚಿತನ ಕೆಲಸಕ್ಕೆ ಸ್ಪಂದಿಸಿದ. ಅವನೊಂದಿಗೆ ವಯಸ್ಸು ಅರವತ್ತಾದರೂ ರೈತಾಪಿ ಜೀವನದಲ್ಲಿ ನಿವೃತ್ತಿ ಇಲ್ಲ ಎಂದು ಸಾರಿ ಹೇಳುವ ರಾಮಣ್ಣ ಮತ್ತು ಗೂಡ್ಸ್ ಗಾಡಿ ಡ್ರೈವರ್ ಕಿಶೋರ ಜೊತೆಗೂಡಿದರು. ಅಷ್ಟರಲ್ಲಾಗಲೇ, ವಾರದಿಂದ ಮಳೆಬಿದ್ದು ವಾತಾವರಣ ತಂಪಾಗಿದ್ದರೂ ರಮೇಶನ ಮುಖ ಬೆವತು ಹೋಗಿತ್ತು ಅಥವಾ ಹಾಗೆಂದುಕೊಳ್ಳಬೇಕಿತ್ತು. ರಮೇಶನಿಗೆ ಪಕ್ಕದಲ್ಲಿ ತನ್ನ ಸಹಾಯಕ್ಕೋ ಅಥವಾ ಪರಸ್ಪರರ ಸಹಾಯಕ್ಕೋ ಬಂದ ವ್ಯಕ್ತಿಗಳ ಪರಿವೆಯೇ ಇಲ್ಲ. ಮನಸ್ಸು ಅಣ್ಣನ ಉಸಿರಿಗಾಗಿ ಮಿಡಿಯುತಿತ್ತು. "ಸ್ವಲ್ಪ ಹೊತ್ತು ಕಣೋ ಬಂದೆ. ನನಗಾಗಿ... ದಯವಿಟ್ಟು ನನಗಾಗಿ ಜೀವ ಹಿಡಿದಿಟ್ಟುಕೋ" ಅಂತಾನೆ ಮರ ತಳ್ಳುತ್ತಿದ್ದ.<br />
<br />
ಕುಮಾರ, ಔಷಧಿ ಹೊಡೆಯುವವನಾದರೂ ಹೃದಯವಂತ. ಕಷ್ಟವನ್ನೇ ಹೆಚ್ಚಾಗಿ ಕಂಡ ಜೀವ. ಮಳೆಗಾಲದಲ್ಲಿ ಅಳುತ್ತಲೇ ಎಷ್ಟೋ ದಿನ ಮರ ಹತ್ತಿ ಔಷಧಿ ಹೊಡೆದು ಬಂದಿದ್ದ. ನಗುನಗುತ್ತಲೇ ಜೀವಿಸುವ ಕುಮಾರನ ಅಳು ಕಂಡವರು ಯಾರೂ ಇರಲಿಲ್ಲ. ಸ್ನಾತಕೋತ್ತರ ಪದವಿ ಪಡೆದಿದ್ದರೂ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಕೆಲಸ ಸಿಗದೇ, ಸಿಕ್ಕ ಕೆಲಸ ಮರ್ಯಾದೆ ವಂಚಿತ ಮಾಡಿದಾಗ, ತನ್ನ ಕುಟುಂಬದ ಕಷ್ಟ ಕಣ್ಣಿಗೆ ರೆಪ್ಪೆಯಾಗಿತ್ತು. ಕೊನೆಗೊಂದು ನಿರ್ಧಾರ ಮಾಡಿ, "ನಾನ್ಯಾಕೆ ನನ್ನೂರಲ್ಲೇ ಅನ್ನದ ಬದಲು ಗಂಜಿಯಾದರೂ ಸರಿ" ಹೌದು ಗಂಜಿಯಾದರೂ ಸರಿ ಊರಿಗೇ ಹೋಗುತ್ತೇನೆ ಅಂತ ಬಂದಿದ್ದ. ಅಂದಿನಿಂದ ಮಲೆನಾಡಿನ ಎಲ್ಲಾ ಕೆಲಸ ಗಳಲ್ಲಿ ಹಿರಿಯರಿಂದ ನೋಡಿ ಕಲಿತ ವಿಧ್ಯೆಯಿಂದ ಬದುಕು ಸಾಗಿಸುತ್ತಿದ್ದ. ಆಯಾ ಋತುಗಳಿಗೆ ಸಂಬಂದಿಸಿದ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ. ಹಲವರಿಗೆ ಮಾದರಿಯಾಗಿದ್ದ.<br />
ಮರ ತಳ್ಳುವಾಗ, ರಮೇಶನ ಸ್ವಗತ ವೊಂದು ರಮೇಶನ ಅರಿವಿಗೆ ಬಾರದೆ ಧ್ವನಿಯಾಗಿ ಪ್ರತಿಧ್ವನಿಸಿತು. "ಜೀವ ಹಿಡಿದಿಟ್ಟುಕೋ.............".ಕುಮಾರನ ಕರ್ಣ ತಲುಪಿದ ಆ ಧ್ವನಿಯಲ್ಲಿ ವೇದನೆಯನ್ನು ಗ್ರಹಿಸಿದ. ಬೆವರಿನಿಂದ ರಮೇಶನ ಮುಖದ ಮೇಲೆ ಹನಿ ಮೂಡಿದ್ದವು. ಜೊತೆಗೆ ಕಣ್ಣೀರ ಹನಿ ಒಂದೊಂದೇ ಜಾರಿದ್ದರೂ ಅದು ಹೆದ್ದಾರಿಯಂತೆ ಕೆನ್ನೆಮೇಲೆ ದಾರಿ ಮಾಡಿತ್ತು. ಕುಮಾರ ಈಗ ಈ ಅಪರಿಚಿತ ಯಾರೆಂದು ಊಹಿಸಿದ. ಕುಮಾರ ತಡ ಮಾಡದೆ ಮರವನ್ನು ಭೀಮ ಬಲ ಮಾಡಿ ಸರಿಸಿದ ಮತ್ತು ರಮೇಶನಿಗೆ, "ಧೈರ್ಯವಾಗಿರಿ ನಿಮ್ಮೊಂದಿಗೆ ನಾ ಬರುತ್ತೇನೆ" ಎಂದು ಸಮಸ್ಯೆ ಕೇಳದೆ ರಮೇಶನ ನೋವನ್ನು ಗ್ರಹಿಸಿ ಸಹಾಯ ಹಸ್ತ ನೀಡಿದ್ದ. "ಮಲೆನಾಡೆಂದರೆ ಹಾಗೆ ಒಣ ಬೀಜ ಕಂಡರೂ ಸಾಕು ಹನಿ ನೀರು ಸೋಕಿಸಿಯಾದರೂ ಮೊಳಕೆಯೊಡೆಸುತ್ತದೆಯಲ್ಲಾ ಹಾಗೇ ಮಲೆನಾಡಿಗರು ಯಾರ ಎದೆಯಾಳದಲ್ಲಾದರೂ ಸಣ್ಣ ನೋವಿನ ಎಳೆ ಕಂಡರೂ ಕೈ ನೀಡುತ್ತಾರೆ ಸಹಾಯಕ್ಕೆ" ಕುಮಾರನು ಹಾಗೇ ಮಾಡಿದ್ದ.<br />
<br />
ಗೌಡ್ರೆ,"ದಮ್ಮಯ್ಯ ಅಂತೀನಿ ಇವತ್ತೊಂದಿನ ಬೇಡ. ಮಳೇನು ಬರಾನ್ಗೆ ಆಗೇದೇ ಸುಮ್ನೆ ಔಷಧಿ ನೀರ್ಪಾಲು ಮಾಡದು ಬ್ಯಾಡ. ಈಗ್ಲೇ ಲೇಟ್ ಆಗ್ಯದೆ" ಎಂದು ಕುಮಾರ ಗೌಡ್ರಿಗೆ ಕೇಳಿದ. ಕುಮಾರನಿಗೆ ಹೇಗಾದ್ರು ಮಾಡಿ ರಮೇಶನ ನೋವಿಗೆ ಸ್ಪಂದಿಸಬೇಕೆಂಬ ಹಪಾಹಪಿ. "ಆತು ಮಾರಾಯ, ನೀ ಎಂತಾರು ಮಾಡು. ಊರಿಗೊಬ್ಳೆ ಪದ್ಮಾವತಿ ಅಂತಾರಲ್ಲ ಹಂಗಾಗಿಯ ನೀನು" ಅಂತ ಒಂತರಾ ಅಸಮಾಧಾನದ ಧಾಟಿಯಲ್ಲೇ ಕಿಶೋರನಿಗೆ ಗೂಡ್ಸ್ ಗಾಡಿ ಮನೆ ಕಡೆ ತಿರುಗಿಸಲು ಹೇಳಿದರು. ರಾಮಣ್ಣ ನೀ ಬಾರ ಮನೆಗೆ ಹೈಗನ್ ಅಳಬೇ ತರಬೇಕಂತೆ ನಮ್ಮನೇಳಿಗೆ. ಒಂಚೂರ್ ಎಲ್ಲಾರ್ ಹುಡ್ಕಿ ತಂದ್ಕೊಟ್ ಹೋಗು ಮಾರಾಯ ಅಂತನ್ನೋಷ್ಟರಲ್ಲಿ....., ರಾಮಣ್ಣಾ......, "ಬೆಟಗೇರಿ ಹಡ್ಡಿಲಿ ಸಿಗ್ತವೆ ನೋಡಿ" ಕುಮಾರ, ರಮೇಶನ ಕಾರಿನ ಬಾಗಿಲು ತೆಗಿಯುತ್ತಲೇ ಹೇಳಿದ. "ನೀವೂ.....! ನೀವೆಲ್ಲಿಗೆ ಬರುವವರು" ಎಂದು ಕೇಳುತಿದ್ದ ರಮೇಶನ ಮಾತು ಮುಗಿಸುವ ಮೊದಲೇ..... ನೀವು ಕಾನುಮನೆಯವರು ಅಲ್ವ? ಪ್ರಶ್ನಿಸಿದ ಕುಮಾರ. ಕ್ಷಣ ರಮೇಶ ಪರಿಸ್ಥಿತಿಯಿಂದ ಹೊರಬಂದು, ಹಾ.......... ಹೌದು, ನಾ ಕಾನುಮನೆಯವ. ನೀವ್ ಹೇಗೆ ಗುರುತಿಸಿದಿರಿ ನನ್ನ? ಅಯ್ಯೋ ಅದಿರಲಿ ನಾನೀಗ ಆದಷ್ಟು ಬೇಗ ಹೊಸಪೇಟೆ ಅನ್ನೋ ಊರಿಗೆ ಹೋಗಬೇಕು.ಅಲ್ಲಿ ಮಾಲತಿ ನದಿಗೆ ಹೊಸ ಸೇತುವೆ ಮಾಡುವ ಜಾಗದ ಹತ್ತಿರ ನನ್ನ ಅಣ್ಣನ ಜೀವ ಅಪಾಯದಲ್ಲಿದೆ. ನಂಗೆ ಫೋನ್ ಮಾಡಲೂ ಆಗುತ್ತಿಲ್ಲ ಅವರಿಗೆ. ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಎಂದು ಒಂದೇ ಸಮನೆ ರಮೇಶ ಬಡಬಡಿಸಿದ. ಅವನ ದುಃಖಕ್ಕೆ ಕಣ್ಣೀರು ಮತ್ತು ಸಿಂಬಳ ಜೊತೆಯಾಗಿ ಸ್ಪಂದಿಸಿದವು ಮತ್ತು ಕುಮಾರ, "ನಾನೂ ಬರುತ್ತೇನೆ ಆದರೆ, ಅದಕ್ಕೂ ಮೊದಲು ನಮ್ಮ ಮನೆಗೆ ಹೋಗೋಣ ಅಂದ". ಪರಿಸ್ಥಿತಿಯ ಗಂಭೀರತೆ ನಿಮಗೆ ಅರ್ಥವಾಗದಿದ್ದರೆ ನಿಮ್ಮ ಅವಶ್ಯಕತೆ ನಂಗೆ ಬೇಡ. ನೀವು ಕಾರಿಂದ ಇಳಿಯಿರಿ ಮತ್ತು ನನಗೆ ದಾರಿ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈಗಾಗಲೇ ಇಲ್ಲೇ ಕಾಲು ಗಂಟೆ ಆಯ್ತು ಎಂದು ಗಡಿಬಿಡಿಯಿಂದ ಒದ್ದಾಡಿದ ರಮೇಶ.<br />
<br />
"ಈ ಮುತುವರ್ಜಿ, ಅಕ್ಕರೆ, ಕಾಳಜಿ, ಪ್ರೀತಿ, ಬಾಂಧವ್ಯ ಈಗ್ಯಾಕೆ ರಮೇಶ. ವಿಧ್ಯೆ ಕಲಿಸಬೇಕಾದದ್ದು, ಸಂಸ್ಕಾರವನ್ನೇ ಹೊರತು ಸಮಯ ಸಾಧಕತನ ಅಲ್ಲ. ಕುಮಾರನ ಬಿರುನುಡಿಗಳು ರಮೇಶನಲ್ಲಿ ಗೊಂದಲ ಮೂಡಿಸಿತು."ನಿಂಗೆ ನಾಚಿಕೆ ಆಗಬೇಕು, ಒಡ ಹುಟ್ಟಿದವನನ್ನ ಹೀನಾಯವಾಗಿ ಕಂಡ ನೀನು ಮನುಷ್ಯನ?" ಎಂದು ಆಕ್ರೋಶಿತನಾಗಿ ಮಾತಿನಲ್ಲೇ ತಿವಿಯುತನಿದ್ದ ಕುಮಾರ. "ನಾ ನಿಮಗೆ ಗೊತ್ತಾ?" ರಮೇಶ ಅನ್ನೋಷ್ಟರಲ್ಲಿ, ನಡಿ ನಮ್ಮನೆಗೆ ನಿಮ್ಮಣ್ಣ ನಮ್ಮನೇಲಿ ಇದ್ದಾನೆ.<br />
<br />
ಇಬ್ಬರೂ ಕುಮಾರನ ಮನೆಗೆ ಹೊರಟರು. ಕಾರು ಚಲಿಸುತ್ತಿತ್ತು. ಕೊಂಚ ಸಮಯ ಒಬ್ಬರಿಗೊಬ್ಬರು ಮಾತನಾಡದೆ ಮೌನವಾಗಿದ್ದರೂ ಸಹ ರಮೇಶನ ಪಶ್ಚಾತ್ತಾಪದ ಮತ್ತು ಕುಮಾರನ ಆಕ್ರೋಶದ ಉಸಿರು ಜೋರಾಗಿ ಮಾತನಾಡುತಿತ್ತು.<br />
<br />
ಕಾಲೇಜಿನ ಸ್ಪೋರ್ಟ್ಸ್ ಡೇ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಬಾಕಿ ಉಳಿದಿದ್ದವು. ಪ್ರತಿ ವರ್ಷ ಫೆಬ್ರುವರಿ ಮಾರ್ಚ್ ತಿಂಗಳೆಂದರೆ ದಿನೇಶನ ಕಾಲೇಜಿನಲ್ಲಿ ಉಲ್ಲಾಸದ ದಿನಗಳವು, ವರ್ಷ ಪೂರ್ತಿ ಪಾಠ ಪ್ರವಚನ ಅಂತ ವಿದ್ಯಾರ್ಥಿ ಮತ್ತು ಉದ್ಯೋಗಿಗಳೆಲ್ಲರೂ ಮಾನಸಿಕವಾಗಿ ದಣಿದಿದ್ದಾಗ ಈ ಸಮಯ ಎಲ್ಲರಿಗೂ ಒಂದು ರೀತಿಯ ಮನೋಲ್ಲಾಸದ ಸಮಯ. ದಿನೇಶ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ. ಪಾದರಸದಂತಿದ್ದ ಮಧ್ಯ ವಯಸ್ಸ್ಕ ದಿನೇಶ, ಸಾಂಸ್ಕೃತಿಕ ಉತ್ಸವದ ನಿರೀಕ್ಷೆಯಲ್ಲಿರುವಾಗಲೇ, ಚೀನಾದ ವುಹಾನ್ ನಲ್ಲಿ ಕೊರೊನ ವೈರಸ್ ದಾಳಿಯಿಂದಾದ ಮಾರಣ ಹೋಮದ ಬಗ್ಗೆ ಸುದ್ದಿ ನೋಡಿದ. ಮತ್ತು ದೂರದೂರಿನ ವಿಷಯ ಅಂತ ತಳ್ಳಿಹಾಕಿದ್ದ. ಆದ್ರೆ ಕೆಲವೇ ಸಮಯದಲ್ಲಿ ಕಾಲೇಜಿನಲ್ಲಿ ಕೊರೊನ ಬಂದಿದೆಯಂತೆ. ಯಾರಿಗಂತೆ; ಅವರಿಗಂತೆ; ಇವರಿಗಂತೆ ಹೀಗೆ ಅಂತೇ ಕಂತೆಗಳು ಶುರುವಾದವು.ಇಡೀ ಜಗತ್ತು ಕೊರೋನಾದ ಹರಡುವಿಕೆ ಮತ್ತು ಅದರ ರೋಗ ಲಕ್ಷಣಗಳನ್ನ ಪ್ರಸಾರ ಮಾಡಲಾರಂಭಿಸಿದಾಗ ದಿನೇಶನಿಗೂ ಮೈ ಬೆಚ್ಚುಗಾಯಿತು. ಯಾವತ್ತೂ ಮಾಸ್ಕ್ ಹಾಕದವನು ಮಾಸ್ಕ್ ಹಾಕಲು ಶುರು ಮಾಡಿದ ಮತ್ತು ಅದನ್ನ ಅನುಮಾನಿಸಿದವರಿಗೆ, ಛೆ ಛೆ ಅಂತದ್ದೇನಿಲ್ಲ ಡಸ್ಟ್ ಗೆ ಹಾಕಿದ್ದು ಅಂತ ತನ್ನನು ತಾನೇ ಸಮರ್ಥಿಸಿಕೊಳ್ಳುತ್ತಿದ್ದ. ಶೀತಕ್ಕೋ, ಉಷ್ಣಕ್ಕೋ ಮೂಗು ಸೋರಿದರೆ, ತಲೆನೋವು ಬಂದರೆ, ಮೈ ಬಿಸಿಯಾಗಿದ್ದರೆ ಕೊರೊನ ರೋಗ ಲಕ್ಷಣದ ಗೈಡ್ಲೈನ್ಸ್ ನೋಡುತ್ತಿದ್ದ. "ಹೌದು, ನಂಗೆ ಕೊರೊನ ಬಂದಿದೆ. ನಾ ಮನೆಗೆ ಹೋಗುವುದು ಬೇಡ, ಸ್ವಲ್ಪ ದಿನ ಫ್ರೆಂಡ್ಸ್ ಮನೇಲಿ ಇರೋಣ", ಅಂತೆಲ್ಲ ಯೋಚಿಸುತ್ತಿದ್ದ. ಅದಕ್ಕೆ ಸರಿಯಾಗಿ ಖಾಯಿಲೆ ಹರಡುವಿಕೆ ಜಾಸ್ತಿಯಾಗಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶವನ್ನು ಲಾಕ್ ಡೌನ್ ಅಂತ ಘೋಷಿಸಿದಾಗ, ದಿನೇಶ ಮಡದಿ ಮಗು ಜೊತೆಗೆ ಊರಿನ ದಾರಿ ಹಿಡಿದ. ತನ್ನ ಹತ್ತಿರದ ಸಂಬಂಧಿಯೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಮಲೆನಾಡಿನ ತೀರ್ಥಹಳ್ಳಿಯ, ಬೆಜ್ಜವಳ್ಳಿ ಸಮೀಪದ ‘ಕಾನುಮನೆಗೆ’ ಹೊರಟ. ದಿನೇಶನಿಗೆ ದಾರಿ ಸಾಗಿದಂತೆ ಮತ್ತೆ ತಾನು ಹುಟ್ಟಿ ಬೆಳೆದ ಊರಿನ, ತನ್ನ ಮನೆಯ ಅಪ್ಪ ಅಮ್ಮ, ತಮ್ಮ ಮತ್ತುಅವನ ಸಂಸಾರ ಎಲ್ಲ ಮೆಲುಕು ಹಾಕುತ್ತಾ ಅವರೊಂದಿಗೆ ಸಮಯ ಕಳೆಯಲು ಸೂಕ್ತ ಎಂದು ಖುಷಿಯಿಂದ ತೇಲಾಡುತ್ತಿದ್ದ. ಮೂಲತಃ ದಿನೇಶ ನಾಲ್ಕಕ್ಷರ ಕಲಿತಿದ್ದರಿಂದ ಮತ್ತು ಮನೆಯ ಕಡು ಬಡತನ ಕಾರಣದಿಂದ ಊರು ಬಿಟ್ಟು ದುಡಿಯಲು ಬೆಂಗಳೂರಿಗೆ ಹೋಗಿದ್ದನಾದರೂ ತನ್ನ ಹೃದಯದ ಬೆಸುಗೆ ಅವನ ಹಳ್ಳಿಯೊಂದಿಗೆ ಬೆಸೆದಿತ್ತು. ‘ಕಾನುಮನೆ’ಯೂ ಹೆಸರಿಗೆ ತಕ್ಕಂತೆ ದಟ್ಟಾರಣ್ಯದಿಂದ ಕೂಡಿದ ಊರಾಗಿತ್ತು. ತಾನು ಬಾಲ್ಯದಲ್ಲಿ ಓಡಾಡಿದ ಎಲ್ಲ ಕಡೆ ಸುತ್ತಬೇಕು, ತನ್ನ ಮಗನನ್ನು ಅಲ್ಲೆಲ್ಲ ಸುತ್ತಿಸಬೇಕೆಂದು ಕಾರಲ್ಲಿ ದಾರಿಯುದ್ದಕ್ಕೂ ಕಣ್ಣು ಬಿಟ್ಟುಕೊಂಡೇ ಕನಸು ಕಾಣುತ್ತಿದ್ದನು. ಬಾಲ್ಯದ ದಿನಗಳ ನೆನಪಲ್ಲೇ ಮುಗಳ್ನಗು ಬಂದೊಗುತಿತ್ತು. ಅವನಿಗರಿವಿಲ್ಲದೆ ಆ ದಿನಗಳ ತುಂಟಾಟಗಳು ತುಟಿಮೇಲೆ ಪಿಸುಮಾತಾಗಿ ಆ ಕ್ಷಣದಲ್ಲಿಒಬ್ಬರಿಗೊಬ್ಬರ ನಡುವೆ ಸಂಭಾಷಣೆ ನಡೆಸುತ್ತಿದ್ದವು. ಆ ನೆನಪುಗಳ ಬುತ್ತಿಯಲ್ಲಿ, ಒಂದಿನ, “ನಾಳೆ ಬೇಗ ಬಾರೋ ಗುಡ್ಡದ ತುದಿಗೆ ಹೋಗಿ ನೇರಳೆ ಹಣ್ಣು ತರೋಣ ಅಂತ ರಾಘು ಹೇಳಿದ್ದು, ಅದರ ಬೆನ್ನಲ್ಲೇ.... ನಾಗರತ್ನನ ಮರ ಹತ್ಸೋಣ ಕಣ ಅಂತ ಸುರೇಶ ಕಿಸಿಕ್ ಅಂತ ನಕ್ಕಿದ್ದು, ಸುರೇಶನ ದುರ್ಬುದ್ದಿ ಅರಿತ ದಿನೇಶ ಅವತ್ತು "ಥೂ... ಎಂಥದ ಹಂಗಂತೀಯಲ ಮಂಡೆ ಸಮ ಇಲ್ಲನ" ಅಂದಿದ್ದು ನೆನಪಾಗಿ, ಕಾರಲ್ಲೂ ತನಗರಿವಿಲ್ಲದೆ, "ಥೂ... ಎಂಥದ ಹಂಗಂತೀಯಲ ಮಂಡೆ ಸಮ ಇಲ್ಲನ" ಅಂತ ಜೋರಾಗಿ ಅಂದೇ ಬಿಟ್ಟ”. ತಿಪಟೂರಿನ ಹತ್ತಿರ ಹೈವೇಯಲ್ಲಿ ಗಾಳಿ ಸೀಳುತ್ತ ಹೊರಟ ಎರ್ಟಿಗಾ ಕಾರು ಓಡಿಸುತ್ತಿದ್ದ, ಸಂಬಂಧದಲ್ಲಿ ಭಾವ ಆಗಬೇಕಾದ ರೋಹಿತ್ "ಏನೋ ಅಂದ್ಯಲಾ ನೀನು" ಅಂದ. ದಿನೇಶ ಎಚೆತ್ತುಕೊಂಡು, "ಓಯ್ ಸರಿಯಾಗಿ ಗಮನ ಕೊಟ್ಟು ಗಾಡಿ ಓಡ್ಸು. ನಿದ್ರೆ ಬಂದ್ರೆ ಕೊಡು ಓಡಿಸ್ತಿನಿ. ನಿದ್ರೆಗಣ್ಣಲಿ ಏನೇನೋ ಹೇಳ್ಬೇಡ ಅಂತ" ಅವನಿಗೆ ಮೆಲುವಾಗಿ ಗದರಿಸಿ ತಾನು ವಾಸ್ತವಕ್ಕೆ ಬಂದ. ಅಲ್ಲಿಂದ ನಂತರದ ದಾರಿ ರೋಹಿತ್ ನೊಂದಿಗೆ ತಮಾಷೆ ಮಾಡುತ್ತ, ಕಳೆದುಕೊಳ್ಳುತ್ತಾ ಸಾಗಿತು. ರೋಹಿತ್ಗೆ "ನಿದಾನ ಕಣ, ನಿದಾನ ಕಣ" ಅಂತ ದಿನೇಶ ನಿದ್ರೆಗೆ ಜಾರಿದ್ದ.<br />
<br />
ಬೆಳಗ್ಗಿನ ಜಾವ ಮನೆ ಎದುರಿಗೆ ಕಾರು ನಿಲ್ಲಿಸಿ ರೋಹಿತ್, "ಭಾವ ಇಳಿ ಮಾರಾಯ" ಅಂತ ಹೇಳಿದಾಗಲೇ ದಿನೇಶ ಎಚ್ಚರಾಗಿದ್ದು. ಹೆಂಡತಿ ಮಗುವಿನೊಂದಿಗೆ ಕಾರಿಂದ ಇಳಿದು ಹದಿನೈದು ದಿನಕ್ಕಷ್ಟಾಗುವ ಲಗ್ಗೇಜಿನೊಂದಿಗೆ ಮನೆ ಗೇಟ್ ತೆಗೆಯುವಷ್ಟರಲ್ಲಿ, ದಿನೇಶನ ತಮ್ಮ ರಮೇಶ ಅತೀವ ಆನಂದದಿಂದ, ಏಯ್, ಹೆಂಗಿದಿಯೋ. ಇಲ್ ಕೊಡು ನಾ ಹಿಡಕುತಿನಿ ಬ್ಯಾಗ್ ನಾ, ಅತ್ತಿಗೆ ಪಾಪು ಕೊಡ್ರಿ, ಮುದ್ದು ಮಗನೆ ಅಂತ ಮಗುವನ್ನು ಮುದ್ದಾಡಿದ. ಸಂತೋಷದ ಉತ್ತುಂಗದಲ್ಲಿದ್ದ ರಮೇಶನಿಗೆ, ಅಣ್ಣ ಊರಿಗೆ ಬಂದಿದ್ದು ಅವನನ್ನ ಚಿಕ್ಕ ಮಗುವಿನಂತೆ ಮಾಡಿತ್ತು. ಬೆಳಿಗ್ಗೆ ಬೇಗ ಎದ್ದು ಬಿಸಿನೀರು ಕಾಯಿಸಿ ಅಣ್ಣಂಗೆ ಸ್ನಾನ ಮಾಡಲು ಹೇಳಿದ. ಅಣ್ಣ ತಮ್ಮ ಇಬ್ಬರು ಗದ್ದೆ, ತೋಟಕ್ಕೆ ಹೋದರು. ಮನೆಯಲ್ಲಿ ಅಪ್ಪ ಅಮ್ಮ ಮತ್ತು ಇಬ್ಬರು ಸೊಸೆಯಂದಿರು ಮಕ್ಕಳು ಎಲ್ಲ ಸೇರಿ ಕೂಗಾಟ ಕಿರುಚಾಟ ಸೂರ್ಯನಿಗಿಂತ ಮೊದಲೇ ಶುರುವಾಗಿತ್ತು, ಮನೆ ಒಂಥರಾ ಹಣ್ಣು ಬಿಟ್ಟ ಆಲದ ಮರ ಆಗಿತ್ತು. ಎಲ್ಲರ ಸದ್ದು ಮರದಲ್ಲಿರೋ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಇಂಪಾಗಿತ್ತು. ಒಂದು ವಾರ ಹೀಗೆ ನಡೆಯಿತು. ಆ ವಾರ ಪೂರ್ತಿ ದಿನೇಶ ಅಕ್ಕಪಕ್ಕದ ಮನೆ, ಬಾಲ್ಯದಲ್ಲಿ ಓಡಾಡಿದ ಜಾಗ ಎಲ್ಲ ಸುತ್ತಾಡಿದ. ಮನಸ್ಸು ಏನೋ ಕಳೆದುಕೊಂಡದ್ದು ಮತ್ತೆ ಸಿಕ್ಕಿದಷ್ಟು ಖುಷಿಯಾಗಿತ್ತು. ಅಣ್ಣನಿಂದ ಯಾವ ಕೆಲಸ ಮಾಡಲು ಬಿಡುತ್ತಿರಲಿಲ್ಲ ರಮೇಶ. ಮನೆಯಲ್ಲಿ ಕೂತೂ ಕೂತೂ ಸಮಯ ಕಳೆಯುವುದು ಕಷ್ಟ ಎನಿಸಿದಾಗ ದಿನೇಶ ಊರ ಹೊರಗೆ ಒಬ್ಬಂಟಿಯಾಗಿ ಅಲ್ಲಿ ಇಲ್ಲಿ ಸುತ್ತಾಡಲು ಶುರು ಮಾಡಿದ. ಆಗಲೇ ಅವನಿಗೆ ಭಯಾನಕ ಸತ್ಯ ಅರಿವಾಗುತ್ತಾ ಹೋಯಿತು. ಮಲೆನಾಡಿನ ಅಮಾಯಕ ಜನರಲ್ಲಿ ಮಾಫಿಯಾಗಳು ಬಂದು ಸೇರಿಕೊಂಡಿದ್ದಾರೆ. ಎಲ್ಲವೂ ಈಗ ಮಲೆನಾಡಿನಲ್ಲಿ ದಂಧೆಗಳಾಗಿದ್ದಾವೆ. ಮುಗ್ಧ ಮಕ್ಕಳಲ್ಲಿ ಕ್ರೌರ್ಯ ಮೈಗೂಡಿದೆ. ಪ್ರಕೃತಿ ಸಂಪತ್ತೆಲ್ಲ "ಕೊಪ್ಪರಿಗೆ ಹೊನ್ನಾಗಿ" ಸರಳರು, ಸಜ್ಜನರು, ಬಡವರ ಬಂಧು, ರೈತ ಬಂಧು, ಪರಿಸರ ಪ್ರೇಮಿ, ಎಂಬ ಹಣೆಪಟ್ಟಿ ತಮಗೆ ತಾವೇ ಹಾಕ್ಕೊಂಡವರ ಮನೆಯ ಇಟ್ಟಿಗೆಯಾಗಿವೆ. ಕೊಳ್ಳೆ ಹೊಡೆದ ಸಂಪತ್ತಲ್ಲಿ ಅಲ್ಪ ಸ್ವಲ್ಪ ಬಡವರು ದಲಿತರಿಗೆ ಒರೆಸಿ, ಅವರನ್ನೇ ಅಸ್ತ್ರವಾಗಿಸಿ ಅವ್ರ ಹಿಂದೆ ಅಡಗಿದ್ದಾರೆ. ದಿನೇಶನಿಗೆ ಅರಿವಾಯಿತು. ನಾನೂ ಮತ್ತು ನನ್ನಂತ ಅನೇಕರು ಊರು ಬಿಟ್ಟು ಪರ ಊರಲ್ಲಿ ಅನ್ನ ಹುಡುಕಲು ಹೊರಟರೆ, ಊರಲ್ಲಿ ಅಪರಿಚಿತರಿಂದ ಮಲೆನಾಡಿನ ಸಂಪತ್ತು ದಿನೇ ದಿನೇ ಖಾಲಿ ಆಯಿತು. ಸ್ವಚಂದವಾಗಿ ಹರಿಯುತ್ತಿದ್ದ ನದಿ ಬತ್ತಿ ಹೋಗಿದೆ. ಕಾರಣ ಮರಳು ದಂಧೆ. ಡ್ರಗ್ ಮಾಫಿಯಾ, ಹೊಲದಲ್ಲಿ ರಾಗಿ ಚೆಲ್ಲಿದಂತೆ ಮಲೆನಾಡಿನಲ್ಲಿದ್ದ ಗಂಧದ ಮರದ ಸುಳಿವೇ ಇಲ್ಲ. ಅಬ್ಭಾ, ದಿನೇಶ ಕಂಗಾಲಾಗಿ ಹೋದ. ಇದಾ ನನ್ನೂರು. ಇದಾ ಮಲೆನಾಡು. ತನ್ನನು ತಾನು ನಂಬದಾದ. ತನ್ನೂರಲ್ಲೇ ಅವನು ಪರಕೀಯನಾಗಿದ್ದ. ಮೂಲ ನಿವಾಸಿಯೊಬ್ಬ ವಲಸೆ ಹೋದರೆ ತನ್ನ ವಾಸ ಸ್ಥಳ ಹೇಗಾಗುತ್ತದೆ ಎಂದು ಅರಿಯಲು ಮಲೆನಾಡು ಸಾಕ್ಷಿ. ದುಃಖ ಬಂತಾದರೂ ತಪ್ಪು ನಾನು ಮತ್ತು ನನ್ನಂತ ರೀತಿ ವ್ಯವಸಾಯ ಮರೆತು ದೂರದ ಬೆಟ್ಟ ಅಪ್ಪಿಕೊಂಡ ಎಲ್ಲರದ್ದಾಗಿತ್ತು ಎಂಬುದು ಮನವರಿಕೆಯಾಯಿತು. ಮಲೆನಾಡು ಎಂಬ ಮನೆಯನ್ನು ನಾವೆಲ್ಲಾ ಒಬ್ಬೊಬ್ಬರಾಗಿ ಖಾಲಿ ಮಾಡಿದಾಗ ಕಿರಾತಕರು ಎಂಬ ಉಡ ಹೊಕ್ಕಂತಾಯಿತು ಎಂದು ಭಾವಿಸಿದ. ನನ್ನ ಮತ್ತು ನನ್ನಂತವರಿಂದಾದ ತಪ್ಪಿಗೆ ಯಾರನ್ನು ದೂಷಿಸಿ ಪ್ರಯೋಜನವೇನೆಂದು ದಿನೇಶ ನಿಟ್ಟುಸಿರುಬಿಟ್ಟ.<br />
ಭಾರವಾದ ಹೆಜ್ಜೆಯಿಂದ ಮನೆ ಕಡೆ ಬಂದಾಗ ಸುದ್ದಿವಾಹಿನಿಯೊಂದು ಅತ್ಯಂತ ಸಂತೋಷದಿಂದ, ಅವರ ನಿರೀಕ್ಷೆಗೆ ಸಿಕ್ಕ ಜಯ ಎಂಬಂತೆ, ಬ್ರೇಕಿಂಗ್ ನ್ಯೂಸ್ ಹೇಳುತ್ತಲಿತ್ತು. ಅದು, "ಲಾಕ್ಡೌನ್ ಮತ್ತೆ ನಿರ್ಧಿಷ್ಟ ಅವಧಿಯ ವರೆಗೆ ಮುಂದುವರಿಕೆ". ಹೌದು, ದೇಶದಲ್ಲಿ ಲಾಕ್ಡೌನ್ ಮತ್ತೆ ಹದಿನೈದು ದಿನಕ್ಕೆ ಮುಂದೊಯಿತು. ದುಡಿಮೆಗಾಗಿ ವಲಸೆ ಹೋದವರೆಲ್ಲ ಊರಿಗೆ ವಾಪಾಸಾಗಿದ್ದರು. ಮಲೆನಾಡಿಗೆ ಕಾಲಿಟ್ಟವರಲ್ಲಿ ಅನೇಕರು ಊರಿನ ಬೇರೆ ಜಾಗಗಳಿಗೆ ಕಣ್ಣು ಹಾಕಿದರು. ಊರಲ್ಲಿದ್ದ ಗೋಮಾಳ, ಬ್ಯಾಣ, ಬಯಲು, ಕಾಡು ಈಗ ಜೆಸಿಬಿ ಗಳಿಂದ ಗುಪ್ತವಾಗಿ ಮಟ್ಟಸವಾಗಿ, ಬೋರೆವೆಲ್ ಗಳ ಪಾಯಿಂಟ್ ಗಳಾಗಿ, ಬೇಲಿಗಳಾಗಿ, ಅಡಿಕೆ ಸಸಿಗಳ ಆಗಮನಕ್ಕೆ ತಯಾರಿ ನಡೆಸಿದೆ. ಊರಿನ ಒಂದಿಂಚೂ ಬಿಡದೆ ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯ ಅತ್ಯಾಚಾರ ಮಾಡಲು ಶುರು ಮಾಡಿದರು. ದಟ್ಟ ಕಾಡಿದ್ದ ಊರು ಕೇವಲ ಒಂದು ತಿಂಗಳಲ್ಲಿ ವಾಣಿಜ್ಯ ಬೆಳೆಗಳ ಆವಾಸ ಸ್ಥಾನವಾಯ್ತು. ಸ್ಪರ್ಧೆಗೆ ಬಿದ್ದವರಂತೆ ನಿಸರ್ಗ ನಾಶ ನಡೆಸಿದರು. ರಕ್ಷಿಸಬೇಕಾದ ಅಧಿಕಾರಿಗಳು, ಅನಾಯಾಸವಾಗಿ ಮನೆಗೆ ಬಂದು ಬೀಳುತ್ತಿದ್ದ ಕಾಂಚಾಣದ ಸೀರೆಯುಟ್ಟಿದ್ದರು. ಎಲ್ಲರಂತೆ ದಿನೇಶನೂ ತನ್ನ ತಮ್ಮನಿಗೆ ಹೇಳಿದ, "ಅಲ್ಲಿ ನಮ್ಮ ಜಮೀನಿನ ಮೇಲ್ಗಡೆ ಸ್ವಲ್ಪ ಸರ್ಕಾರೀ ಜಾಗಕ್ಕೆ ಬೇಲಿ ಹಾಕಿದ್ದೆ ಅಂದಿದ್ದೆ ಅದೇನಾಯ್ತು. ಬಾ ಅಲ್ಲಿ ಅಡಿಕೆನಾದ್ರೂ ನೆಡೋಣ" ಅಂದ. ರಮೇಶ, "ಆಯ್ತು ಹಾಗೇ ಮಾಡೋಣ" ಅಂತಾನೂ ಅಂದಿದ್ದ. ಇದ್ರೆಲ್ಲಾದರ ಜೊತೆಗೆ ದಿನೇಶನಿಗೆ ಈಗ ತನ್ನ ವೃತ್ತಿ ಮತ್ತು ದುಡಿಮೆಯ ಚಿಂತೆಯಾಯಿತು ಮತ್ತು ಅದನ್ನು ತೋರಗೊಡದೆ ಮನೆಯವರೊಂದಿಗೆ ಕಾಲ ಕಳೆಯುತಿದ್ದ. ವಾರ ಪೂರ್ತಿ ರಮೇಶ ಅಣ್ಣನಿಗೆ ಕೂರಿಸಿ ಊಟ ಹಾಕುತ್ತಿದ್ದವನು, ಅಣ್ಣ ಬಾ ತೋಟಕ್ಕೆ ಹೋಗೋಣ, ಗದ್ದೆಗೆ ಹೋಗೋಣ, ಸ್ವಲ್ಪ ಇಟ್ಟಿಗೆ ಎತ್ತಿ ಬೇರೆ ಕಡೆ ಇಡೋಣ ಹೀಗೆ ನಿಧಾನವಾಗಿ ಒಂದೊಂದಾಗಿ ಕೆಲಸ ಹೇಳಲು ಶುರು ಮಾಡಿದ. ಇದೇ ಸಮಯದಲ್ಲಿ ವಾಟ್ಸಪ್ಪ್ ಗಳಲ್ಲಿ ಪ್ರತಿದಿನ ಕೊರೋನಾದ ಬಗ್ಗೆ ಗಾಬರಿ ಜೊತೆಗೆ, "ಊರು ಬಿಟ್ಟವರಿಗೆ ತವರೂರ ನೆನಪಿಸಿತು", "ಕುಟುಂಬ ತೊರೆದವರಿಗೆ ಕುಟುಂಬವ ಪರಿಚಯಿಸಿತು", "ಹೆತ್ತವರ ಬಿಟ್ಟೋದವರು ಗತಿ ಇಲ್ಲದೆ ಹೆತ್ತವರ ಕಾಲು ಹಿಡಿದರು", "ಜಮೀನು ಒದ್ದೋದವರು ನೇಗಿಲ ಹಿಡಿದರು", "ಪಟ್ಟಣವೆಂಬ ಸೂಳೆಯ ಸೆರಗಿಡಿದವರು ಈಗ ಹಳ್ಳಿಯ ಪತಿರ್ವತೆ ಪಾದ ಹಿಡಿದರು", ಹೀಗೆ ಹತ್ತು ಹಲವು ಘೋಷಣೆಗಳನ್ನು ಹೊತ್ತು ತರುತ್ತಿತ್ತು. ತಮಾಷೆಗಾಗಿ, ಕಿಚಾಯಿಸಲೋ ಎಂಬಂತೆ ಇವೆಲ್ಲ ಒಬ್ಬರಿಂದೊಬ್ಬರಿಗೆ ಮೊಬೈಲ್ಗಳಲ್ಲಿ ಹರಿದಾಡುತ್ತಿದ್ದವು. ದಿನೇಶನಿಗೆ ಮಾತ್ರ ಹೊಟ್ಟೆ ಪಾಡಿನ ಯೋಚನೆ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು.<br />
<br />
ದಿನೇಶ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ತನ್ನ ಸಂಪೂರ್ಣ ಖರ್ಚು ವೆಚ್ಚಗಳನ್ನ ತಾನೇ ಕೂಲಿ ಮಾಡಿ ಭರಿಸಿಕೊಳ್ಳೋದರ ಜೊತೆಗೆ ರಮೇಶನನ್ನು ಬಿ ಎ ಮಾಡಿಸಿದ್ದ. ತಮ್ಮನೆಂದರೆ ಅತೀವ ಪ್ರೀತಿ ಇಟ್ಟಿದ್ದ ದಿನೇಶನಿಗೆ ಊರಿನಲ್ಲಿ ವಿಶೇಷ ಮರ್ಯಾದೆ. ಕಾಲಾ ನಂತರ ಪಿತ್ರಾರ್ಜಿತ ಜಮೀನನ್ನ ರಮೇಶ ಮುತುವರ್ಜಿ ಇಂದ ಮಾಡಲು ಶುರು ಮಾಡಿದ ಹಾಗು ದಿನೇಶ ತನ್ನ ವಿದ್ಯಾಭ್ಯಾಸದ ಆಧಾರದ ಮೇಲೆ ಬೆಂಗಳೂರಿಗೆ ಹೋಗಿ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗ ಕಂಡುಕೊಂಡ. ಬಂದಂತಹ ಸಂಬಳದಲ್ಲೇ ತಾನೊಂದಷ್ಟೂ ಇಟ್ಟುಕೊಂಡು ಉಳಿದಿದ್ದರಲ್ಲಿ ಊರಲ್ಲಿದ್ದ ಜಮೀನಿನ ಅಕ್ಕಪಕ್ಕದ ಸಣ್ಣ ಕಾಡನ್ನು ಒತ್ತುವರಿ ಮಾಡಿ ಅಡಿಕೆ ತೋಟ ಮಾಡಲು ತಮ್ಮನಿಗೆ ಹಣ ಕಳಿಸಿ ನೆಮ್ಮದಿಯಾಗಿದ್ದ. ನಂತರದ ದಿನಗಳಲ್ಲಿ ರಮೇಶನ ಪರಿಶ್ರಮ ಹಾಗೂ ದಿನೇಶನ ಹಣ ಸಹಾಯದಿಂದ ತಕ್ಕಮಟ್ಟಿನ ತೋಟ ಗದ್ದೆ ಮಾಡಿಕೊಂಡು ಊರಲ್ಲಿ ಇತರ ಜಮೀನ್ದಾರರಂತೆ ಸಿರಿವಂತರಾದರು. `ದಿನೇಶನ ಮದುವೆಯ ನಂತರ ತನ್ನ ಸಂಸಾರದ ಕಡೆ ಗಮನ ಹರಿಸಿದ ದಿನೇಶ, ಊರಿನ ಜಮೀನು ತನ್ನ ತಮ್ಮನಿಗೆ ಮಾತ್ರ ಎಂದು ರಮೇಶನ ಎದುರೇ ತನ್ನ ಹೆಂಡತಿಯ ಬಳಿ ಸಾಕಷ್ಟು ಬಾರಿ ಹೇಳಿದ್ದ, ಹಾಗೆಯೇ ನಡೆದುಕೊಂಡು ಬಂದಿದ್ದ. ಯಾವಾಗ ಲಾಕ್ಡೌನ್ ಹಂತ ಹಂತ ವಾಗಿ ಮುಂದೊಯ್ತೋ ದಿನೇಶನಿಗೆ ತನ್ನ ಸ್ವಂತ ಮನೆಯಲ್ಲೇ ಕಿರಿಕಿರಿಯ ಅನುಭವ ಆಗಲು ಶುರುವಾಯಿತು. ಗಾಯದ ಮೇಲೆ ಬರೆ ಎಳೆದಂತೆ, ಕಾಲೇಜಿನಿಂದ ಒಂದು ಈ ಮೇಲ್ ಬಂತು ದಿನೇಶನಿಗೆ. "ಇನ್ನು ಮೂರು ತಿಂಗಳು ಕಾಲೇಜಿಗೆ ಬರುವುದು ಬೇಡ ಹಾಗು ಮೂರು ತಿಂಗಳ ನಂತರ ನಾವೇ ಅಗತ್ಯ ಬಿದ್ದರೆ ನಿಮ್ಮನ್ನು ಸಂಪರ್ಕಿಸುತ್ತೇವೆ". ಸಂಬಳವೂ ಬಂದಿರಲಿಲ್ಲ. ಇದ್ದ ಹಣದಲ್ಲೇ ವ್ಯವಹರಿಸಬೇಕಾಗಿತ್ತು ದಿನೇಶ. ಆದರೂ ದಿನೇಶ ದೃತಿಗೆಟ್ಟಿರಲಿಲ್ಲ. ಮೂರು ತಿಂಗಳು ಹೆತ್ತವರು ಮತ್ತು ಒಡಹುಟ್ಟಿದವನೊಂದಿಗೆ ಇದ್ದು ನಂತರ ಅಗತ್ಯ ಬಿದ್ದರೆ ಕೆಲಸ ಬದಲಾಯಿಸೋಣ ಎಂದು ಮತ್ತು ಇದನ್ನು ಚರ್ಚಿಸಲು ರಮೇಶನ ಬರುವಿಕೆಗಾಗಿ ಕಾಯುತ್ತಿದ್ದ.<br />
<br />
ರಮೇಶ ಗದ್ದೆಗೆ ಹೋದವನು ಮರಳುವಾಗ, ಊರಿನ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ, "ಅಣ್ಣ ಹೇಳಿದ್ದಾನೆ ನಮ್ಮ ಜಮೀನಿನ ಮೇಲೆ ಇರುವ ಸರ್ಕಾರಿ ಜಾಗದಲ್ಲಿ ತೋಟ ಮಾಡೋಣ" ಅಂತ ಅಂದ. ರಮೇಶ, ನಿಮ್ಮಣ್ಣ ಹಂಗಂದ್ನಾ....? ಹುಷಾರು ಮಾರಾಯ. ಹಂಗಂದ್ರೆ? ರಮೇಶ ಕೇಳಿದ. ಗೆಳೆಯ ಒಳ್ಳೆದೇನೂ ಹೇಳ್ತಾ ಇದೀನಿ ಅನ್ನೋ ಭ್ರಮೇಲಿ ಅಣ್ಣ ತಮ್ಮಂದಿರ ನಡುವೆ ಹುಳಿ ಹಿಂಡಿದ. ಗೆಳೆಯನೆಂದಿದ್ದಾ, "ನೋಡು ನಮ್ಮನೆಯಲ್ಲಿ ಮೈಸೂರಿಂದ ಫ್ಯಾಕ್ಟಾರಿಲಿ ಕೆಲಸ ಸಧ್ಯ ನಿಂತಿದೆ ಅಂತ ಬಂದ ನಮ್ಮಣ್ಣನ ಮಾತಿನಂತೆ, ಹೊಳೆ ದಡದ ಹತ್ತಿರದ ಸರ್ಕಾರೀ ಜಾಗದಲ್ಲಿ ಯಾರಿಗೂ ತಿಳಿಯದ ಹಾಗೇ ರಾತ್ರೋ ರಾತ್ರಿ ಜಾಗ ಸಮ ಮಾಡಿಸಿ ಅಡಿಕೆ ಸಸಿ ನೆಡಲು ತಯಾರಿ ಮಾಡಿದೀವಿ. ಬೇಲಿ ಹಾಕಿ ಬಂದೋ ಬಸ್ತ್ ಮಾಡಿದೀವಿ. ಈಗ ಯಾಕೋ ಅಣ್ಣ ಊರಲ್ಲೇ ಉಳಿಯುವ ಹಾಗೆ ಕಾಣಿಸ್ತಿದಾನೆ. ನಿನ್ನಣ್ಣನೂ ಹಾಗೇ ಮಾಡಿದರೆ ನೀನು ಅವನಿಗೆ ಆಸ್ತಿ ಪಾಲು ಕೊಡಬೇಕಾಗಬಹುದು. ನೋಡು ಯೋಚ್ನೆ ಮಾಡು" ಅಂತ ಹೇಳಿ ತನ್ನ ಕೆಲ್ಸದ ದಾರಿ ಹಿಡಿದ. ಗೆಳೆಯನ ಮಾತಿನಿಂದ ರಮೇಶನೂ ತನ್ನ ರಕ್ತ ಸಂಬಂಧವನ್ನೇ ಸಂಪೂರ್ಣ ಮರೆತ. ಅಣ್ಣನ ಇಲ್ಲೀವರೆಗಿನ ಸಹಾಯ ಮರೆತ. ರಮೇಶನಿಗೆ ತನ್ನಣ್ಣ ಬೆಂಗಳೂರು ಬಿಟ್ಟು ಊರಲ್ಲೇ ಉಳಿದುಬಿಟ್ಟರೆ ನಾನೂ ಜಮೀನನ್ನು ಅವನಿಗೆ ಪಾಲು ಕೊಡಬೇಕಾಗಬಹುದು ಎಂದು ಭಾವಿಸ ತೊಡಗಿದನು. ಅವನಿಗೆ ಮತ್ತು ಅವನ ಆಲೋಚನೆಗಳಿಗೆ ಇಂಬು ಕೊಡುವಂತೆ ದಾರಿಯಲ್ಲಿ ಸಿಕ್ಕ, ಊರಿನಲ್ಲಿರುವ ರಮೇಶನ ಸ್ನೇಹಿತರು ಕಿವಿ ಕಚ್ಚಲು ಶುರು ಮಾಡಿದರು.<br />
<br />
ರಮೇಶನ ಆಗಮನದ ನಿರೀಕ್ಷೆಯಲ್ಲಿದ್ದ ದಿನೇಶ, ತಾನು ತನ್ನ ಪರಿಸ್ಥಿತಿಯನ್ನು ರಮೇಶನೊಂದಿಗೆ ಹೇಳಿದ. ರಮೇಶ ಇನ್ನು ಮೂರು ತಿಂಗಳು ಕಾಲೇಜಿಲ್ವಂತೆ ಕಣೋ. ನಾವೆಲ್ಲಾ ಇನ್ನು ಮೂರು ತಿಂಗಳು ಊರಲ್ಲಿರ್ತೀವೋ. ನಿಂಗೆ ಈಗ ಖುಷಿ ಆಯ್ತು ಅಲ್ವ ಅಂತ ಹೇಳುವ ಅಣ್ಣನ ಮಾತನ್ನು ಅರ್ಧದಲ್ಲೇ ತುಂಡರಿಸಿದ ರಮೇಶ, ದಿನೇಶನ ಮನಸ್ಸಿಗೆ ಚುಚ್ಚುವಂತೆ, "ಅಣ್ಣ ನೀ ಏನು ಇಲ್ಲೇ ಇರೋ ಹಾಗೇ ಕಾಣಿಸ್ತಿದೆ. ಕಾಲೇಜಿಲ್ಲ ಅಂದ್ರೆ ಅಲ್ಲಿವರೆಗೂ ಬೇರೆ ಏನಾದ್ರೂ ಮಾಡು. ಬೆಂಗಳೂರಲ್ಲಿ ಕೆಲ್ಸಕ್ಕೆನು ಕೊರತೆ. ಸುಮ್ನೆ ಹಿಂಗೇ ಊರಲ್ಲಿ ಎಸ್ಟ್ ದಿನ ಅಂತ ಇರ್ತೀಯ. ಈಗ ಮೂರ್ ತಿಂಗಳು ಅಂತೀಯಾ ಆಮೇಲೆ ಇಲ್ಲೇ ಇರೋ ಹಂಗೂ ಕಾಣಿಸ್ತೀಯ. ನಂಗೂ ಕಷ್ಟ ಆಗತ್ತೆ ನಿಮ್ಮೆಲ್ಲರನ್ನ ಸಂಬಾಳಿಸೋದು" ಅಂತ ಅಂದ. ತಮ್ಮನ ಅನಿರೀಕ್ಷಿತ ಮಾತಿನಿಂದ ತೀವ್ರ ಮನ ನೊಂದ ದಿನೇಶ, "ಏನಾದ್ರು ಕೆಲಸ ಮಾಡ್ತಿನೋ ನಾನು ಮನೇಲಿ. ನಿಂಗೆ ಸಹಾಯ ಆದರು ಆಗತ್ತೆ" ಅಂತಂದರೆ, ಬೇಡಪ್ಪ ಬೇಡ. ಏನೂ ಮಾಡೋದು ಬೇಡ ನೀ ಮೊದಲು ಹೋಗಪ್ಪಅಂತ ರಮೇಶ ನೇರವಾಗಿ ದಿನೇಶನನ್ನು ಮನೆಯಿಂದ ಹೊರ ಹೋಗುವಂತೆ ಹೇಳಿದನು. ತನ್ನೆಲ್ಲ ಒಳ್ಳೆತನ ಧಾರೆ ಎರೆದು ತನ್ನ ತಮ್ಮನಿಗಾಗಿ ಮಿಡಿದ ಹೃದಯಕ್ಕೆ ಚೂರಿ ಹಾಕಿದ ತಮ್ಮನಿಂದಾಗಿ ದಿನೇಶ ಈಗ ತನ್ನ ಹೆಂಡತಿ ಮಗುವಿನ ಬಗ್ಗೆ ಚಿಂತಿಸಿದ. ಅವರಿಗೆ ಅನ್ಯಾಯ ಮಾಡಿದೆನಾ ಅಂತ ದುಃಖಿಸಿದ. ನಾಳೆ ಬೆಳಿಗ್ಗೆ ಸರಿ ಹೋಗಬಹುದು ಎಂದು ತಿಳಿದ ದಿನೇಶನಿಗೆ ದಿಕ್ಕು ತೋಚದಂತಾಗಿದ್ದು ತನ್ನ ತಂದೆಯ ಮಾತಿನಿಂದ. ವಯಸ್ಸಿನ ಹೊಡೆತದಿಂದಾಗಿ ಆಲೋಚನಾ ಶಕ್ತಿ ಹೀನರಾಗಿ ಮತ್ತು ಮನೆಲ್ಲಿದ್ದ ಮಗನೆ ತಮ್ಮನ್ನು ನೋಡಿಕೊಳ್ಳುತ್ತಾನೆಂಬ ನಂಬಿಕೆಯಿಂದ, "ಓದ್ಕೊಂಡಿರೋ ನಿಂಗೆ ಇಲ್ಲೇನೋ ಕೆಲಸ. ಬೆಂಗಳೂರು ಹಳಿಸಿತೇನೋ?" ಅಂತ ರಮೇಶನ ಮಾತಿಗೆ ದನಿಯಾದರು ಅಪ್ಪ. ಪ್ರಪಂಚ ತಲೆಮೇಲೆ ಬಿದ್ದಂಗಾಗಿ ದಿನೇಶ ಕುಸಿದು ಬಿಟ್ಟ. ಕೊರೊನ ಕಾರಣದಿಂದ ಬೆಂಗಳೂರು ಇರಲು ಸುರಕ್ಷಿತವಲ್ಲ ಎಂದು ಹುಟ್ಟೂರಿಗೆ ತನ್ನವರೊಂದಿಗೆ ಒಂದಷ್ಟು ಸಮಯ ಕಳೆಯುವ ಶುದ್ಧ ಮನಸ್ಸಿನಿಂದ ಬಂದವನಿಗೆ ಅವಮಾನದ ಜೊತೆಗೆ ಮನೆಯಿಂದ ಹೊರ ಹಾಕುವ ಯೋಚನೆ ಮನೆಯವರದ್ದು. ರಮೇಶನ ಮನಸ್ಸು ಕಲ್ಲಾಗಿತ್ತು ಮತ್ತು ಆಸ್ತಿಯಲ್ಲಿ ತಾನೊಬ್ಬನೇ ಪಾಲುದಾರ ಎಂಬ ಭಾವನೆ ಅವನನ್ನು ಯಾವ ಹಂತಕ್ಕೂ ಇಳಿಸಿಬಿಟ್ಟಿತ್ತು. ಯಾವಾಗ ರಮೇಶ ಮುಂದುವರೆದು, ದಿನೇಶನ ಲಗ್ಗೇಜು ಕೈಯ್ಯಲ್ಲಿಡಿದು ಹೊರ ಎಸೆಯಲು ಮುಂದಾದಾಗ, ನಿಲ್ಲು, ನಾನೇ ಹೋಗುತ್ತೇನೆ ಎಂದು ತನ್ನ ಹೆಂಡತಿ ಮಗುವಿನೊಂದಿಗೆ ಹೊಸಿಲ ಹೊರಗೆ ಹೆಜ್ಜೆ ಹಾಕಿದ ದಿನೇಶ. ಆದ್ರೆ ದುರಂತ ಅಂದ್ರೆ ಇದು ದಿನೇಶನ ಮನೆಯಲ್ಲಿ ಮಾತ್ರವಲ್ಲ ಇಡೀ ಊರಿನ ಸ್ಥಿತಿಯಾಗಿತ್ತು. ದುಡಿಮೆಗಾಗಿ ಹೊರಹೋದವರು ಸುರಕ್ಷತೆಗಾಗಿ ನಾಲ್ಕು ದಿನ ತಮ್ಮ ಊರಿಗೆ, ಮನೆಗೆ ಬಂದಾಗ ಅವರನ್ನು ತಮ್ಮವರೇ ಎಂದು ಒಪ್ಪಿಕೊಳ್ಳಲಾಗದ, ಆಸ್ತಿ ಅಂತಸ್ತಿನ ದುರಾಸೆಗೆ ಕರುಣೆ ತುಂಬಿದ ಜನರೆನಿಸಿಕೊಡ ಹಳ್ಳಿಯವರೂ ಬದಲಾಗಿದ್ದರು. ದಿನೇಶ ಒಂದೊಂದೇ ಹೆಜ್ಜೆ ಇಟ್ಟು ಊರ ಹೊರ ಹೋಗುವಾಗ ಸಹಾಯಕ್ಕೆ ಬರಬೇಕಾಗಿದ್ದ ಊರ ಜನ ತಮ್ಮ ಮನೆಯಲ್ಲೂ ಇಂತದ್ದೇ ಆಸಾಮಿ ಇದಾನಲ್ಲ ಅವನು ಯಾವಾಗ ತೊಲಗುತ್ತಾನೋ ಅಂತ ಹಲುಬುತ್ತಿದ್ದರು. ಮಾನವೀಯತೆ ಮಲೆನಾಡಿನಿಂದಲೂ ಮರೆಯಾದ ದಿನಗಳು ಸ್ಪಷ್ಟವಾಗಿ ಗೋಚರಿಸಿದವು. ದಿನೇಶ ತನ್ನ ದೃಷ್ಟಿಯನ್ನು ಯಾವುದೊ ಬಿಂದುವಿನಲ್ಲಿ ಕೇಂದ್ರೀಕರಿಸಿ, ಹೆಂಡತಿ, ಮಗುವಿನೊಂದಿಗೆ ಅರಿಯದ ದಿಕ್ಕಿಗೆ ಹೆಜ್ಜೆ ಹಾಕಿದನು.<br />
<br />
ದೊಡ್ಡಪ್ಪ ಗೌಡರ ದೂರದ ಗುಂಡಗದ್ದೆ ಅಡಿಕೆ ತೋಟದಲ್ಲಿ ಕುಮಾರ ಔಷಧಿ ಹೊಡೆದು ವಾಪಸ್ಸು ಬರೋವಾಗ, ಯಾರೋ ಗಂಡ ಹೆಂಡತಿ ಇಬ್ಬರು ತನ್ನ ಮಗುವಿನೊಂದಿಗೆ ಬಸ್ಸು ಇಲ್ಲದ ರಸ್ತೆಯಲ್ಲಿ ಭಾರವಾದ ಹೆಜ್ಜೆ ಹಾಕಿ ನಡೆಯುತ್ತಿದ್ದುದನ್ನು ಪೇರಳೆ ಹಣ್ಣು ತಿನ್ನುತ್ತಾ ಗೂಡ್ಸ್ ಗಾಡೀಲಿ ಕೂತಿದ್ದ ಕುಮಾರ ಗಮನಿಸಿ, ಯಾರೋ ಕಿಶೋರ ಅದು ಈ ಕೊರೊನ ಟೈಮ್ ಲಿ ಅಷ್ಟೊಂದ್ ಲಗ್ಗೇಜು ಹಿಡಿದು ಹೋಗ್ತಾ ಇದಾರಲ್ಲ. ಮಗು ಬೇರೆ ಇದೇ ಅಂತ ಕುಮಾರನ ಹೃದಯ ಸಹಾಯಕ್ಕೆ ಮಿಡಿಯಿತು. ಆದ್ರೆ ಕಿಶೋರ, "ಬೇಡ ಕುಮಾರಣ್ಣ ಕೊರೊನ ಟೈಮ್ ಬೇರೆ, ಸುಮ್ನೆ ಯಾಕೆ ರಿಸ್ಕು. ಅವರು ಎಲ್ಲಿಂದ ಬರ್ತಾ ಇದಾರೋ, ಎಸ್ಟ್ ದಿನದಿಂದ ನಡೀತಾ ಇದರೊ" ಅಂತ ಅಂದ. ಹಾಗೆಂದುಕೊಂಡು ಗೂಡ್ಸ್ ಮುಂದೆ ಹೋಯ್ತು ಕುಮಾರನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಕಿಶೋರನ ಮಾತು ಸರಿ ಅನ್ನಿಸಿತು. ಒಂದೆರಡು ಕಿಲೋಮೀಟರ್ ಹೋದ ಮೇಲೆ ಕಿಶೋರನ ಆ ಒಂದು ಮಾತು ಈಗ ಸರಿಯಾಗಿ ಕುಮಾರನಿಗೆ ತಾಕಿತು. ಮನ ಕಲುಕಿತು. "ಕಿಶೋರ ಗಾಡಿ ನಿಲ್ಸು" ಕುಮಾರನ ಧ್ವನಿಯಲ್ಲಿ ಮರುಕವಿತ್ತು. ಏನಂದೆ ನೀನು..... "ಅವರು ಎಸ್ಟ್ ದಿನದಿಂದ ನಡೀತಿದ್ದಾರೋ". ಹೌದಲ್ವಾ, ಅವರು ಎಷ್ಟು ದಿನದಿಂದ ನಡೀತಿದ್ದಾರೋ, ಮಗು ಇದೆ. ಊಟ ಮಾಡಿದ್ದಾರೋ ಇಲ್ವೋ , ಇಂತ ಟೈಮ್ ನಲ್ಲಿ ಅವರನ್ನ ವಿಚಾರಿಸದೆ ಬಂದ್ವಿ ಅಲ್ವ? ಛೆ... ಎಂತ ಕೆಲಸ ಮಾಡಿದ್ವಿ ನಾವು. "ಕಿಶೋರ ಏನೂ ಮಾತಾಡದೆ ಗೂಡ್ಸ್ ಅವರಿದ್ದಲ್ಲಿಗೆ ತಿರುಗಿಸು" ಕುಮಾರನ ಧ್ವನಿಯಲ್ಲಿ ಆದೇಶ ಇತ್ತು ಮತ್ತು ಕುಮಾರಣ್ಣ ಅಂದ್ರೆ ವಿಪರೀತ ಗೌರವಿಸೋ ಕಿಶೋರ ತನ್ನ ತಪ್ಪನ್ನೂ ಅರಿತುಕೊಂಡ. ಹಿಂತಿರುಗಿ ಬಂದಾಗ, ದಿನೇಶನ ಹೆಂಡತಿ ನಡೆದು ನಡೆದು ನಿತ್ರಾಣಳಾಗಿದ್ದಳು. ಮಗು ಪರಿಸ್ಥಿತಿಯ ಅರಿವಿಲ್ಲದೆ ತಾಯಿಯ ಕೂದಲಿನ ಜೊತೆ ಆಡುತ್ತಿದ್ದಳು. ದಿನೇಶ ಹತಾಶನಾಗಿ ತನ್ನ ಒಳ್ಳೆತನಕ್ಕೆ ದೊರೆತ ಉಡುಗೊರೆಗೆ ಮಂದಿರ ಕಟ್ಟುತ್ತಿದ್ದ. ಗಾಡಿಯಿಂದ ಇಳಿದ ಕುಮಾರ, ದಿಗಿಲುಬಡಿದಂತಾಗಿ, "ಏನೋ ಇದು, ನಾನು ಕಣೋ ಕುಮಾರ. ದಿನಿ, ಏನೋ ಇದು ಯಾಕೋ ನಡ್ಕೊಂಡ್ ಹೋಗ್ತಾ ಇದ್ದೀಯ. ಏನಾಯ್ತೋ....." ಹೀಗೆ ಬಿಟ್ಟೂ ಬಿಡದೆ ಒಂದೇ ಸಮನೆ ಕೇಳಿದ. ದಿನೇಶನಿಗೆ ಏನೋ ಹೇಳ್ಬೇಕೆಂದೇ ತೋಚಲಿಲ್ಲ. ಅವನೆದುರಿಗೆ ತನ್ನ ಆತ್ಮೀಯ ಗೆಳೆಯ, ಹತ್ತು ವರ್ಷಗಳ ಹಿಂದೆ ಸಹಪಾಠಿಯಾಗಿದ್ದ ಕುಮಾರ ಇದಾನೆ. ಕುಮಾರನ ಸಹಕಾರದ ಬಗ್ಗೆ ಅರಿವಿದ್ದ ದಿನೇಶನಿಗೆ ಈಗ ನಿತ್ರಾಣದಲ್ಲೂ ರಕ್ತ ಮೈಕೈ ತುಂಬಾ ಹರಿದಾಡಿ ಸದೃಢನಾದ. ಕುಮಾರನು ಮೊದಲು ತನ್ನಲ್ಲಿದ್ದ ನೀರನ್ನು ಅವರೆಲ್ಲರಿಗೂ ಕೊಟ್ಟು ನಂತರ ಅಲ್ಲೇ ಇದ್ದ ಹೊನ್ನೆ ಮರದ ಬುಡಲ್ಲಿ ಕೂರಿಸಿದ. ದಿನೇಶ, ತನ್ನ ಪರಿಸ್ಥಿತಿಯನ್ನ ಮುಜುಗರದಲ್ಲೇ ಕುಮಾರನಿಗೆ ವಿವರಿಸಿದ. ಕುಮಾರ ಆ ಒಂದು ಕ್ಷಣ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಓದುವಾಗಿನ ಕಷ್ಟ ದಿನಗಳಲ್ಲಿ ಪರಸ್ಪರರ ಸಹಕಾರ ನೆನೆದು ತಬ್ಬಿಕೊಂಡರು. ಅಲ್ಲೇ ಕುಮಾರ ನಿಶ್ಚಯಿಸಿದ. ದಿನೇಶನ ರಕ್ಷಣೆಯ ಜೊತೆಗೆ ರಮೇಶನಿಗೆ ಅರಿವು ಮೂಡಿಸುವುದು ಸಹ ಮಾಡಬೇಕೆಂದು.<br />
ವಾಸ್ತವವಾಗಿ ರಮೇಶ ಉತ್ತಮ ವ್ಯಕ್ತಿತ್ವದವನೇ ಆಗಿದ್ದ. ಒಂದೆರಡು ಬಾರಿ ಓದುವಾಗ ಅಣ್ಣನ ನೋಡಲು ವಿಶ್ವವಿದ್ಯಾಲಯಕ್ಕೆ ಬಂದಾಗ ರಮೇಶನ ಕೃಷಿ ಚಟುವಟಿಕೆಯ ಬಗ್ಗೆ ಇದ್ದ ಅಗಾಧ ಜ್ಞಾನ ಮತ್ತು ಆಸಕ್ತಿಯ ಕುರಿತು ಸ್ವತಃ ಕುಮಾರ ಚಕಿತನಾಗಿದ್ದ. ಸ್ವ-ಹಿತ ಚಿಂತನೆ ಮತ್ತು ಅನ್ಯರ ಮಾತಿನ ಮೇಲೆ ಅತೀಯಾದ ಅವಲಂಬನೆ ಅವನನ್ನು ಕುರುಡಾಗಿಸಿದೆ ಅಂಬುದನ್ನು ಬೇಗನೆ ಗ್ರಹಿಸಿದ ಕುಮಾರ, ದಿನೇಶನ ಸಂಸಾರವನ್ನು ತನ್ನ ಮನೆಗೆ ಗೂಡ್ಸ್ ಗಾಡಿಯಲ್ಲಿ ಕರೆದುಕೊಂಡು ಹೋದ.<br />
<br />
ಅವತ್ತು ಏಪ್ರಿಲ್ ೧೯. ಬೆಳಿಗ್ಗೆ ೬ ಗಂಟೆಗೆ ರಮೇಶ ದನಕ್ಕೆ ಹುಲ್ಲು ಹಾಕಲು ಕೊಟ್ಟಿಗೆಗೆ ಹೋದಾಗ, ಅಚಾನಕ್ಕಾಗಿ ಅಣ್ಣನ ನೆನೆದ. ಅಣ್ಣ ಮನೆ ಬಿಟ್ಟು ಹೋದ ೪ ದಿನವಾದರೂ ಅಣ್ಣನ ಬಗ್ಗೆ ಯೋಚಿಸದ ಕುಮಾರ ಅವತ್ತೇಕೆ ಚಿಂತಿಸಿದ ಅನ್ನೋದು ಯಕ್ಷ ಪ್ರಶ್ನೆ. ಬಹುಶ ದನ ತನ್ನ ಕರುವಿನ ಬೆನ್ನು ನೆಕ್ಕುವುದು ರಮೇಶನ ಚಿತ್ತ ಕಲುಕಿರಲು ಸಾಕು. ಅಣ್ಣ ಬಹಳಷ್ಟು ಸಾರಿ ಹೇಳಿದ್ದು ನೆನಪಿತ್ತು ರಮೇಶನಿಗೆ. ಅಣ್ಣ ಹೇಳುತ್ತಿದ್ದ ಆ ಮಾತು ರಮೇಶನಿಗೆ ನೆನಪಾಯಿತು. ನಾವು ಸಹ ಈ ದನಕರುಗಳಂತೆ ಪರಸ್ಪರ ಮುದ್ದಿಸುತ್ತಲೇ ಇರಬೇಕು ಅಂತ. ಕಣ್ಣೀರು ರಮೇಶನಿಗರಿವಿಲ್ಲದೆ ಕೆನ್ನೆಮೇಲೆ ಇಳಿದೋಯ್ತು. ಅರಿವಿಲ್ಲದೆ ಅಣ್ಣ ಎಂದು ತುಟಿ ಕಂಪಿಸಿತು. ಇದನ್ನು ಗಮನಿಸಿದ ರಮೇಶನ ಹೆಂಡತಿ, "ಯಾರದ್ದೋ ಮಾತಿಗೆ ಈ ರೀತಿ ಮಾಡಿದ್ದು ಸರಿಯಲ್ಲ. ನಿಮ್ಮಣ್ಣ ನಿಮಗಾಗಿ ಮಾಡಿದ ಪ್ರತಿ ಕೆಲಸ ನೆನಪಿಸಿಕೊಳ್ಳಿ. ಕಾರು, ತೋಟ, ಇವೆಲ್ಲ ನಿಮಗೆ ದಯಪಾಲಿಸಿದ್ದು ಯಾರು. ನಿಮ್ಮಣ್ಣನ ಸಹಕಾರ ಇಲ್ಲದಿದ್ದರೆ ಇದೆಲ್ಲ ಇತ್ತಾ ನಿಮಗೆ. ನಾ ಹೇಳುವುದಿಷ್ಟೇ, ನೀವು ಮಾಡಿದ್ದು ತಪ್ಪು. ನಾವೆಲ್ಲಾ ಒಟ್ಟಿಗಿರೋಣ" ಅಂತ ಅಂದಳು. ಹೆಂಡತಿಯ ವಿಶಾಲ ಮನಸ್ಥಿತಿಗೆ ಮೆಚ್ಚಿ ತನ್ನ ತಪ್ಪಿಗೆ ಮರುಗುತ್ತ ಅಣ್ಣನ ಹುಡುಕಲು ಮನಸ್ಸು ಮಾಡಿದ. ಅದೇ ಸಮಯದಲ್ಲಿ ಫೋನ್ ರಿಂಗಾಯಿತು. ಆ ಕಡೆಯಿಂದ, "ರಮೇಶ್ ಅವರಾ ಮಾತಾಡುವುದು?" ಎಂದಿತು. ಮೊದಲೇ ದುಃಖದ ಮಡುವಲ್ಲಿದ್ದ ರಮೇಶ, ಹೌದು ಏನ್ ಹೇಳಿ ಅಂದ. “ಅದೂ....... ಅದೂ......”, ಅಸ್ಪಷ್ಟವಾಗಿದ್ದ ಧ್ವನಿ "ಚಂಗಾರು ಬಳಿಯ ಹೊಸಪೇಟೆ ಹತ್ತಿರ ಮಾಲತಿ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲಿ ದಿನೇಶ ಅನ್ನೋರು....... ಆದಷ್ಟು ಬೇಗ........... ಬಂದ್ರೆ ........ಸಾ ......" ಅಂತಂದು ಮಧ್ಯೆ ಮಧ್ಯೆ ಅಸ್ಪಷ್ಟವಾದ ಮಾತಿನೊಂದಿಗೆ ಕರೆ ಕಟ್ ಆಗಿತ್ತು. ರಮೇಶ ತಡ ಮಾಡದೇ ಸ್ವಿಫ್ಟ್ ಕಾರ್ ಸ್ಟಾರ್ಟ್ ಮಾಡಿದವನೇ ಹೊಸಪೇಟೆ ಕಡೆ ಹೊರಟ. ೮ ಗಂಟೆಗೆ ಕೊರೋಡಿ ಹತ್ರದ ಉಬ್ಬಿಗೆ ಬಂದವನೇ ರಸ್ತೆಗೆ ಬಿದ್ದಿದ್ದ ಮರ ನೋಡಿ ಈಗೇನು ಮಾಡೋದು. ಮರ ಹೇಗೆ ಸರಿಸೋದು. ನಾ ಹೇಗೆ ತಲುಪಲಿ ಹೊಸಪೇಟೆ. ಮುಗಿದೇ ಹೋಯ್ತು. ನನ್ನ ಪ್ರೀತಿಯ ಅಣ್ಣನ ಬಲಿ ಪಡೆದೆ ನಾನು. ಅಪ್ಪನಿಗಿಂತ ಹೆಚ್ಚಾಗಿದ್ದ ಅಣ್ಣ, ನಂಗೆ ಜೀವನ ಕೊಟ್ಟ ಅಣ್ಣ, ನಾನಿರುವ ಇವತ್ತಿನ ಸ್ಥಿತಿ ಅವನ ಭಿಕ್ಷೆ ಅನ್ನೋದು ಮರೆತು ಅವನನ್ನೇ ....ಛೆ... ಅಂತ ತನ್ನಷ್ಟಕ್ಕೆ ತಾನೇ ದಂಡಿಸಿಕೊಳ್ಳುತ್ತಾ, ಕಾರಿನಿಂದಿಳಿದು ದಾರಿಗಡ್ಡವಾಗಿದ್ದ ಮರ ಸರಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಮತ್ತು "ಸ್ವಲ್ಪ ಹೊತ್ತು ಕಣೋ ಬಂದೆ. ನನಗಾಗಿ... ದಯವಿಟ್ಟು ನನಗಾಗಿ ಜೀವ ಹಿಡಿದಿಟ್ಟುಕೋ" ಅಂತಾನೆ ಮರ ತಳ್ಳುತ್ತಿದ್ದ. ಔಷಧಿ ಹೊಡೆಯುವ ಕುಮಾರ ಜೊತೆಯಾಗಿದ್ದು ಮತ್ತು ಇಬ್ಬರ ನಡುವೆ ಈ ಸಂಭಾಷಣೆ ನಡೆದದ್ದು ಇದೇ ಸಂದರ್ಭದಲ್ಲಿ. "ಈ ಮುತುವರ್ಜಿ, ಅಕ್ಕರೆ, ಕಾಳಜಿ, ಪ್ರೀತಿ, ಬಾಂಧವ್ಯ ಈಗ್ಯಾಕೆ ರಮೇಶ. ನಡಿ ನಮ್ಮನೆಗೆ ನಿಮ್ಮಣ್ಣ ನಮ್ಮನೇಲಿ ಇದ್ದಾನೆ”.<br />
<br />
ಕಾರು ಚಲಿಸುತ್ತಿತ್ತು.ಒಬ್ಬರಿಗೊಬ್ಬರು ಮಾತನಾಡದೆ ಮೌನವಾಗಿದ್ದರೂ ಸಹ, ರಮೇಶನ ಪಶ್ಚಾತ್ತಾಪದ ಮತ್ತು ಕುಮಾರನ ಆಕ್ರೋಶದ “ಉಸಿರು” ಜೋರಾಗಿ ಮಾತನಾಡುತಿತ್ತು. ಕುಮಾರನ ಮನೆ ಬಂತು. ಕಾರಿಂದ ಇಳಿಯುವ ಮೊದಲು ಕುಮಾರನು, ಆತಂಕದಲ್ಲಿದ್ದ ರಮೇಶನಿಗೆ, ಹೆದರಬೇಡ ಗೆಳೆಯ. ಧೈರ್ಯವಾಗಿರು. ನಾ ನಿನ್ನಣ್ಣನ ಗೆಳೆಯ ಕುಮಾರ. ಈಗ್ಗೆ ಹತ್ತು ವರ್ಷಗಳ ಹಿಂದೆ ನೀ ಎರಡು ಬಾರಿ ನಮ್ಮ ಹಾಸ್ಟೆಲ್ಗೆ ಬಂದಿದ್ದೆ ಮತ್ತು ನಾವಿಬ್ರೂ ಲಕ್ಕವಳ್ಳಿ ಥಿಯೇಟರ್ ನಲ್ಲಿ "ರಕ್ತಕಣ್ಣೀರು" ಸಿನಿಮಾ ನೋಡಿದ್ವಿ ನೆನಪುಂಟಾ ಅಂದಾಗ, "ಕುಮಾರಣ್ಣ ನೀವಾ...! ಉದ್ಗಾರ ತೆಗೆದ ರಮೇಶ ಮತ್ತು ಅಣ್ಣಾ..... ಹೇಗಿದ್ದಾನೆ. ನನಗೆ ತಪ್ಪಿನ ಅರಿವಾಗಿದೆ. ಇನ್ನೆಂದೂ ನಾ ಮೈ ಮರೆಯುವುದಿಲ್ಲ. ಅಣ್ಣನ ಉಸಿರಿದ್ದರೆ ಸಾಕು ಎಂದು ಪರಿತಪಿಸುತ್ತಾನೆ ರಮೇಶ. "ಸ್ನೇಹ ಅಮರ. ಅವತ್ತು ದಾರಿಯಲ್ಲಿ ನಾನು ಅಚಾನಕ್ಕಾಗಿ ದಿನೇಶನ್ನ ಗುರುತಿಸಿದೆ. ದೊಡ್ಡ ಅನಾಹುತ ತಪ್ಪಿತು. ಹಾಗಂತ ಅವನು ಜೀವಕ್ಕೆ ಹಾನಿ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ. ಆದ್ರೆ ಅವನಿಗಾದ ಮಾನಸಿಕ ವೇದನೆ ತಡೆದುಕೊಳ್ಳಲಾರದೆ ಹೊರ ಬರಲು ಅದೆಷ್ಟು ದಿನ ಬೇಕಿತ್ತೋ" ಎಂದು ತಿಳಿ ಹೇಳಿದ ಕುಮಾರ. ಅಣ್ಣನ ನೋಡಲು ಕಾತುರದಿಂದ ಓಡುತ್ತಿದ್ದ ರಮೇಶನನ್ನು ಕೂಗಿದ ಕುಮಾರ, " ಬೆಳಿಗ್ಗೆ ನಿಂಗೆ ಕರೆ ಮಾಡಿದ್ದು ನಾನೇ, ಮತ್ತು ಅದೂ ನಿನ್ನ ಅಣ್ಣನಿಗೆ ಗೊತ್ತಿಲ್ಲ. ನೀನೂ ಅದನ್ನು ಅವನಿಗೆ ಹೇಳಬೇಡ. ನೀ ಇಲ್ಲಿರುವೆಂದು ತಿಳಿದು ಕರೆದುಕೊಂಡು ಹೋಗಲು ಬಂದಿರುವೆನೆಂದು ಹೇಳು ಎಂದಾಗ, ಹಾಗಾದರೆ ಹೊಸಪೇಟೆ, ನದಿ ಅದೇನದು? ರಮೇಶ ಕೇಳಿದ. ನೀ ತಕ್ಷಣ ಬರಲಿ ಎಂದು ಹಾಗಂದೆ. ಕ್ಷಮೆ ಇರಲಿ ರಮೇಶ. ಖುಷಿಯಿಂದ ರಮೇಶ ಓಡಿ ಬಂದು ಕುಮಾರನಿಗೆ ತಬ್ಬಿಕೊಂಡು, "ಅಣ್ಣನನ್ನು ನಾನು ಇವತ್ತು ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಅಣ್ಣನನ್ನು ಮಾತಾಡಿಸಿಕೊಂಡು ನಾ ಮನೆಗೆ ಹೋಗಿ ನನ್ನ ಹೆಂಡತಿ ಮಗನೊಂದಿಗೆ ಬಂದು ನಾವೆಲ್ಲರೂ ನಿಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಹೋಗುತ್ತೇನೆ ಕುಮಾರಣ್ಣ" ಎಂದು ಹೇಳಿ ಅಳುತ್ತಲೇ ಅಣ್ಣನ ಬಳಿ ಓಡಿದ ರಮೇಶ.<br />
<br />
ಪ್ರಶಾಂತ ಶೀರೂರು</div>
prashihttp://www.blogger.com/profile/17424449836173486264noreply@blogger.com1tag:blogger.com,1999:blog-357559050894046621.post-31753925604717811352011-11-14T19:49:00.000-08:002011-12-13T22:00:29.042-08:00ಮರಳಿ ಬರುವ ಮುನ್ನ ............ಸ್ನೇಹಿತರೆ, ತುಂಬಾ ದಿನಗಳ ನಂತರ ಅಂದ್ರೆ ತಪ್ಪಾಗತ್ತೇನೋ ವರ್ಷದ ನಂತರ ನಿಮ್ಮ ಮುಂದೆ ಮತ್ತೆ ನನ್ನ ಭಾವನೆಗಳನ್ನ ತೆರೆದಿಡ್ತಾ ಇದೀನಿ. ನಿಮ್ಮ ಮುಂದೆ ಇಷ್ಟು ದಿನ ಬರಲಾಗದ್ದಕ್ಕೆ ಕ್ಷಮೆ ಇರಲಿ. ಮತ್ತೆ ನಾನು ಇಷ್ಟು ದಿನ ನೋಡಿದ, ಕೇಳಿದ, ಅನುಭವಿಸಿದ ಸಣ್ಣ ಸಣ್ಣ ವಿಷಯಗಳನ್ನ ಬರೆಯಲು ಪ್ರಯತ್ನಿಸುತ್ತೇನೆ. ಮೊದಲಿನ ಹಾಗೆಯೇ ನನ್ನ ಬರವಣಿಗೆ ನಿಮಗೆ ಇಷ್ಟವಾಗಿದ್ದರೆ ಅಭಿನಂದಿಸಿ, ಪ್ರೀತಿಯಿಂದ ಕಾಲೆಳೆಯಿರಿ. ನಿಮ್ಮ ಎಲ್ಲ ಅನಿಸಿಕೆಗಳಿಗೆ ನನ್ನ ಬರವಣಿಗೆ ಕಾಯುತ್ತಿರುತ್ತದೆ. ಈ ದೊಡ್ಡ ಅಂತರದಲ್ಲಿ ಏನೇನೆಲ್ಲಾ ಆಗಿ ಹೋದವು. ಹಾಗೆಯೇ ಅದೆಲ್ಲ ಮರೆತೂ ಹೋದವು. ಏನಾದರು ಸ್ವಲ್ಪ ಉಳಿದಿದ್ದರೆ ಅದರ ತುಣುಕನ್ನು ಬರೀತೀನಿ. ದಿನಕ್ಕೊಂದು ಅಲ್ಲದಿದ್ರೂ ವಾರಕ್ಕೊಂದಾದ್ರು ಬರೀಬೇಕು ಅನ್ನೋ ನಿರ್ದಾರ ಮಾಡಿದಿನಿ. ಬರೀತೀನಿ ಕೂಡಾ. ನನ್ನ ಬರವಣಿಗೆ ನಿಮಗೆ ಇಷ್ಟವಾದರೆ ತಪ್ಪದೆ ಕಾಮೆಂಟ್ಸ್ ಬರೀರಿ. ಪ್ಲೀಸ್<br />ನಿಮಗೆ ಗೊತ್ತಲ್ಲ <span style="color: rgb(51, 102, 255);font-size:130%;" ><span style="font-weight: bold;">ನೀನಂದ್ರೆ</span><span style="font-weight: bold;"> </span><span style="font-weight: bold;">ನಂಗಿಷ್ಟ</span><span style="font-weight: bold;">,</span></span> <span style="color: rgb(51, 51, 255);">ನೀನ್</span><span style="color: rgb(51, 51, 255);"> </span><span style="color: rgb(51, 51, 255);">ಯಾರಾದ್ರು</span><span style="color: rgb(51, 51, 255);"> </span><span style="color: rgb(51, 51, 255);">ಆಗಿರು</span> ಅನ್ನೋದು ನನ್ನ ಮನಸ್ಸಿನ ಮಾತು ಅಂತ. ಹ್ಮಂ ಮತ್ತೇಕೆ ತಡ ಮಾಡೋದು ಇದರ ಹಿಂದೇನೆ ಹೊಸ ಲೇಖನ ಬರತ್ತೆ ಓದೋದು ಮರೀಬೇಡಿ.<br /><br />ನಿಮ್ಮವ <span style="color: rgb(0, 0, 153);">ಪ್ರಶಿ</span><span style="color: rgb(0, 0, 153);">.......</span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-62634235752415536412010-02-22T03:42:00.000-08:002010-02-22T04:36:50.922-08:00ಕೆಲವರಿರುತ್ತಾರೆ 'ಅವರಂತೆ' ಅವರ ಮನಸ್ಸು ವಿಶಾ.......ಲ?<span style="font-size:130%;">ಹೌದು, ಕೆಲವರಿರುತ್ತಾರೆ ಅವರ ಮಾತು ಮೃದು, ಮನಸ್ಸು ವಿಶಾಲ, ನೋಡಲು ಅತ್ಯಂತ ಸೌಮ್ಯವಾದಿಗಳು. ಆದರೆ ವಾತ್ಸವ ಅಂದರೆ ಆ ಸೌಮ್ಯವಾದ, ಮೃದುತ್ವ ಎಲ್ಲಾ ವ್ಯಾಗ್ರತ್ವದ ಮುಖವಾಡ. ಅಂದರೆ ಅವರಲ್ಲಿ ತಮ್ಮ ತಪ್ಪನ್ನ ತಿರುಚಿ ಬೇರೆಯವರ ಮೇಲೆ ಗೂಬೆ ಕೂರಿಸುವುದೇ ಅವರ ಬದುಕು. ಅದರಲ್ಲೇ ಅವರ ಖುಷಿ, ಸಂತೋಷ ಇರತ್ತೆ. ಇದು ಎಲ್ಲಾ ಕಡೆ ಸರ್ವೇ ಸಾಮಾನ್ಯ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು, ದುಡಿದು ತಿನ್ನುವ ಹಂತದವರಲ್ಲೂ ಇದು ನಿಲ್ಲದ ನಿರಂತರ ಪ್ರಕ್ರಿಯೆ. ತಡೆ ಇಲ್ಲದಂತೆ ನಡೆದಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳೊಂದಿಗೆ ತಗ್ಗಿ ಬಗ್ಗಿ ನಡೆದರೆ ಚೆಂದ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಇವತ್ತಿನ ದಿನ ತಗ್ಗಿ ಬಗ್ಗಿ ಅಂದರೆ ಅದು ಬೇರೆ ಅರ್ಥ ಸ್ವರೂಪ ಪಡೆದಿದೆ. ಈಗೆಲ್ಲ ತೋರಿಕೆಗಾಗಿ ತಗ್ಗಿ ಬಗ್ಗಿ ನಡೆಯುವುದು ಮಾಮೂಲು. ಅದಕ್ಕೆ ಸೂಕ್ತ ಪದ ಕೂಡ ಬಳಕೆಯಲ್ಲಿದೆ. ಅದು <span style="color:#ff0000;">ಬಕೀಟು</span> ಹಿಡಿಯುವುದು ಎಂದರ್ಥ. ಇಂತವರು ಗುರುಗಳು ಹೇಳಿದ್ದಕ್ಕೆಲ್ಲ, ಅದು ಒಳ್ಳೆಯದಿರಲಿ ಕೆಟ್ಟದ್ದಿರಲಿ ಅವರ ಖುಷಿಗಾಗಿ, ಅಥವಾ ಅವರನ್ನು ಮೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಾಗಿದೆ. ಕಾಗೆ ಬೆಳ್ಳಗಿದೆ ಅಂದರೂ ಹೌದು ಸಾರ್ ಅನ್ನೋ ಜಾತಿಯಿಂದ, ಒಳ್ಳೆಯ ನೇರ ನಡೆ ನುಡಿಯಿರುವವರಿಗೆ ಅವಿವೇಕಿ, ನಿಷ್ಪ್ರಯೋಜಕ ಎಂದು ಹಣೆ ಪಟ್ಟಿ. ಇದು ವಿದ್ಯಾರ್ಥಿ ಜೀವನದ ಕಥೆಯಾದರೆ ಇನ್ನು ಒಂದೆಡೆ ಉದ್ಯೋಗ ಮಾಡುವಲ್ಲೂ ಇದೆ ಹಣೆಬರಹ. ಇಲ್ಲಿ ತಮ್ಮ ಮೇಲಧಿಕಾರಿಯನ್ನು ಮೆಚ್ಚಿಸಲು ಇದ್ದದ್ದು, ಇಲ್ಲದ್ದು ಎಲ್ಲಾ ಒಗ್ಗರಣೆ ಸಮೇತ ವರದಿ ಒಪ್ಪಿಸುವ<span style="color:#ff0000;"> 'ಅಕ್ಷರಸ್ತರ, ನಾಗರೀಕರ ?'</span> ಗುಂಪು. ಅವರು ಯಾವ ರೀತಿಯಲ್ಲಿ ತಮ್ಮ (ವಾದ) ವರದಿ ಮಂಡಿಸುತ್ತಾರೋ ತಿಳಿಯದು. ಆದರೂ ಅವರ ಮಾತಿಗೆ ಸಿಗುವ ಮರ್ಯಾದೆ ಮಾತ್ರ ಮುತ್ತಿನಂತದು. ಹೌದು ಬಂಗಾರದ ಬೆಲೆ ಅವರ ಮಾತಿಗೆ. ವಿಪರ್ಯಾಸ ಅಂದರೆ ಅಂಥವರ ಮಾತನ್ನು ಸರಿನೋ ತಪ್ಪೋ ಎಂದು ಯೋಚಿಸದೆ ಒಪ್ಪಿಕೊಳ್ಳುವ ಮೇಲಾಧಿಕಾರಿ ಇನ್ನೆಂಥ ಅವಿವೇಕಿ ಇರುತ್ತಾನೋ ಊಹಿಸಲೂ ಕಷ್ಟ. ಈ ಥರದ ಮೇಲಾಧಿಕಾರಿಯಿಂದ ಅದ್ಯಾವ ಮಟ್ಟದ ಆಡಳಿತ ನಿರೀಕ್ಷಿಸಲು ಸಾಧ್ಯ. ಇಂಥ ಅಧಿಕಾರಿಗಳಿಗೆ ಒಬ್ಬರು ತಮ್ಮ ತಾಳಕ್ಕೆ ಸರಿಯಾಗಿ ಕುಣಿಯಬಲ್ಲರು (ಬಕೀಟು) ಅಂತ ಗೊತ್ತಾದರೆ ಸಾಕು ಅವರ ವರದಿಯನ್ನೇ (ಆಡು ಭಾಷೆಯಲ್ಲಿ ಇದನ್ನು <span style="color:#ff0000;">'ಚಾಡಿ' </span>ಅಂತಾರೆ) ನಿರೀಕ್ಷಿಸುತ್ತಾ ಅವರು ಹೇಳಿದ್ದೆ ವೇದವಾಕ್ಯ ಅಂತ ನಂಬುವುದು. ಅಷ್ಟಕ್ಕೆ ಸುಮ್ಮನಾಗದೆ 'ಬಕೀಟಿನ' ವರದಿಯನ್ನ ಪರಾಮರ್ಶಿಸದೇ ನಿಯತ್ತಿನ, ಕೆಲಸ ಸರಿಯಾಗಿ ಮಾಡುವವರ ಮೇಲೆ, ಅಥವಾ ಮಾನವ ಸಹಜ ಸಣ್ಣ ಪುಟ್ಟ ತಪ್ಪಿಗೂ ಮಾತಿನಲ್ಲೇ ಮಂಗಳಾರತಿ ಮಾಡಿ, ಅಷ್ಟಕ್ಕೂ ಸುಮ್ಮನಾಗದೆ ಇನ್ನೂ ಮುಂದೆ ಹೋಗಿ ಅಸಹ್ಯ ಅನ್ನುವಂತೆ ಬಾಯಿಗೆ ಬಂದದ್ದು ಬಡ ಬಡಾಯಿಸಿ ತಮ್ಮ ಯೋಗ್ಯತೆ? ಪ್ರದರ್ಶಿಸುತ್ತಾರೆ.<br />ಇಂಥಹ ಅಧಿಕಾರಿಗಳು, ಬಕೀಟು ಮಹಾಶಯರಿಗೆ ಕೊರತೆ ಇಲ್ಲ. ಎಲ್ಲ ಕಡೆ ಇವರ ದರ್ಬಾರು? ಇದ್ದೆ ಇದೆ. ಇಂಥಹ ಅನುಭವಗಳು ಎಲ್ಲರಿಗೂ ಸಾಮಾನ್ಯ. ಆದರೂ ಇಂಥಹ ಭೂಪರಿಗೆ ಬಕೀಟು ತುಂಬಾ ಬೊಕ್ಕೆ ಇಟ್ಟು ಅಭಿನಂದಿಸಲೇ....? ಬೇಕು.<br /><span class="">ಅಷ್ಟಕ್ಕೂ ಈ ವಿಷ್ಯ ಇಲ್ಲಾಕೆ ಹೇಳಿದೆ ಅಂದರೆ ನಾನು ನನ್ನ ಗೆಳೆಯರೆಲ್ಲ ಮಾತಾಡುವಾಗ ಈ ಪೆಡಂ</span>ಭೂತದ ವಿಷ್ಯ ಬಂತು. ಯಾಕೆ ಬರೀಬಾರ್ದು ಅಂತ ಬರೆದೆ. ನನ್ನ ಸ್ನೇಹಿತನಿಗಾದ ಅನುಭವ ನಿಮಗೂ ಆಗಿದೆಯೇ? ಕೆಲವೊಮ್ಮೆ ನನಗೂ ಆಗಿದೆ. ನೀವೇನಂತೀರಾ? ಹೌದು, ಕೆಲವರಿರುತ್ತಾರೆ ಅವರಂತೆ ಅವರ ಮನಸ್ಸು ವಿಶಾ.......ಲ? ಅಂತ ಅನ್ನಿಸ್ತಿದೆಯ. ಪ್ಲೀಸ್ ಹೇಳಿ .........</span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-84431956053595382502010-02-02T00:47:00.000-08:002010-02-02T03:22:25.587-08:00ಬೆಸಿಗೆಯಲ್ಲೊಂದು ದಿನ ಮಳೆ<span style="font-size:130%;"><span >ಸಂಜೆ ನಾಲ್ಕರ ಸಮಯ<br />ಇಳಿ ಬಿಸಿಲ ಕಿರಣಗಳು<br />ಮನೆ ಎದುರಿಗಿನ ಕಟ್ಟೆ ಮೇಲೆ<br />ತೆವಳುತ್ತಾ ಸಾಗಿದೆ ಹೊಸ್ತಿಲೆಡೆಗೆ<br /><span class=""></span><br /><span class="">ಮನೆಯೊಳಗೆ ಮುದುಕಿಯರಿಬ್ಬರ </span><br /><span class="">ಮಾತೋ ಮಾತು. ಮತ್ತೆ ಮೌನ </span><br /><span class="">ವಿಚಿತ್ರ ಸಂದೇಶಗಳ ಗೋಚರ </span><br /><span class="">ದಿಡೀರ್ ಮರೆಯಾಯಿತು ಬಿಸಿಲ ಕಿರಣ </span><br /><span class=""></span><br /><span class="">ಸೋಗೆಯುದುರಿಸಿ ತೂಗಾಡಿದವು </span><br /><span class="">ಬಾಗಿದವು ಅಡಿಕೆ ಮರಗಳು </span><br /><span class="">ಹಾರಾಡಿದವು ಹಾಳೆ, ಹೊಟ್ಟು</span><br /><span class="">ಹೂವಿನ ಬೀಜಗಳು ಹೆಂಚಮೇಲೆ </span><br /><span class=""></span><br /><span class="">ಗಳಿಗೆ ಹಿಂದಿದ್ದ ಬೆತ್ತಲೆ ಬಾನು </span><br /><span class="">ಕತ್ತಲೆಯ ಬಲೆ ಬೀಸಿತು </span><br /><span class="">ನೋಡನೋಡುತ್ತಲೇ ಬಳಿಯಿತು</span><br /><span class="">ಸೂರ್ಯನಿಗೂ ಮೋಡದಿಂದ ಮಸಿ.</span><br /><span class=""></span><br /><span class="">ಗಾಳಿಯ ರೌದ್ರಾವತಾರಕ್ಕೆ </span><br /><span class="">ನಡುಗಿ ದಿಕ್ಕೆಟ್ಟು ಶರಣಾಗಿ </span><br /><span class="">ತಲೆ ಬಾಗಿಸಿ, ಬಾಲ ನಿಮಿರಿಸಿ </span><br /><span class="">ಓಡೋಡಿ ಬಂದವು ದನಗಳೆಲ್ಲ.</span><br /><span class=""></span><br /><span class="">ಗಿಡುಗನೊಂದಿಗೆ ಘಂಟೆಗಟ್ಟಲೆ ಕಾದಾಡಿ </span><br /><span class="">ಒಂದೇ ಸಮನೆ ಒದರುತ್ತಿದ್ದ ಕೋಳಿ </span><br /><span class="">ಸನ್ನಿವೇಶಕ್ಕೆ ಹೆದರಿ, ಮುದುರಿ </span><br /><span class="">ಕುಳಿತಿತ್ತು ಗೂಡಲ್ಲಿ ಒದರದೆ, ಕದಲದೆ.</span><br /><span class=""></span><br /><span class="">ಬೇಲಿ ಮೇಲೆ ಬಟ್ಟೆಗಳಿಲ್ಲ</span><br /><span class="">ಈಗವು ಸೂತ್ರವಿಲ್ಲದ ಗಾಳಿಪಟ.</span><br /><span class="">ಬಾವಿ ಮೇಲಿತ್ತು ಖಾಲಿ ಕೊಡ </span><br /><span class="">ಈಗದು ಬಾವಿಯೊಳಗೆ ತುಂಬಿದ ಕೊಡ.</span><br /><span class=""></span><br /><span class="">ಪಟಪಟನೆ ಬಿದ್ದ ಹನಿಗಳೆರಡು </span><br /><span class="">ಚಿತ್ತಾರ ಮೂಡಿಸಿತು ದೂಳಿನ ಮೇಲೆ </span><br /><span class="">ನೋಡಲದು ಹಾಳೆಯ ಮೇಲೆ </span><br /><span class="">ಶಾಯಿ ಹಚ್ಚಿ ಒತ್ತಿದ ಹೆಬ್ಬೆಟ್ಟಿನ ಹಾಗೆ.</span><br /><span class=""></span><br /><span class="">ಮಳೆ, ಗಾಳಿಗೆ ಹೆದರಿದ </span><br /><span class="">ಬಾಳೆಮರ ಅವಿತಿದ್ದು </span><br /><span class="">ನಾರಿಯ ಸೀರೆ ಸೆರಗಿನಂತೆ </span><br /><span class="">ತನ್ನೆಲೆಯನ್ನೇ ಅಡ್ಡ ಹಿಡಿದು.</span><br /><span class=""></span><br /><span class="">ಸುರಿಯಿತು ಸುರಿಯಿತು ಮಳೆ </span><br /><span class="">ಕೆಲಸಮಯದ ಹಿಂದಸ್ಟೇ ಇದ್ದ </span><br /><span class="">ಬಿಸಿಲಿಗೆ ಬೆದರಿ ಬೆವರಿದ ದೇಹವೀಗ </span><br /><span class="">ಚುಮು ಚುಮು ಚಳಿಯಲ್ಲಿ ನಡುಗಿತು.</span><br /><span class=""></span><br /><span class="">ಮೂಲೆಯಲ್ಲಿದ್ದ ಜಾಡಿ, ಕಂಬಳಿ </span><br /><span class="">ಎಳೆದೆಳೆದು ತಂದು ಹೊದ್ದು </span><br /><span class="">ಮಲಗಿತು ಜೀವ ಮತ್ತದೇ </span><br /><span class="">ಮೂಲೆಯಲ್ಲಿ ಕೋಳಿ ಕಾವು ಕೂತ ಹಾಗೆ.</span><br /><span class=""></span><br /><span class="">ಅರೆಗಳಿಗೆಯ ನಿದ್ರಾ ಮಮ್ಪರಿನಿಂದೆದ್ದು</span><br /><span class="">ಕಿವಿ ನಿಮಿರಿಸಿದರೆ ಘೋರ ಶಬ್ದವಿಲ್ಲ </span><br /><span class="">ಬರೀ ಹನಿ ತೊಟ್ಟಿಕ್ಕುವ ರಾಗ</span><br /><span class="">ಅರಿವಾಯಿತು ನಿಂತಿದೆ ಮಳೆಯ ಆರ್ಭಟ.</span><br /><span class=""></span><br /><span class="">ಮೌನಕ್ಕೆ ಶರಣಾಗಿದ್ದ ಮುದುಕಿಯರ </span><br /><span class="">ಮಾತೆಲ್ಲ ಕವಳದೊಂದಿಗೆ ಪಿಕ್ತಾನೆಗೆ ಬಿದ್ದಿತ್ತು</span><br /><span class="">ಮಳೆ ಮಳೆ ಎಂಥಾ ಮಳೆಯಿದು</span><br /><span class="">ಕವಳದೊಂದಿಗೆ ಮಾತು ಮತ್ತೆ ಶುರುವಾಯಿತು.</span><br /><span class=""></span><br /><span class="">ಹೊದ್ದು ಮಲಗಿದ ಕಂಬಳಿಯ </span><br /><span class="">ಒದ್ದು ಎದ್ದು ಬಂದು ನೋಡಿದರೆ </span><br /><span class="">ಮಾಡಿನ ನೀರು ಬಿದ್ದು ಇಳೆಯಲ್ಲಿ </span><br /><span class="">ಒಂದೆರಡಿಂಚು ಗುಳಿ ಬಿದ್ದಿತ್ತು.</span><br /><span class=""></span><br /><span class="">ಒಂದೆರಡು ಘಂಟೆ ಜಡಿದ ಮಳೆ </span><br /><span class="">ಹೊಳೆ ನೀರನ್ನು ದಡ ಮುಟ್ಟಿಸಿದ್ದಕ್ಕೆ</span><br /><span class="">ಗುರುತಾಗಿ ಅದು ಹೊತ್ತು ತಂದ </span><br /><span class="">ಕಸ, ಕಡ್ಡಿ ಇಟ್ಟು ತೋರಿಸಿತ್ತು.</span><br /><span class=""></span><br /><span class="">ಮತ್ತೆ ಬಾನು ಬಿಳಿಯಾಗಿತ್ತು </span><br /><span class="">ಮಳೆ ನೀರಲ್ಲಿ ಸೂರ್ಯ ಮಿನ್ದನೇನೋ </span><br /><span class="">ಅನ್ನುವಸ್ಟು ಶುಭ್ರವಾಗಿ, ತೀಕ್ಷ್ಣವಾಗಿ </span><br /><span class="">ಬೆಳ್ಳಿಕಿರಣಹರಿಸಿದ ಧರೆಗೆ.</span><br /><span class=""></span><br /><span class="">ಹೆದರಿದ್ದೆ, ಎದುರಿಸಿದ್ದೆ ಅನಿರೀಕ್ಷಿತ ಮಳೆ </span><br /><span class="">ಏನೋ ಬೇಸರ, ಏನೋ ಅವಸರ ಒಳಗೊಳಗೆ</span><br /><span class="">ಏನನ್ನೋ ನೆನೆಸಿ, ಮತ್ತೇನನ್ನೋ ಚಿಂತಿಸಿ </span><br /><span class="">ಅಬ್ಭಾ! ಬೆಪ್ಪಾಗಿ ನಿಂತೆ ನಾ ಮಲೆನಾಡ ಮಳೆಗೆ.</span><br /></span></span><span class=""></span><br /><span class=""></span>prashihttp://www.blogger.com/profile/17424449836173486264noreply@blogger.com3tag:blogger.com,1999:blog-357559050894046621.post-65371222116053288232009-12-08T01:14:00.001-08:002010-01-08T22:33:13.705-08:00ಫ್ರೆಂಡ್ ನ ಒಂದ್ ಮಾತು, ಮನಸನ್ನ ಮುಗಿಲೆತ್ತರಕ್ಕೆ ಹಾರಿಸತ್ತ?<span style="font-size:130%;">ಖಂಡಿತ ಹಾರಿಸತ್ತೆ. ಅದೆನಾಯ್ತು ಅಂದ್ರೆ ನಿನ್ನೆ ಹೀಗೆ ಮನೇಲಿ ಫ್ರೆಂಡ್ಸ್ ಜೊತೆ ಏನೇನೋ ಮಾತಾಡ್ತಾ, ಕಿತ್ತಾಡ್ತಾ ಇದ್ದಾಗ ನನ್ಫ್ರೆಂಡ್ ಪುಷಿ ಫೋನ್ ಮಾಡಿದ್ಲು. ಏನ್ ಮಾಡ್ತಾ ಇದ್ಯೋ? ಅಂದ್ಲು. ಏನಿಲ್ಲ ಕಣೇ ಅಡಿಗೆ ಮಾಡ್ತಾ ಇದೀನಿ ಊಟ ಮಾಡಬೇಕು ಅಂದೆ. ಹೌದಾ ಸರಿ, ನಿನ್ ಫ್ರೆಂಡ್ ಫೋನ್ ಮಾಡಿದ್ಲು ಅಂದ್ಲು. ಯಾರೇ? ಅಂದೆ. ಭವ್ಯಾ ಕಣೋ ಅಂದ್ಲು. ಅದೇ ನಾವು ಯೂನಿವೆರ್ಸಿಟಿನಲ್ಲಿದ್ದಾಗ ಫ್ರೆಂಡ್ ಆಗಿದ್ವಲ್ಲ? ಅದೇ ಕಣೋ ನಾವೆಲ್ಲ ನಿಂಗೆ ಏನೇನೋ ಹೇಳ್ತಾ ಇದ್ವಲ್ಲ? ........ ಅದೂ ಇದೂ ಅಂತ ಒಂದೇ ಸಮನೆ ಹೇಳ್ತಾ ಇದ್ಲು.ಆದ್ರೆ ಅವ್ಳು ಭವ್ಯಾ ಕಣೋ ಅಂದಾಗಲೇ ನಂಗೆ ಗೊತ್ತಾಗಿತ್ತು ಇವಳು ಯಾರ ಬಗ್ಗೆ ಮಾತಾಡ್ತಾ ಇದಾಳೆ ಅಂತ. ಅವ್ಳು ಹೇಳಿದ್ದು ನನ್ ಫ್ರೆಂಡ್ ಭವ್ಯಾ ಬಗ್ಗೆ. ನನಗೆ ಈ ಬರವಣಿಗೆ ಬಗ್ಗೆ ಆಸಕ್ತಿ ಮೂಡಿಸಿದ ನನ್ ಫ್ರೆಂಡ್ ಭವ್ಯಾ ಬಗ್ಗೆ. ಏನ್ ಅಂದ್ರೆ ಈ ಗೆಳೆತನ ಹುಟ್ಟಿದ್ದೇ ಚಿತ್ರ ವಿಚಿತ್ರವಾಗಿ. ಸ್ನೇಹಿತರ ಏನೋ ಒಂದು ಸವಾಲಿಗೆ ಬೆಲೆ (ತಲೆ) ಕೊಟ್ಟು, ಆ ಸವಾಲನ್ನ ಸಾದಿಸಲು ಹೋಗಿ, ಅವಾಂತರ ಆಗಿ, ಈ ವಿಷ್ಯ ನನ್ ತಂಗಿಯರ ಕಿವಿಗೆ ಬಿದ್ದು (ಅವ್ರು ಭವ್ಯಾ ಫ್ರೆಂಡ್ಸ್) ಅವರಿಂದ <span style="color:#ff0000;">"ಅದ್ದೂರಿ" ಮಂಗಳಾರತಿ</span> ಕಾರ್ಯಕ್ರಮ ಆಗಿ, ನಂತರ ಮೂರ್ನಾಲ್ಕು ತಿಂಗಳು ಭವ್ಯಾ ಜೊತೆ ಮಾತಾಡದೆ ಇದ್ದಿದ್ದು, ......ಅಬ್ಬ ಅದೆಲ್ಲ ಈಗ ಸುಂದರ ನೆನಪು ಮಾತ್ರ. ಕೊನೆಗೆ ಆಟೋಗ್ರಾಪ್ಹ್ ಬರೆಯೋ ಸಮಯದಲ್ಲಿ ನನ್ ತಂಗಿ ಫ್ರೆಂಡ್ಸೆ ಮತ್ತೆ ಭವ್ಯಾ ಜೊತೆಗೆ ಫ್ರೆಂಡ್ ಮಾಡ್ಸಿದ್ರು. ಆಮೇಲಿಂದ ನಿಜಕ್ಕೂ ಅತ್ಯಂತ ಆತ್ಮೀಯವಾದ ಗೆಳೆತನ ನಮ್ಮಲ್ಲಿತ್ತು. ಸುಮಾರು ಒಂದೆರಡು ವರ್ಷಗಳ ಕಾಲ ಹಾಗೆ ಇತ್ತು. ಆದ್ರೆ ಯಾವಾಗಲೋ ಏನೋ ಭವ್ಯಾ ದಿಡೀರ್ ಅಂತಾ ನಂಬರ್ ಚೇಂಜ್ ಮಾಡಿದ್ಲು. ಯಾಕೋ ಏನೋ ಆ ನಂಬರ್ ನನಗೆ ಕೊಡಲೇ ಇಲ್ಲ. ನಂಗೂ ಎಲ್ಲೋ ಒಂದ್ಕಡೆ ಸ್ವಲ್ಪ ಬೇಜಾರಾಗಿತ್ತು. ಅವಳು ನಂಗೆ ಒಳ್ಳೆ ಫ್ರೆಂಡ್ ಆಗಿದ್ಲು. ಅಂಥಾ ಫ್ರೆಂಡ್ಶಿಪ್ನ ಕಳ್ಕೊಲ್ಲೋದಿಕ್ಕೆ ನನ್ ಮನಸು ಒಪ್ಪಲಿಲ್ಲ. ಹಾಗಾಗಿ ಅವಳ ನಂಬರ್ ಹುಡುಕೋಕೆ ಸ್ವಲ್ಪ ಜಾಸ್ತಿನೆ ಪ್ರಯತ್ನ ಪಟ್ಟೆ. ಊಹೂ ನಂಬರ್ ಸಿಗ್ಲಿಲ್ಲ. ಆಗ ಅಂದ್ಕೊಂಡೆ ಬಹುಷಃ ಭಾವ್ಯಾಗೆ ನನ್ ಫ್ರೆಂಡ್ ಶಿಪ್ ಸಾಕಾಯ್ತು ಅಂತ ಅನ್ಸತ್ತೆ ಅಂತ. ಹಾಗಂದುಕೊಂಡು ಸುಮ್ನಾದೆ ಕೂಡಾ. ಆದ್ರೆ ಅವಳ ನೆನಪು ಸದಾ ಇತ್ತು. ಕಾರಣ ಮತ್ತದೇ ಫ್ರೆಂಡ್ ಶಿಪ್. ಹೀಗಿರುವಾಗಲೇ, ಸುಮಾರು ಮೂರು ವರ್ಷಗಳ ನಂತರ ಮತ್ತೆ ಭಾವ್ಯಾನ ಜೊತೆ ಮಾತಾಡೋದು ಅಂದ್ರೆ ಖುಷಿ ಆಲ್ವಾ?. ನನಗಂತೂ ಖುಷಿ ಆಯ್ತು. ಪುಷಿ ನಂಬರ್ ಕೊಟ್ಟಾಗ, ಕಾಲ್ ಮಾಡಿದಾಗ, ಮಾತಾಡಿದಾಗ, ಮಾತಾಡಿ ಮುಗಿಸಿದಾಗ, ಮೊದಲೇ ಸ್ವಚ್ಚಂದವಾಗಿ ಹಾರಾಡ್ತಾ ಇದ್ದ ನನ್ ಮನಸ್ಸು ಮತ್ತಸ್ತು ಎತ್ತರಕ್ಕೆ ಹಾರಿತು. ಕಾರಣ ಮತ್ತದೇ ಸ್ನೇಹ. <span style="color:#ff9900;"><em>ಈ ಸ್ನೇಹ ಅಂದ್ರೇನೆ ಹೀಗೆ ನೀರಿನ ತರ. ಇದಕ್ಕೆ ರುಚಿ ಇಲ್ಲ, ಬಣ್ಣ ಇಲ್ಲ, ಅಕಾರ ಗೊತ್ತಿಲ್ಲ. ಇದಕ್ಕೆ ಗೊತ್ತಿರೋದು ಆಳ, ಅಗಲ ಮಾತ್ರ. ಆಳ ಎಷ್ಟು ಅಂದ್ರೆ ಸಾಗರಕ್ಕಿಳಿಯತ್ತೆ, ಅಗಲ ಎಷ್ಟು ಅಂದ್ರೆ ಆಕಾಶ ಅನ್ನತ್ತೆ</em></span>. ಈ ತರದ ಸ್ನೇಹ ನಿಮ್ಮಲ್ಲಿದ್ದರೆ , ಇಂತಹ ಗೆಳತಿ/ಗೆಳೆಯ/ಗೆಳೆತನ ನಿಮ್ಮಲ್ಲಿದ್ದರೆ ಅವರೊಂದಿಗಿನ ನಿಮ್ಮ ಸವಿ ಸವಿ ನೆನಪನ್ನ ಹಾಗೆ ಹರಿಯಬಿಡಿ. ಇದು ಸಣ್ಣ ಸಣ್ಣ ವಿಷಯ ಅನ್ನಿಸಿದರೂ ಸಾಕಷ್ಟುಖುಷಿ ಇರತ್ತೆ. ಏನಂತೀರಾ?</span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-4199606963795297632009-10-20T03:26:00.000-07:002009-10-20T21:46:26.662-07:00ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... !<p><span style="font-size:130%;"><span style="font-family:arial;">ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ! ಆಶ್ಚರ್ಯ ಆಗ್ತಾ ಇದ್ದೀಯ? ಆಶ್ಚರ್ಯ ಪಡೊಂಥದ್ದೆನಿಲ್ಲ ನಿಜವಾಗಿಯೂ ನನ್ನ ಮೇಲ್ ಐಡಿ ಪಾಸ್ವರ್ಡ್ ಗೆ ಮದುವೆ ಅಂತೆ.... ಕಂಡ್ರೀ. </span></span></p><p><span class=""><span style="font-size:130%;"><span style="font-family:arial;">ಪೀ ಯೂ ಸಿ ಓದೋವಾಗ ಸುಮಾರು ಹತ್ತು ವರ್ಷಗಳ ಹಿಂದೆ ನನಗೊಬ್ಬಳು ಆತ್ಮೀಯ ಗೆಳತಿ ಇದ್ದಳು. ಅವಳು ಮೊದಮೊದಲು ಅಸ್ಟೊಂದು ಹತ್ತಿರವಾಗಿರದಿದ್ದರೂ ಸಹ ನಂತರದ ದಿನಗಳಲ್ಲಿ ತುಂಬಾನೆ ಆತ್ಮೀಯಳಾದಳು. ಇದಕ್ಕೆ ಕಾರಣ ಆ ಕಾಲೇಜಿನ ವಾತಾವರಣ, ನಮ್ಮ ಆಟ, ಹಾರಾಟ, ತಲೆಹರಟೆ, ಏನ್ ಎಸ್ ಎಸ್, ಮತ್ತೆ ಆ ಒಂಬತ್ತು ದಿನಗಳ ತಮಿಳುನಾಡು ಪ್ರವಾಸ ಕಾರಣವಿರಬಹುದು. ಈ ರೀತಿಯಲ್ಲೆಲ್ಲೋ ಪರಿಚಯವಾದ ನಮ್ಮ ಗೆಳೆತನ ಅತ್ಯಂತ ಸಮೃದ್ಧವಾಗಿ ಬೆಳೆದು ಇಂದಿಗೂ ಹಾಗೇ ಇದೆ. ಆಗೊಮ್ಮೆ ಈಗೊಮ್ಮೆ ಫೋನ್ ಮಾಡುವ ಮೂಲಕ ಮಾತನಾಡುತ್ತೇವೆ. ಆ ನನ್ನ ಗೆಳತಿ ಅತ್ಯಂತ ಬುದ್ದಿವಂತೆ. ಅವಳ ನಗು, ಮುಗ್ಧ ಮುಖ, ಹಾಗೂ ಅವಳ ಮಾತು ನಮಗೆಲ್ಲರಿಗೂ ಇಸ್ಟಾನ್ದ್ರೆ ಇಷ್ಟ. ಅದರಲ್ಲೂ ನನಗಂತೂ ತುಂಬಾನೆ ಇಷ್ಟ. ಹೇಗ್ಹೇಗೋ ನಾವಿಬ್ರೂ ಸಖತ್ ಫ್ರೆಂಡ್ಸ್ ಆದ್ವಿ. ಅವಳಿಗೆ ನಾನು ತುಂಬಾನೆ ಗೌರವ ಕೊಡ್ತಾ ಇದ್ದೆ. ನಮ್ಮ ಜೊತೆಗೆ ಇನ್ನೂ ತುಂಬಾ ಜನ ಇದ್ರೂ. ಅವರೂ ಸಹ ನಮ್ಮ ಫ್ರೆನ್ದ್ಸೆ ಆಗಿದ್ರು. ಆದರೂ ಅವರೆಲ್ಲರಿಗಿಂತ ಈ ಹುಡುಗಿ ಸ್ವಲ್ಪ ಹೆಚ್ಚು. ಯಾಕೆ ಅಂತಾ ಇನ್ನೂ ಗೊತ್ತಿಲ್ಲ. ನಮ್ಮಿಬ್ಬರ ಗೆಳೆತನದಲ್ಲಿ ಪ್ರೀತಿ ಇತ್ತಾ? ಪ್ರೀತಿ ಅನ್ನೋದೇನಾದ್ರೂ ಗೆಳೆತನದ ಮುಖವಾಡ ಹಾಕ್ಕೊಂಡಿತ್ತಾ? ಪ್ರೀತಿ ಗೆಳೆತನ, ಗೆಳೆತನ ಪ್ರೀತಿ ಅಂತಾ ಜಪಿಸೋ ವಯಸ್ಸಿನ ಕಿತಾಪತಿ ಏನಾದರೂ......! ಉಹೂ ...... ಹಾಗೇನೂ ಇಲ್ಲ. ಅದು ನಿಜವಾದ ಸ್ನೇಹಾನೆ ಆಗಿತ್ತು ಅನ್ಸತ್ತೆ. ಅದಕ್ಕೇನೆ ನಾವಿಬ್ರೂ ಇಂದಿಗೂ ಯಾವುದೇ ಮುಜುಗರ ಇಲ್ಲದೆ ನಿರಾಳವಾಗಿ, ಆತ್ಮೀಯತೆಯಿಂದ ಮಾತಾಡ್ಲಿಕ್ಕೆ ಸಾದ್ಯವಾಗಿರೋದು. ಆದ್ರೆ ಅದೇನೋ ಗೊತ್ತಿಲ್ಲ ಆ ದಿನ ನಾನು ನನ್ನ ಈ ಮೇಲ್ ಐಡಿ ಕ್ರಿಯೇಟ್ ಮಾಡೋವಾಗ ಪಾಸ್ವರ್ಡ್ ಗೆ ದಿಡೀರ್ ಅಂತ ಅವಳ ಹೆಸರೇ ಬಂತು. ಆ ಗಟ್ಟಿ ಸ್ನೇಹದ ಕುರುಹಿಗಾಗಿ ಅನ್ಸತ್ತೆ. ನಾನೂ ಅದೇ ಹೆಸರನ್ನ ಹಾಕಿದೆ. ಅದರಲ್ಲೇನಾದ್ರೂ ತಪ್ಪಿದೆಯ? ಅದಕ್ಕೆ ಶಾಶ್ವತವಾಗಿ ಅದೇ ಹೆಸರೇ ಇತ್ತು. ಹೀಗಿರುವಾಗ ಮೊನ್ನೆ ನನ್ನ ಅಜ್ಜಿ ಊರಿನ, ಪಿ ಯೂ ಸಿ ಗೆಳೆಯ ಒಬ್ಬ ಸಿಕ್ಕಿದ. ಸಿಕ್ಕಿದವನೇ ಹೇ ನಿನ್ನ ಫ್ರೆಂಡ್ ........ಗೆ ಮದುವೆ ಕಣೋ ಅಂದ. ಯಾರಿಗೋ ಅಂತ ನಾ ಕೇಳಿದ್ದಕ್ಕೆ, ಅವ ಹೇಳಿದ್ದು ನನ್ ಪಾಸ್ವರ್ಡ್ ಹೆಸರನ್ನೇ. ಹೌದೇನೋ .....? ತುಂಬಾ ಖುಷಿ ಆಗ್ತಿದೆ ಕಣೋ. ಮತ್ತೆ ಅವ್ಳು ಹೇಳಲೇ ಇಲ್ಲಾ ಅಂತಾ ಅವ್ನಿಗೆ ನಗು ನಗುತಾ ಹೇಳಿದ್ರೂ ಸಹ ಒಳಗೆಲ್ಲೋ ಸ್ವಲ್ಪ ನೋವಾಗ್ತಾ ಇತ್ತು. ಯಾಕೆ ಅಂತಾನೆ ಗೊತ್ತಾಗ್ಲಿಲ್ಲ. ಆಗೆಲ್ಲಾ ಮತ್ತದೇ ಯೋಚನೆ ನಮ್ ಗೆಳೆತನ ಏನಾದರೂ, ಎಲ್ಲಾದ್ರೂ <strong><span style="color:#cc0000;">"ಒಂದ್ ಕಣ್ಣನ್ನ"</span></strong> ಮಿಟುಕಿಸಿತ್ತಾ.....? ಅಂತಾದ್ದೇನೂ ಗೊತ್ತಾಗ್ಲಿಲ್ಲಪ್ಪ. ಇರಲಿ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಆತ್ಮೀಯ ಗೆಳತಿಯ ಹೆಸರು ನನ್ನ ಈ ಮೇಲ್ ಐಡಿ ಗೆ ಪಾಸ್ವರ್ಡ್ ಆಗಿ ನನ್ನ ಕೈ ಬೆರಳುಗಳ ತುದಿಯಲ್ಲಿ ಕುಣೀತಾ ಇದ್ಲು. ಆದ್ರೆ ಈಗ ನನ್ನ ಪಾಸ್ ವರ್ಡ್ ಗೆ ಮದುವೆ ಇದೆ. ಹಾಗಾಗಿ ಅನಿವಾರ್ಯವಾಗಿ ಆ ಗೆಳತಿ ಹೆಸರನ್ನ ಭಾರವಾದ ಹೃದಯದಿಂದ ತೆಗೆದು ಬೇರೊಂದು ಹೆಸರು ಪಾಸ್ ವರ್ಡ್ ರೀತಿಯಲ್ಲಿ ಈಗಾಗ್ಲೇ ನನ್ನ ಬೆರಳುಗಳನ್ನ ಬಲವಂತವಾಗಿ ಕುಣಿಸ್ತಾ ಇದೆ. </span></span></span></p><p><span class=""><span style="font-size:130%;"><span style="font-family:arial;"><span class="">ಏನೇ ಇರಲಿ ನನ್ನ ಪಾಸ್ ವರ್ಡ್</span> ನ ಮದುವೆಗೆ ನೀವೆಲ್ಲ ತುಂಬು ಹೃದಯದಿಂದ ಹಾರೈಸುತ್ತೀರಾ ಅಂತ ಭಾವಿಸಿದಿನಿ. <span style="color:#ff0000;"><strong>ಹ್ಞಾ.......ನೆನಪಿರಲಿ, ಆಗಮನ ಮತ್ತು ಆಶೀರ್ವಾದವೇ ಉಡುಗೊರೆ </strong></span></span></span></span></p>prashihttp://www.blogger.com/profile/17424449836173486264noreply@blogger.com5tag:blogger.com,1999:blog-357559050894046621.post-73563264536726168782009-10-20T02:10:00.000-07:002009-10-20T03:06:35.774-07:00ಅಪ್ಪಾ...... ನನ್ನ ಕೈ ಬೆರಳುಗಳು ಮತ್ತೆ ಬೆಳೆಯೋದು ಯಾವಾಗ?<span style="font-size:130%;">ಒಬ್ಬ ವ್ಯಕ್ತಿ ಒಂದು ದಿನ ತನ್ನ ಕಾರನ್ನ ತೊಳೀತಾ <span class="">ಇದ್ದ. </span>ಆಗ ಅಲ್ಲೇ ಇದ್ದ ಅವನ ನಾಲ್ಕು ವರ್ಷದ ಮಗ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಒಂದು ಮೂಲೆಯಲ್ಲಿ ಗೀಚುತ್ತಾ <span class="">ಇದ್ದ. </span>ಅದನ್ನ ನೋಡಿ ತಂದೆಗೆ ವಿಪರೀತ ಕೋಪ ಬಂದು ಅದನ್ನ ತಡೀಲಾರದೆ ಮಗುವಿನ ಮುದ್ದಾದ ಕೈ ಬೆರಳುಗಳ ಮೇಲೆ ಅತ್ಯಂತ ಬಲವಾಗಿ ಹಲವಾರು ಬಾರಿ <span class="">ಹೊಡೆಯುತ್ತಾನೆ. </span>ಆದರೆ ಕೊನೆಗೊಮ್ಮೆ ತನ್ನ ಕೋಪದ <span class="">ಅರಿವಾಗಿ, </span>ತಪ್ಪಿನ ಮನವರಿಕೆಯಾಗಿ ತಂದೆಯು ತನ್ನ ಮಗುವನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ <span class="">ಸೇರಿಸುತ್ತಾನೆ. </span>ಅಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ <span class="">ಹೋದರು. </span>ಆದರೆ ಅಲ್ಲಿ ಆ ಮಗು ತನ್ನೆಲ್ಲಾ ಬೆರಳುಗಳನ್ನ <span class="">ಕಳೆದುಕೊಂಡಿರುತ್ತದೆ. </span>ತನ್ನ ತಂದೆಯನ್ನು ನೋಡಿದ ಆ ಮಗು ತನ್ನ ನೋವು ತುಂಬಿಕೊಂಡ ಕಣ್ಣುಗಳಿಂದ ತಂದೆಯನ್ನ <span class="">ಕೆಳುವುದೆನೆಂದರೆ, <strong><span style="color:#cc0000;">"</span></strong></span><strong><span style="color:#cc0000;">ಅಪ್ಪಾ ....ಯಾವಾಗ ನನ್ನ ಕೈ ಬೆರಳುಗಳು ಮೊದಲಿನಂತೆ ಬೆಳೆಯೋದು ?"</span></strong> ಅಂತ. ಈ ಪ್ರಶ್ನೆ ಕೇಳಿದ ತಂದೆಗೆ ಇನ್ನೂ ದುಃಖ ತಡೆಯಲಾಗಲಿಲ್ಲ. ಮಾತೇ ಬಾರದಂತಾಗಿ ತನ್ನ ಕಾರಿದ್ದ ಸ್ಥಳಕ್ಕೆ ಹೋಗಿ ಕಾರಿಗೆ ಮನ ಬಂದಂತೆ ಒದ್ದು ಒದ್ದು ಹತಾಶನಾಗಿ ಅವನು ಮೂಲೆಯಲ್ಲಿ ಕಾರಿಗೆ ಒರಗಿ ಕೂರುತ್ತಾನೆ. ಅಚಾನಕ್ಕಾಗಿ ತನ್ನ ಮಗು ಗೀಚಿದ ಜಾಗ ನೋಡುತ್ತಾನೆ. ಅದರ ಮೇಲೆ ಆ ಮಗು ಬರೆದಿದ್ದೇನು <span class="">ಗೊತ್ತಾ?<span style="color:#cc0000;"><strong> "</strong></span></span><span style="color:#cc0000;"><strong>ಲವ್ ಯೂ ಡ್ಯಾಡಿ "</strong> </span><span style="color:#000000;">ಅಂತ. ಎಷ್ಟು ಪ್ರೀತಿಯಿತ್ತು ಆ ಮಗುವಿನಲ್ಲಿ ಅಲ್ವಾ?</span></span><br /><span style="color:#000000;"><span style="font-size:130%;">ಈ ಕಥೆಯಲ್ಲಿ <span style="color:#ffcc33;"><strong>"ವಸ್ತುಗಳಿರುವುದು ಉಪಯೋಗಿಸಲು, ಮನುಷ್ಯರಿರುವುದು </strong><span class=""><strong>ಪ್ರೀತಿಸಲು"</strong> </span><span style="color:#000000;">ಎಂಬ ಮಾತಿಗೆ ಬದಲಾಗಿ</span> <strong>" ವಸ್ತುಗಳಿರುವುದು ಪ್ರೀತಿಸಲು, ಮನುಸ್ಯರಿರುವುದು </strong><span class=""><strong>ಉಪಯೋಗಿಸಲು"</strong> </span></span><span style="color:#000000;">ಎಂಬಂತಾಗಿದೆ. ಇದನ್ನ ನಾನು ಮೊದಲೇ ಓದಿದ್ದೆ ಅಂತಾ ನೀವನ್ದುಕೊಂದಿದ್ದರೆ ನಿಮ್ಮ ಮಾತು ನಿಜ. ಇದು ಯಾರೋ, ಎಲ್ಲೋ ಬರೆದಿದ್ದು ನನ್ನ ಗೆಳೆಯ ಒಬ್ಬ ಮೇಲ್ ಮಾಡಿದ್ದ. ಅರ್ಥಪೂರ್ಣ ಹಾಗೂ ಮನ ಕಲುಕುವಂತೆಇತ್ತಲ್ಲ ಎಂದು ನಿಮಗೂ ತಿಳಿಸುವ ಮನಸ್ಸಾಯಿತು ಬರೆದೆ. ನಿಮ್ಮ ಅಭಿಪ್ರಾಯ ?</span></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-5210589057418000052009-09-22T08:48:00.000-07:002010-10-20T21:46:12.055-07:00ಅಜ್ಜಾ........... ನಿನಗೊಂದು ಪತ್ರ<a href="https://blogger.googleusercontent.com/img/b/R29vZ2xl/AVvXsEjdEIbFAuIjf1JEB3LNpUGtdwV3KCkDXVoInQeheZPrUFvZ04n5ddodme05ClOKAy3PYMvVGdyrIimYTo2Y21jNFqAAoxb9klGtnhR7uRHXUmcY6FBTEOJcTcnOiqgdAWi5BfXUpRCUdQ/s1600/Photo0440.jpg"><img id="BLOGGER_PHOTO_ID_5530354174541152530" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 240px" alt="" src="https://blogger.googleusercontent.com/img/b/R29vZ2xl/AVvXsEjdEIbFAuIjf1JEB3LNpUGtdwV3KCkDXVoInQeheZPrUFvZ04n5ddodme05ClOKAy3PYMvVGdyrIimYTo2Y21jNFqAAoxb9klGtnhR7uRHXUmcY6FBTEOJcTcnOiqgdAWi5BfXUpRCUdQ/s320/Photo0440.jpg" border="0" /></a><br /><div><a href="https://blogger.googleusercontent.com/img/b/R29vZ2xl/AVvXsEiq4RsnMaUZXHqk7d0juIVpGT5kcWVCHa7aZb7a43_acore_WXXl4ViruAzUGyDpyprjYWxV3Mjtz3TkWohhFu22H0yNO34r2A3jLE0tUHIp2OhXNGIoTiXvWlaaHHRZktMKODq-87obg/s1600/Photo0116.jpg"><img id="BLOGGER_PHOTO_ID_5530353424031796226" style="FLOAT: left; MARGIN: 0px 10px 10px 0px; WIDTH: 240px; CURSOR: hand; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEiq4RsnMaUZXHqk7d0juIVpGT5kcWVCHa7aZb7a43_acore_WXXl4ViruAzUGyDpyprjYWxV3Mjtz3TkWohhFu22H0yNO34r2A3jLE0tUHIp2OhXNGIoTiXvWlaaHHRZktMKODq-87obg/s320/Photo0116.jpg" border="0" /></a><br /><br /><div><span style="font-size:130%;">ಅಜ್ಜ, ಹೇಗಿದ್ದೀಯ? ಹೇಗಿದೆ ನಿನ್ ಪ್ರಪಂಚ. ಅಲ್ಲೆಲ್ರೂ ನಿನ್ನ ಏನಂತ ಮತಾಡ್ಸಿದ್ರು. ನನ್ನಜ್ಜಿ ಹೇಗಿದಾಳೆ. ಮೊನ್ನೆ ಭಾನುವಾರ ರಾತ್ರಿ ಮಾವ ಫೋನ್ ಮಾಡಿದ್ದ. ನಿಂಗೆ ಹುಷಾರಿಲ್ಲ ಇನ್ನೊಂದು ಸಾರಿ ಬಂದು ನೋಡ್ಕೊಂಡ್ ಮಾತಾಡ್ಸ್ಕೊಂಡ್ ಹೋಗು ಅಂತ ಅಂದಿದ್ದ. ನಿಂಗೊತ್ತಾ ಅವತ್ತೇ ರಾತ್ರಿ ನಾ ಹೊರಟು, ಶಿವಮೊಗ್ಗ ರೈಲು ಹತ್ತಿಯಾಗಿತ್ತು. ಬೆಳಿಗ್ಗೆ ಶಿವಮೊಗ್ಗಕ್ಕೆ ಬಂದಾಗ ಆರೂವರೆಯಾಗಿತ್ತು. ಮಾವ ಹೇಳಿದ್ದ, ಬೆಳಿಗ್ಗೆ ಏಳೂವರೆಗೆ ಬಸ್ಸಿದೆ ಅಂತ. ಆದ್ರೆ ಯಾವ ಬಸ್ಸು ಅಂತ ನಾನೂ ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಅದಿಕ್ಕೆ ಮತ್ತೆ ಫೋನ್ ಮಾಡಿದಾಗಲೇ ಮಾವ ಸರಿಯಾಗಿ ಹೇಳಿದ್ದು. ಏಳೂವರೆಗೆ ಗಣೇಶ ಬಸ್ಸಿದೆ, ನೀನು ಅಲ್ಲೇ ಹೂವು ಹಿಡ್ಕೊಂಡ್ ಬಾ. ಅಜ್ಜ ರಾತ್ರೀನೇ ಎರಡೂವರೆಗೆ ತೀರ್ಕೊಂಡಿದಾರೆ ಅಂತ. ತುಂಬಾ ನೋವಾಯ್ತು ಅಜ್ಜ. ಆ ಕ್ಷಣ ಏನೇನೋ ನೆನಪಾಯ್ತು. ನಾ ಹುಟ್ಟಿದಾಗಿನಿಂದ ನಿನ್ನ ಮನೇಲಿ, ನಿಮ್ಮೆಲ್ಲರ ಜೊತೆಗೆ ಬೆಳೆದವನು. ಅದರಲ್ಲೂ ನಿನ್ನ ಪ್ರೀತಿ, ಕೋಪ ಎಲ್ಲಾ ನೋಡಿದವನು, ಅನುಭವಿಸಿದವನು. ಅದೆಸ್ಟು ಸಲ ನೀ ನನ್ನ ಸ್ನಾನ ಮಾಡಿಸಿಲ್ಲ, ಅದೆಸ್ಟು ಸಲ ನಿನ್ನ ಹೆಗಲ ಮೇಲೆ ಕೂತು ತೋಟ, ಗದ್ದೆ, ಅಸ್ಟೇ ಏಕೆ ಶನಿವಾರ ಶನಿವಾರ ದಿನ ಮಾತ್ರ ಕಟ್ಟಿಂಗ್ ಮಾಡಿಸ್ಕೊಲ್ಲೋದಿಕ್ಕು ನಿನ್ನ ಹೆಗಲ ಮೇಲೆ ನನ್ ಸವಾರಿ. ನಿನ್ ಜೊತೆ ಆ ಭಯಂಕರ "ಕಾನುಮನೆ ಕಾನು, ಹನ್ದೊಲ್ಲಿ ಕಾನಲ್ಲಿ" ಗಬ್ಬದ ದನ ಕರು ಹಾಕಿತ್ತು ಅಂತ ರಾತ್ರಿ ಹಗಲೆಲ್ಲ ಹುಡ್ಕಿದ್ದು, ಇಬ್ಬರೇ ಬ್ಯಾಣದಲ್ಲಿ ಎಮ್ಮೆ, ಎತ್ತಿನ ಮೆಯಿಸಿದ್ದು, ಆಗ ನೀ ನನ್ಗೆಸ್ಟು ಪೆಟ್ಲೆ, ಬುಗುರಿ, ಚಿನ್ನಿದಾಂಡು, ಬಾರುಕೋಲು, ಗಾಡಿ, ಗಾಡಿಚಕ್ರ, ಗಿರಿಗಿಟ್ಲೆ ಇನ್ನೂ ಏನೇನೋ ಆಟದ ವಸ್ತುಗಳನ್ನ ಮಾಡಿಕೊಟ್ಟಿದ್ದೆ. ಅದೇನೂ ಒಂದೆರಡು ಬಾರಿಯಲ್ಲ ಪದೇ ಪದೇ. ಹಾಗೆ ಅದನ್ನ ಹಾಳು ಮಾಡಿಕೊಂಡಾಗ ನೀ ಕೊಟ್ಟ ಅದೇ ಬಾರುಕೊಲಿನ<span class=""> ಎಟುಗಳೂ ನೆನಪಾಯ್ತು.</span> ನಿನ್ನೊಂದಿಗೆ ದೇವಸ್ಥಾನಗಳಿಗೆ ಸುತ್ತಾಡಿದ್ದು ನೆನಪಾಯ್ತು. ನಿನ್ನ ದೈವಭಕ್ತಿ, ಹಬ್ಬದ ದಿನಗಳಲ್ಲಿ ನಿನ್ನ ಸಂಬ್ರಮದ ಹಾಗು ಅಚ್ಚುಕಟ್ಟು ಆಚರಣೆ, ಶನಿವಾರದ ಒಪ್ಪೊತ್ತು, ಅವತ್ತಿನ ಪೂಜೆಯಲ್ಲಿ ಹಣೆ, ಮೈಗೆಲ್ಲ ನಾಮ ಹಾಕ್ಕೊಂಡಾಗ ನನಗೂ ಜೊತೆ ಕೂರಿಸಿಕೊಂಡು ನಿನ್ನಂತೆ ನಂಗೂ ಹಚ್ಚುತ್ತಿದ್ದೆ. ಇಂಥವೇ ಕೆಲವೊಂದು ವಿಚಾರಗಳನ್ನ ನಾನು ಚಿಕ್ಕವನಿದ್ದಾಗ ನಿನ್ನನ್ನೇ ಅನುಕರಿಸುತ್ತಿದ್ದೆ, ಅನುಸರಿಸುತ್ತಿದ್ದೆ. ನಿನ್ನ ದೈತ್ಯ ದೇಹ, ಗಾಂಭೀರ್ಯ, ಅಚ್ಚುಕಟ್ಟು, ಸ್ವಚ್ಛತೆ, ಸರಳತೆ ಜೋತೆಗೊಂದಿಸ್ಟ್ ಸಿರಿತನದ ಗತ್ತು ಇದೆಲ್ಲ ಒಂದೆರಡು ಕ್ಷಣದಲ್ಲೇ ಕಣ್ಣೀರ ಹನಿಯೊಳಗೆ ನೆನಪಾಗಿ ಜಾರಿದವು. ನೋವಿದ್ದರೂ ತೋರಗೊಡದೆ ಸಹಜವಾಗಿ ಮನೆಯೊಳಗೆ ಬಂದು ನಿನ್ನ ಉಸಿರಿಲ್ಲದ ದೇಹ ನೋಡಿದಾಗ ಬದುಕು ಇಸ್ಟೇನಾ? ಅಂತನ್ನಿಸಿತು. ನಿನ್ನ ನೋಡಿ ಭಾರವಾದ ಎದೆ ಹೊತ್ತುಕೊಂಡು ಹೊರ ಬರುವಾಗ, "ಇವನು ಬಾಳಾ ಗಟ್ಟಿಗಸ್ತ. ಸಿಕ್ಕಾಪಟ್ಟೆ ಧೈರ್ಯದ ಮನುಷ್ಯ. ದೊಡ್ಡ ಜೀವ ಬೇರೆ. ಪ್ರಾಯದಲ್ಲಿ ಒಂದು ಸರಿಯಾದ 'ಹುಲಿ' ಹೊಡೆದಿದ್ದ. ಅದನ್ನ ಇವನ ಜೊತೆ ಗಾಡಿ ಮೇಲೆ ಇಟ್ಟು ಊರ ತುಂಬಾ ಮೆರವಣಿಗೆ ಮಾಡಿದ್ವಿ. ಅಂಥಾ ಬೇಟೆಗಾರ" ಎಂಬ ಮಾತು ಕಿವಿಗೆ ಬಿತ್ತು. ತಿರುಗಿ ಆ ಕಡೆ ನೋಡಿದ್ರೆ ನಿನಗಿಂತಾ ಚಿಕ್ಕವರಾದ್ರೂ ಕೂಡಾ ಅಜ್ಜನ್ದಿರೆ ಆಗಿದ್ದವರೆಲ್ಲ ಒಂದು ಕಡೆ ಕೂತು ನಿನ್ನ ಬಗ್ಗೆ ಮಾತಾಡ್ತಾ ಇದ್ರು. ನೋಡಿದ್ಯಾ ಅಜ್ಜ ನೀ ಮಾಡಿದ ಒಂದೊಂದು ಕೆಲಸದಲ್ಲೂ ನಿಂದು ಅನ್ನೋದೊಂದಿರ್ತಿತ್ತು. ಅಲ್ಲೇ ನೂರಾರು ಹಂದಿ ಹೊಡೆದವ ಇದ್ರೂ ಬೇಟೆಗಾರ ಅನ್ನಿಸ್ಕೊಲ್ಲಿಲ್ಲ ನೀ ಒಂದ್ ಹುಲಿ ಹೊಡೆದು ಬೇಟೆಗಾರ ಅನ್ನಿಸ್ಕೊಂಡೆ. ಮೊನ್ನೆ ಅಂದ್ರೆ ಮೊನ್ನೆ ಎರಡು ತಿಂಗಳ ಹಿಂದೆ ಅಜ್ಜಿ ಕಳಕೊಂಡ ನನಗೆ ನೀನೊಬ್ಬನೇ ಅಜ್ಜ ಅಂತಾ ಕೊನೆಯದಾಗಿ ಉಳಿದುಕೊಂಡವನು. ನೀನೂ ಇನ್ಮೇಲೆ ನೆನಪು ಮಾತ್ರ. ನಿನ್ನ ಬಗ್ಗೆ, ನಿನ್ನ ಪ್ರೀತಿ ಬಗ್ಗೆ ನಾ ಇಲ್ಲೇನೆ ಬರೆದರೂ ಅದು ಇರುವೆ ಗೂಡಿನ ಹೊರಗೆ ಹರಿದಾಡುವ ನಾಲ್ಕಾರು ಇರುವೆಯಂತೆ. ಇನ್ನೂ ಗೂಡಿನಲ್ಲಿರುವ ಸಹಸ್ರ ಇರುವೆಯಂತೆ ನಿನ್ನ ನೆನಪು, ಆರೈಕೆ, ನಿನ್ನಿಂದ ಕಲಿತದ್ದು ಎಲ್ಲ ನನ್ನೊಳಗೆ ಇನ್ನೂ ಹಸಿರಾಗಿದೆ. ಇದು ಬರೀ ನನ್ನ ಹೃದಯ ಭಾರವನ್ನು ಸ್ವಲ್ಪ ಹೊರ ಹಾಕ್ಲಿಕ್ಕೆ ಬರೆದಿದ್ದಸ್ಟೇ. ಅಜ್ಜ ಈ ಪತ್ರ ಮುಗಿಸುವಾಗ ಆ ದೇವರಲ್ಲಿ ಬೇಡಿಕೊಳ್ಳುವುದೆನೆಂದರೆ ನಿನ್ನ ಮತ್ತು ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಜ್ಜ. ಮತ್ತೊಮ್ಮೆ ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತಿರುವ ನಿನ್ನ ಮೊಮ್ಮಗ ಪ್ರಶಾಂತ.<br /></span><span class=""></span></div></div>prashihttp://www.blogger.com/profile/17424449836173486264noreply@blogger.com2tag:blogger.com,1999:blog-357559050894046621.post-47318048968595773712009-08-31T04:53:00.000-07:002010-10-20T21:31:45.257-07:00ನಂದಿ ಬೆಟ್ಟ ಕೊಟ್ಟ ಖುಷಿ<a href="https://blogger.googleusercontent.com/img/b/R29vZ2xl/AVvXsEiSyE4ifyzK19kKp-9H2ATSXD-Iu9_ScFy5lpC65m7sEv64BjSt-P8sFTh0GwfD_7Q5yNJa8d_6pFXxEn7owSyZ9l9SJ8dIkiREKkJIj1PmeIjcnxBhTogqDHJceWPddiRKP1BXQt-7gg/s1600/Photo0845.jpg"><img id="BLOGGER_PHOTO_ID_5530350023798364546" style="FLOAT: right; MARGIN: 0px 0px 10px 10px; WIDTH: 343px; CURSOR: hand; HEIGHT: 264px" alt="" src="https://blogger.googleusercontent.com/img/b/R29vZ2xl/AVvXsEiSyE4ifyzK19kKp-9H2ATSXD-Iu9_ScFy5lpC65m7sEv64BjSt-P8sFTh0GwfD_7Q5yNJa8d_6pFXxEn7owSyZ9l9SJ8dIkiREKkJIj1PmeIjcnxBhTogqDHJceWPddiRKP1BXQt-7gg/s320/Photo0845.jpg" border="0" /></a> <a href="https://blogger.googleusercontent.com/img/b/R29vZ2xl/AVvXsEhx9ij-fNovBu7QTOSJYQg80M5-8ut3BP5_CUrTCqgj7jkcYLdnz5u5QdSsOFkqD3rANwhh_j2HssFF6CbpE-G492PfxKei2EW0woQEO1lSPYgALJopXS0-iPxKd2dZ4J4eekvD0-113w/s1600/Photo0834.jpg"><img id="BLOGGER_PHOTO_ID_5530346964154322114" style="WIDTH: 320px; CURSOR: hand; HEIGHT: 265px" alt="" src="https://blogger.googleusercontent.com/img/b/R29vZ2xl/AVvXsEhx9ij-fNovBu7QTOSJYQg80M5-8ut3BP5_CUrTCqgj7jkcYLdnz5u5QdSsOFkqD3rANwhh_j2HssFF6CbpE-G492PfxKei2EW0woQEO1lSPYgALJopXS0-iPxKd2dZ4J4eekvD0-113w/s320/Photo0834.jpg" border="0" /></a><br /><div><br /><br /><div><a href="https://blogger.googleusercontent.com/img/b/R29vZ2xl/AVvXsEgMnVAlD0OgYDpJ9Q3lNUGZLm_wzYn63eGqCzqBDWRnSGR8MPUFhP6C25hknRYsNE3M0Uea1YjOvT13bcuiOhBpuTZeYi3zU_vXYvUS9NMptD7QYnBK8bQjpfwgt5hUI1lrv12XZnC2Rg/s1600/Photo0855.jpg"><img id="BLOGGER_PHOTO_ID_5530345301340503250" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="https://blogger.googleusercontent.com/img/b/R29vZ2xl/AVvXsEgMnVAlD0OgYDpJ9Q3lNUGZLm_wzYn63eGqCzqBDWRnSGR8MPUFhP6C25hknRYsNE3M0Uea1YjOvT13bcuiOhBpuTZeYi3zU_vXYvUS9NMptD7QYnBK8bQjpfwgt5hUI1lrv12XZnC2Rg/s320/Photo0855.jpg" border="0" /></a><br /><br /><br /><div><span style="font-size:85%;"><span style="font-size:130%;">ತುಂಬಾ ದಿನದ ಆಸೆಯೊಂದು ಮೊನ್ನೆ ಭಾನುವಾರ ಪೂರ್ತಿಯಾಗಿತ್ತು. ಅದೇನೆಂದರೆ ನಂದಿ ಬೆಟ್ಟ ನೋಡುವುದಾಗಿತ್ತು. ಅದಕ್ಕಾಗಿ ಕಳೆದ ವಾರಾನೇ ಗೆಳೆಯರೆಲ್ಲ ಸೇರಿ ಮುಂದಿನ ಭಾನುವಾರ ನಂದಿಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಿದೆವು. ಅದರಂತೆ ಭಾನುವಾರ ಬೆಳಿಗ್ಗೆ ಸುಮಾರು ಐದೂವರೆಗೆ ಸರಿಯಾಗಿ ಚುಮು ಚುಮು ಚಳಿಯಲ್ಲಿ ಬೈಕ್ ಮಾಡಿಕೊಂಡು ಹೊರಟ್ವಿ. ಜೊತೆಗೆ ಬೆಳಿಗ್ಗೆ ಬೇಗ ಎದ್ದು ಮಾಡಿದ್ದ ಟೊಮ್ಯಾಟೊ ಬಾತ್ ಬೆನ್ನ ಮೇಲಿನ ಬ್ಯಾಗ್ನಲ್ಲಿತ್ತು. ನಮ್ಮನೆಯಿಂದ ನಾನು ಮತ್ತು ನನ್ಗೆಳೆಯ ಚಂದ್ರು ನನ್ ಬೈಕ್ನಲ್ಲಿ, ಹಾಗೆ ಇನ್ನೊಬ್ಬ ನನ್ ಫ್ರೆಂಡ್ ಉಮೇಶನ ಬೈಕ್ನಲ್ಲಿ ಅವನ ಗೆಳೆಯ ಶಶಾಂಕ್ ಇದ್ದ. ಹೀಗೆ ಹೊರಟವರು ಕೆ ಆರ್ ರೋಡ್ ಮೇಲೆ ಮಾರ್ಕೆಟ್ ದಾಟಿ ವಿಧಾನಸೌಧ ನೋಡ್ತಾ ನೋಡ್ತಾ ಮುಂದೆ ಹೆಬ್ಬಾಳದ ಹತ್ತಿರ ಕೊಲಂಬಿಯ ಆಸ್ಪತ್ರೆ ಎದುರಿಗೆ ಬೈಕ್ ನಿಲ್ಲಿಸಿದೆವು. ಅಲ್ಲಿಗೆ ಮತ್ತೈದು ಬೈಕ್ ಬಂದವು. ಅದರಲ್ಲಿ ನನ್ ತಮ್ಮ ಮತ್ತು ನನ್ನತ್ತೆಮಗ ಇಬ್ಬರೇ ನಂಗೆ ಚಂದ್ರುಗೆ ಗೊತ್ತಿದ್ದಿದ್ದು. ಮತ್ತೆಲ್ಲ ನಮಗೆ ಹೊಸ ಪರಿಚಯದವರಾಗಿದ್ದರು. ಅಂದರೆ ಅವರೆಲ್ಲ ಉಮೇಶನ ಫ್ರೆಂಡ್ಸ್. ಅಲ್ಲಿಂದ ಟೀಕುಡಿದು ಹೊರಟ ನಮ್ಮ ತಂಡದಲ್ಲಿ ಏಳು ಬೈಕ್, ಹದಿನಾಲ್ಕು ಜನರ ಪಯಣ ನಂದಿ ಬೆಟ್ಟದ ಕಡೆಗೆ. ಆ ಸುಂದರ ರಸ್ತೆಗೆ ಎಲ್ಲರೂ ಏರ್ ಪೋರ್ಟ್ ರಸ್ತೆ ಅನ್ನೋದು ಸರಿಎನೋ ಅನ್ನಿಸ್ತು. ಕಾರಣ ಅಲ್ಲಿ ಓಡಾಡೋ ಪ್ರತಿಯೊಂದು ವಾಹನಾನು ವಿಮಾನದ ತರಾನೆ ಗುಯ್ನ್ನ್ನ್ ಅಂತಾನೆ ಶಬ್ದ ಮಾಡ್ತಾ ಸುಯ್ನ್ನ್ ಸುಯ್ನ್ನ್ ಅಂತ ಓಡಾಡ್ತವೆ.ಸ್ವಲ್ಪ ಭಯದಲ್ಲೇ ಕೊನೆ ಲೈನ್ ನಲ್ಲಿ ಬೈಕ್ ಓಡಿಸ್ತಿದ್ದ ನನಗೆ ಹಿಂದಿಂದ ದೊಡ್ಡದೊಂದು ಲಾರಿ ಬರ್ತಾ ಇದೆ ಅಂತ ಅನ್ನಸ್ತು. ಅದರ ಶಬ್ದಕ್ಕೆ ಕೊಂಚ ಹೆದರಿ ಇನ್ನೂ ಸ್ವಲ್ಪ ಸೈಡ್ ಗೆ ಹೋದೆ. ಆ ಲಾರಿ ನನ್ ಹಿಂದೇನೆ ಬಂದೇ ಬಿಡ್ತು ಇನ್ನೇನ್ ಮಾಡ್ಲಿ ಅನ್ನೋಸ್ಟ್ ತ್ತಿಗಾಗ್ಲೆ ಆ ಲಾರಿ ಕಣ್ಣಿಗೆ ಕಾಣದ ವೇಗದಲ್ಲಿ ನನ್ನ ದಾಟಿ ಹೋಗಿತ್ತು. ಆದ್ರೆ ಅದು ಲಾರಿಯಾಗಿರಲಿಲ್ಲ ಬದಲಿಗೆ ಬೈಕ್ ರೇಸ್ ನಲ್ಲಿ ಇರುವಂತಹ ಬೈಕ್ ಆಗಿತ್ತು.ಆ ಸಾಹಸಿಗಳು ಮೈಗೆಲ್ಲ ರೊಬೋಟ್ ತರ ಬಟ್ಟೆ ಹಾಕ್ಕೊಂಡಿದ್ರು.ಅವರು ಹೋದ ವೇಗದಿಂದಾಗಿ ನಂಗೆ ಸರಿಯಾಗಿ ಆ ಬೈಕ್ನ ಚಂದ ನೋಡ್ಲಿಕ್ಕು ಆಗ್ಲಿಲ್ಲ. ನಾನ್ ಭಯಪಟ್ಟಿದ್ದು ನನ್ ಹಿಂದೆ ಕೂತಿದ್ ಭೂಪನಿಗೆ ಗೊತ್ತಾಯ್ತೋ ಇಲ್ವೋ ಗೊತ್ತಿಲ್ಲ. ಯಾಕೆ ಅಂದ್ರೆ ನನ್ ಬೈಕ್ ನಲ್ಲಿ ಸದಾ ಜೊತೆಗಿರೋನು ಅಂದ್ರೆ ಈ ಚಂದ್ರುನೇ. ಇವನ ಒಂದ್ ವಿಶೇಷ ಅಂದ್ರೆ ಹಿಂದೆ ಕೂತರೆ ನಾನು ಪದೇ ಪದೇ ಮುಟ್ಟಿನೋಡ್ಬೇಕು ಅವನ್ನ ಕೂತಿದಾನೋ ಇಲ್ವೋ ಅಂತ.ಅಸ್ಟ್ ನೀಟಾಗಿ ಕೂರ್ತಾನೆ.ನಾನೇನಾದ್ರು ಸ್ವಲ್ಪ ಚನ್ನಾಗಿ ಬೈಕ್ ಓಡಿಸ್ತೀನಿ ಅಂದ್ರೆ ಅದು ಇವನು ಹಿಂದೆ ಕೂತಾಗ ಮಾತ್ರ. ಇರಲಿ, ಆ ಸಾಹಸಿಗಳ ಬಗ್ಗೆನೇ .... ಏನ್ ಸ್ಪೀಡಗೊದ್ರೋ ಮಾರಾಯ ಅಂತ ಹೇಳ್ತಾ ಹೇಳ್ತಾ ಏರ್ ಪೋರ್ಟ್ ದಾಟಿ ನಂದಿ ಬೆಟ್ಟದ ಹತ್ರ ಹತ್ರ ಬಂದ್ವಿ. ಆಗಿನ್ನೂ ಆರೂವರೆ ಇರಬಹುದು. ಅಬ್ಬಬ್ಬಾ ಆ ಬೆಟ್ಟ ನೋಡಿದ್ರೆ, ಬೆಟ್ಟದ ತುದಿಗೆ ಸುತ್ತಲೂ ಹೊಗೆಯ ಟೋಪಿ ಧರಿಸಿದ ಹಾಗೆ ಕಾಣಿಸ್ತಿತ್ತು. ಅಸ್ಟೊಂದು ಹಿಮ ಬೀಳ್ತಾ ಇತ್ತು. ನಿದಾನವಾಗಿ ಬೆಟ್ಟದ ಕೆಳಗಿಂದ ಹತ್ತಲು ಪ್ರಾರಂಬಿಸಿ, ತಿರುವುಗಳಲ್ಲಿ ಸಾಗುವಾಗ ಭಯಮಿಶ್ರಿತ ಆನಂದ ಅನುಭವಿಸಿದ್ದು ಮರೆಯಲು ಸಾದ್ಯವಿಲ್ಲ. ಆಶ್ಚರ್ಯ ಅಂದ್ರೆ ಅಲ್ಲೂ ಕೂಡಾ ಮತ್ತದೇ ಗುಂಯ್ ಗುಂಯ್ ಶಬ್ದ. ಈಗ ಮಾತ್ರ ನಮಗೆ ಗೊತ್ತಾಯ್ತು, ಇದು ಅವ್ರೆ ಬೈಕ್ನವರು ಅಂತ.ಆದ್ರೆ ಆ ಹಾವು ಹರಿದಂತಿರುವ ಡೊಂಕು ಡೊಂಕು ರಸ್ತೆಲೂ ಅವರದ್ದು ಅದೇ ವೇಗ. ನೋಡಿ ನಿಜಕ್ಕೂ ಗಾಬರಿಯಾಯಿತು.ಅವರು ಸ್ಪರ್ದೆಗೆ ತಯಾರಿ ನಡೆಸ್ತಾ ಇದ್ರು. ನಂತರ ಬೆಟ್ಟದ ಮೇಲೆ ಹೊದಾಗಲಂತೂ ಚಳೀ ಚಳೀ. ಪೂರ್ತಿ ಮಂಜಿನಿಂದ ಮುಚ್ಚಿಕೊಂಡಿತ್ತು ಬೆಟ್ಟ. ಇದೇನೂ ಮಲೆನಾಡಿನವನಾದ ನನಗೆ ಹೊಸತೆನಲ್ಲದಿದ್ದರೂ ಸಹ ಸದ್ಯಕ್ಕಿದು ಹಳೆಯ ನೆನಪುಗಳನ್ನ ಮತ್ತೆ ಮತ್ತೆ ಕಣ್ಮುಂದೆ ತಂದಿತು. ಇದೇ ಥರದ ಬೆಟ್ಟಗಳು ನಮ್ಮೂರಿನಲ್ಲಿವೆ. "ಕೆಮ್ಮಣ್ಣುಗುಂಡಿ, ಕುಂದಾದ್ರಿ ಬೆಟ್ಟ, ಆಗುಂಬೆ, ಕೊಡಚಾದ್ರಿ. ಬಾಬಾ ಬುಡನ್ಗಿರಿ" ಇವೆಲ್ಲ ನಮ್ಮೂರಿಗೆ ಕೆಲವೇ ಕಿಲೋಮೀಟರುಗಳ ದೂರದವು. ಅವುಗಳನ್ನೆಲ್ಲ ಸ್ನೇಹಿತರ ಜೊತೆಗೆ ಹತ್ತಿಳಿದ ದಿನಗಳು ಅದೆಸ್ಟೋ. ಈ ನಂದಿ ಬೆಟ್ಟವು ಸಹ ಅಸ್ಟೇ ಸುಂದರವಾದ ಬೆಟ್ಟ. ಈಗ ನಮ್ಮದು ಬೆಟ್ಟ ಸುತ್ತುವ ಸರದಿ. ಮೊದಮೊದಲು ಕಂಡಿದ್ದೇ ಆ ದೊಡ್ಡ ಸುಂದರ ಕೆರೆ. ನಿಜಕ್ಕೂ ಸುಂದರವಾಗಿದೆ. ಆಮೇಲೆ ಉದ್ಯಾನ ವನ, ಬಂಡೆಗಲ್ಲು, ಮರಗಿಡ, ಮೊಖವಿಸ್ಮಿತರನ್ನಾಗಿಸುವ ದೇವಸ್ಥಾನಗಳು ಮನಸ್ಸಿಗೆ ಉಲ್ಲಾಸ ತಂದವು. ಆದರೆ ವಿಪರೀತ ಅನ್ನಿಸಿದ್ದು ಅಲ್ಲಿನ ಕೋತಿಗಳ ಅತೀ ಎನ್ನಿಸುವ ಒಗ್ಗಟ್ಟು ಮತ್ತು ಕಿತ್ತು ತಿನ್ನುವ ಬುದ್ದಿ. ಹೌದು, ಅವು ನಾವು ತೆಗೆದುಕೊಂಡು ಹೋಗಿದ್ದ ತಿಂಡಿನ ಯಾರದ್ದೂ ಅನುಮತಿ ಇಲ್ಲದೆ, ಭಯವೂ ಇಲ್ಲದೇ ಕಿತ್ತು ತಿಂದು ಮುಗಿಸಿದವು. ಆಮೇಲೆ ಅಲ್ಲಿಂದ ಭಯಾನಕ ಟಿಪ್ಪೂ ಡ್ರಾಪ್ ನೋಡಿಕೊಂಡು ಕೆಲವೊಂದು ಫೋಟೋ ತೆಗೆದುಕೊಂಡು ನಂದಿ ಬೆಟ್ಟದ ಕೆಳಗೆ ಬರುವಾಗಲೇ ಸ್ವಲ್ಪ ದಣಿವಾದಂತೆ ಆಗಿದ್ದೆವು. ಬೆಟ್ಟದ ಕೆಳಗೆ ಬಂದು ಟೀ ಕುಡಿಯುತ್ತಿರುವಾಗ ಸಮಯ ಸುಮಾರು ಹನ್ನೆರಡು ಘಂಟೆ ಅನ್ನಿಸತ್ತೆ, ಆಗ ಕಂಡಂತ ದೃಶ್ಯ ಚನ್ನಾಗಿತ್ತು. ಅದೇನೆಂದರೆ ನಂದಿಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಬೈಕ್ ನಲ್ಲಿ ಹುಡುಗ ಹುಡುಗಿಯರ ಜೋಡಿಯಿತ್ತು. ಆಗ ಅನ್ನಿಸಿದ್ದೇನೆಂದರೆ ನಾವು ಬೇಗ ಬೆಟ್ಟ ಇಳಿದು ಬಂದೆವ? ಅಂತ. ಇರಲಿ ಈ ಪ್ರವಾಸ ನನಗಂತೂ ವಿಶೇಷ ಅನ್ನಿಸಿದ್ದು, ಮುಂದಿನ ಬೇರೆ ಸುಂದರ ಸ್ಥಳದ ಹುಡುಕಾಟದಲ್ಲಿ ನಾವಿದ್ದೇವೆ. ನೀವೂ ಒಮ್ಮೆ, ಮತ್ತೊಮ್ಮೆ ಸಮಯ ಮಾಡಿಕೊಂಡು ನಂದಿ ಬೆಟ್ಟಕ್ಕೆ ಹೋಗಿಬನ್ನಿ. ಆ ರೋಮಾಂಚನದ ಸವಿ ನೀವೇ ಅನುಭವಿಸಿ.</span><br /></span></div></div></div>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-55169321296759160882009-07-28T05:02:00.000-07:002010-01-08T21:17:09.901-08:00ಸ್ನೇಹ ಅಂದರೆ.......<span style="font-size:130%;">ಮನಸು ಮೌನವಾದಾಗ<br />ಮಾತು ಬಾರದಾದಾಗ<br />ಮಾನ ಹೋಗುವಂತಿರುವಾಗ<br />ಸಿಗುವ ಮುತ್ತಿನಂಥ ಮಾತೇ ಸ್ನೇಹ.<br /><span class=""></span><br /><span class="">ಗೆದ್ದಾಗ ಗಮನಿಸುವ </span><br /><span class="">ಸೋತಾಗ ಸಂತೈಸುವ </span><br /><span class="">ಸತ್ತಾಗ ಸ್ಮರಿಸುವ </span><br /><span class="">ಆ ಜೀವದ ಹೃದಯವೇ ಸ್ನೇಹ.</span><br /><span class=""></span><br /><span class="">ಭಾವನೆಯಲ್ಲಿನ ಭವ್ಯತೆಯನ್ನ</span><br /><span class="">ಕಣ್ಣುಗಳಲ್ಲಿನ ಕನಸುಗಳನ್ನ </span><br /><span class="">ಕನಸುಗಳಲ್ಲಿನ </span><span class="">ಕವನಗಳನ್ನ </span><br /><span class="">ಬರೆಯಲು ಸಿಗುವ ಸ್ಪೂರ್ತಿಯೇ ಸ್ನೇಹ.</span><br /><span class=""></span><br /><span class="">ಸಾಧನೆ ಮಾಡಲು ಸೇತುವೆಯನ್ನ </span><br /><span class="">ಸಮಸ್ಯೆ ಬಂದಾಗ ಸಹಕಾರವನ್ನ </span><br /><span class="">ಸಿಟ್ಟು ಬಂದಾಗ ಸಂಯಮವನ್ನ </span><br /><span class="">ತೋರಿಸುವ ಕೈಗಳೇ ಸ್ನೇಹ.</span><br /><span class=""></span><br /><span class="">ಸುಮ್ ಸುಮ್ನೆ ಸಡಿಲವಾಗದ </span><br /><span class="">ಚಂಗ್ ಚಂಗನೆ ಬಂದು ಹೋಗದ </span><br /><span class="">ನಿಶ್ಚಲವಾದ, ಅಚಲವಾದ, ಶುಭ್ರವಾದ </span><br /><span class="">ಈ ನಮ್ಮ ಬಾಂಧವ್ಯವೇ ಸ್ನೇಹ.</span><br /></span><span class=""></span>prashihttp://www.blogger.com/profile/17424449836173486264noreply@blogger.com3tag:blogger.com,1999:blog-357559050894046621.post-21045999243775409992009-07-28T03:31:00.000-07:002009-07-28T04:39:06.909-07:00ಮನದ ಗೆಳತಿ<span style="font-size:130%;">ನೀ ಇಬ್ಬನಿಯಾದರೆ<br />ನಾ ಗರಿಕೆಯಾಗುವೆ ಗೆಳತಿ<br />ಸದಾ ಶೋಭಿಸುತ್ತಿರು ನನ್ನ ಶಿರದ ಮೇಲೆ.<br /><br />ನೀ ತಾರೆಯಾದರೆ<br />ನಾ ಬಾನಾಗುವೆ ಗೆಳತಿ<br /><span class="">ಸದಾ </span><span class="">ಮಿನುಗುತ್ತಿರು ನನ್ನಲ್ಲೇ.</span><br /><br />ನೀ ಚುಕ್ಕೆಯಾದರೆ<br />ನಾ ಜಿಂಕೆಯಾಗುವೆ ಗೆಳತಿ<br />ಸದಾ ಮಿಂಚುತ್ತಿರು ನನ್ನ ಮೈಮೇಲೆ.<br /><br />ನೀ ತಾವರೆಯಾದರೆ<br />ನಾ ತೊರೆಯಾಗುವೆ ಗೆಳತಿ<br /><span class="">ಸದಾ ಅರಳಿ ನಿಂತಿರು </span><span class="">ನನ್ನ ಎದೆ ಮೇಲೆ</span><br /><br />ನೀ ಮೀನಾದರೆ<br />ನಾ ಸಾಗರವಾಗುವೆ ಗೆಳತಿ<br /><span class=""><span class="">ಸದಾ ನೀ ಆಡುತ್ತಿರು ನನ್ನ ಒಡಲಲ್ಲೇ </span></span></span>prashihttp://www.blogger.com/profile/17424449836173486264noreply@blogger.com1tag:blogger.com,1999:blog-357559050894046621.post-18879363501021919952009-07-28T03:06:00.000-07:002009-07-28T04:43:12.984-07:00ಅನಾಹುತಗಳ ಸರಮಾಲೆ<span style="font-size:130%;">ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ<br />ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.<br /><br />ಮಾನವನ ಸುತ್ತ ಅನಾಹುತಗಳ ಸರಮಾಲೆ<br />ಆದರೂ ಪ್ರಪಂಚವ ನೋಡುವನು ಕಾಮಾಲೆ ಕಣ್ಣಲ್ಲೇ<br />ಮಾಡುವುದೆಲ್ಲ ದೂರದೃಷ್ಟಿಯಿಂದಲೇ<br />ಆದರೆ ಆಗುವುದೆಲ್ಲ ದುರಾದ್ರುಸ್ಟದಲ್ಲೇ<br /><br />ಮಾನವ ಹಾರಾಡುವುದು ವಿಮಾನದಲ್ಲೇ<br />ಆಗ ಹೇಳುತ್ತಾನೆ ಸ್ವರ್ಗ ಇಲ್ಲೇ ಮೇಲೆ<br />ಅನಾಹುತವಾದಾಗ ಮದ್ಯದಲ್ಲೇ<br />ಅವನ ಸಾವು ವಿಮಾನ ಬಿದ್ದ ಸ್ತಳದಲ್ಲೇ.<br /><br />ಮಾನವನ ಜೀವನ ಸಾಗುವುದು ಬೆಳಕಲ್ಲೇ<br />ಅದಕ್ಕಾಗಿ ಹರಡಿರುವನು ತಂತಿಯ ಮಾಲೆ<br />ವಿದುತ್ ಎನ್ನುವ ಮಿಂಚು ಅದರ ಮೇಲೆ<br />ಕೊಂಚ ಎಚ್ಚರ ತಪ್ಪಿದರೆ ಸಾವು ಕ್ಷಣದಲ್ಲೇ<br /><br />ಮಾನವ ಈಗ ತಿರುಗಾಡುವುದೆಲ್ಲಕಾರಲ್ಲೇ<br />ಅದೂ ಘಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲೇ<br />ಅಪ್ಪಿತಪ್ಪಿ ಕಣ್ಣು ಮುಚ್ಚಿದರೆ ತೂಕಡಿಕೆಯಲ್ಲಿ<br />ಮತ್ತೆ ಕಣ್ಣು ತೆರೆಯುವುದು ಪರಲೋಕದಲ್ಲೇ.<br /><br />ಮಾನವನು ಆಹಾರ ಬೆಳೆಯುವುದು ಕಲ್ಮಶದಲ್ಲೇ<br />ಹೀಗಾಗಿ ಅವನ ಹೊಟ್ಟೆಯೂ ತುಂಬಿರುವುದು ವಿಷದಲ್ಲೇ<br />ಆದ್ದರಿಂದ ವರ್ಷವಿಡೀ ನರಳುವನು ರೋಗದಲ್ಲೇ<br />ಅದು ಕೊನೆಯಾಗುವುದು ಆತನ ಸಾವಿನಲ್ಲೆ.<br /><br />ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ<br />ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.<br /></span><span style="font-size:78%;"><span class=""></span></span><br /><span style="font-size:78%;"><span class=""></span></span><br /><span style="font-size:78%;"><span class=""></span></span><br /><span style="font-size:78%;"><span class=""></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-50752484115266263062009-07-28T02:55:00.000-07:002009-07-28T04:44:25.885-07:00ಏಕೆ ಹೀಗೆ?<span style="font-size:130%;">ಮನಸ್ಸಿಗೆ ಬೇಜಾರಾಗಿದೆ<br />ಹೃದಯ ಭಾರವಾಗಿದೆ<br />ದೇಹ ನಿಶ್ಚಲವೆನಿಸಿದೆ<br />ದುಃಖ ಉಮ್ಮಳಿಸುತ್ತಿದೆ<br /><span class="">ಏಕೆ</span> ಹೀಗೆ?<br /><br />ಕಣ್ಣು ಕಾಣದಾಗಿದೆ<br />ಕಿವಿ ಕೇಳದಾಗಿದೆ<br />ಕೈ ಆಡದಾಗಿದೆ<br />ಕಾಲು ನಡುಗುತಲಿದೆ<br />ಏಕೆ ಹೀಗೆ?<br /><br />ಊಟ ಸೇರದಾಗಿದೆ<br />ನೀರು ಬೇಡವಾಗಿದೆ<br />ಬಾಯಿ ಒಣಗಿ ಹೋಗಿದೆ<br />ನಾಲಿಗೆ ಸಪ್ಪೆಯಾಗಿದೆ<br />ಏಕೆ ಹೀಗೆ?<br /><br />ನೆನಪು ಕಹಿಯಾಗಿದೆ<br />ಮಾತೆ ಬಾರದಾಗಿದೆ<br />ಪ್ರೀತಿ ಇಲ್ಲದಾಗಿದೆ<br />ಜೀವನ ಬೇಡವಾಗಿದೆ<br />ಏಕೆ ಹೀಗೆ?<br /><br />ಜೀವನವೆಂದರೆ ಇದೇನಾ?<br />ಇದು ಜೀವನದ ಭಾಗ ಮಾತ್ರಾನಾ?<br />ಇದು ಒಂದೆರಡು ಗಳಿಗೆ ಮಾತ್ರಾನಾ?<br />ಜೀವನಪೂರ್ತಿ ಇದೇನಾ?<br />ಬದಲಾಗುವುದು ಹೇಗೆ?<br /></span><span style="font-size:78%;"><span class=""></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-403658567560107442009-07-28T02:39:00.000-07:002009-07-28T04:45:31.248-07:00ಶಿವರಾತ್ರಿಯ ಸುಂದರಿ<span style="font-size:130%;">ಶಿವರಾತ್ರಿಯ ದಿನದಂದು<br />ನೀ ಬಂದೆ ಪೂಜೆಗೆಂದು<br />ಹೂ, ಹಣ್ಣು, ಕಾಯಿ ಹಿಡಿದು<br />ನಿಂತಿದ್ದೆ ನೀ ಕೈ ಮುಗಿದು.<br /><br />ಪೂಜೆ ಮಾಡುವ ಸಲುವಾಗಿ<br />ನನ್ನ ನೀ ಕರೆದೆ ಮೆಲುವಾಗಿ<br />ನಿನ್ನಂದಕ್ಕೆ ನಾ ಮರುಳಾಗಿ<br />ಪೂಜೆ ಮಾಡಿದೆ ಪೂಜಾರಿಯಾಗಿ.<br /><br />ನಿನ್ನ ನೋಡಿದ ಆ ಹೊತ್ತು<br />ನನ್ನ ಹೃದಯ ಹಾರಿಹೋಯ್ತು<br />ನಿನಗಾಗಿ ಹಂಬಲಿಸುತ್ತ<br />ಹುಡುಕಾಡಿದೆ ಸುತ್ತಾ ಮುತ್ತಾ .<br /><br />ನೀ ಅಲ್ಲೇ ಪಕ್ಕದಲ್ಲೇ ನಿಂತಿದ್ದೆ<br />ನಾ ನಿನ್ನೆ ಗಮನಿಸುತಿದ್ದೆ<br />ನೀ ನನ್ನ ಮನಗೆದ್ದೆ, ಹೃದಯ ಕದ್ದೆ<br />ನಾ ನಿನ್ನ ಪ್ರೀತಿಯ ಬಲೆಗೆ ಬಿದ್ದೆ.<br /><br />ಆಮೇಲೆರಡು ಬಾರಿ ಆಯಿತು<br />ನಮ್ಮಿಬ್ಬರ ಭೇಟಿ<br />ನಾಚಿಕೆಯ ದಾಟಿ, ಭಾವನೆಗಳ ಮೀಟಿ<br />ಸೇರಿಸಿದೆವು ನಾವಿಬ್ಬರೂ ತುಟಿಗೆ ತುಟಿ.<br /><br />ಆಮೇಲೆಏನಾಯ್ತೆ ನಮಗೆ ಗೆಳತಿ<br />ಹೃದಯದಲ್ಲೈತೆ ಈ ಪ್ರೀತಿ<br />ಅದಕ್ಕಡ್ಡಿ ನಮ್ಮಿಬ್ಬರ ಜೀವನ ರೀತಿ<br />ಸುದಾರಿಸಲಿ ಈ ರೀತಿ ನೀತಿ.<br /><br />ನನಗಾಗಿ ನೀ ಬರುವೆ<br />ಅಂತಾ ನಾ ಕಾದಿರುವೆ<br />ನನ್ನ ಹೃದಯ ನೀನಾಗಿರುವೆ<br /><span class="">ನಿನಗಾಗಿ ನಾ ಕಾದಿರುವೆ.</span> </span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-69704832266939887972009-07-28T02:19:00.000-07:002009-07-28T04:38:21.635-07:00ನನ್ನ ಪ್ರೀತಿಯ ಹುಡುಗಿಗೆ<span style="font-size:130%;">ನನ್ನ ಪ್ರೀತಿಯ ಹುಡುಗಿಗೆ<br /><span class="">ಈ ನನ್ನ ಕವನದ ಕೊಡುಗೆ </span><br /><span class="">ಇದರಲ್ಲಿ ಬರೆದಿದ್ದೇನೆ ನಿನಗೆ </span><br /><span class="">ನಾನು ನಿನ್ನ ಪ್ರೀತಿಸುವ ಬಗೆ.</span><br /><span class=""></span><br /><span class="">ಆಕಾಶವನ್ನೇ ನಿನ್ನ ಅಂಗೈಯಲ್ಲಿರಿಸುವೆ </span><br /><span class="">ಆ ಸಾಗರವನ್ನೇ ನಿನ್ನ ಕೈ ಸೆರೆಯಾಗಿಸುವೆ</span><br /><span class="">ತಾರೆಯನ್ನೇ ತಂದು ಹಣೆಮೆಲಿಡುವೆ</span><br /><span class="">ಸುಂದರ ಜಲಪಾತವನ್ನೇ ನಿನ್ನ ಜಡೆಯಾಗಿಸುವೆ.</span><br /><span class=""></span><br /><span class="">ಅರಳುವ ಮೊದಲ ಹೂವು ನಿನಗಾಗಿ </span><br /><span class="">ಬೀಳುವ ಮೊದಲ ಮಂಜು ನಿನಗಾಗಿ </span><br /><span class="">ನನ್ನದೆನ್ನುವ ವಸ್ತುವೆಲ್ಲ ನಿನಗಾಗಿ.</span><br /><span class=""></span><br /><span class="">ನಿನಗಾಗಿ ಕಟ್ಟಿಸುವೆ ಸುಂದರ ಅರಮನೆ </span><br /><span class="">ಅಲ್ಲಿನ ಸಿಂಹಾಸನಕ್ಕೆ ಹಾಕಿಸುವೆ ಚಿನ್ನವನ್ನೇ </span><br /><span class="">ಅದರಲ್ಲಿ ಕೂರಿಸುವೆ ನಾ ನಿನ್ನನ್ನೇ </span><br /><span class="">ಇದೆಲ್ಲ ನಿನಗಾಗಿ ಓ ನನ್ನ ಮನದೆನ್ನೆ.</span><br /><span class=""></span><br /><span class="">ಪ್ರಿಯೆ, ನಿನಗಿದು ಬದುಕಲು ಬೇಕಿಲ್ಲ </span><br /><span class="">ಇದು ಅನಿವಾರ್ಯವೂ ಅಲ್ಲ </span><br /><span class="">ಇದನ್ನೆಲ್ಲಾ ನಾ ನಿನಗೆ ಕೊಡಿಸುವುದಿಲ್ಲ </span><br /><span class="">ಅದು ನನ್ನಿಂದ ಸಾಧ್ಯವೂ ಇಲ್ಲ.</span><br /><span class=""></span><br /><span class="">ಆಸೆಯೆಂಬ ಕನಸು ಬೇಕೇ?</span><br /><span class="">ಪ್ರೀತಿಸುವ ಮನಸು ಸಾಕೆ</span><br /><span class="">ಜಗಮಗಿಸುವ ಅರಮನೆ ಬೇಕೆ?</span><br /><span class="">ಹೃದಯವೆಂಬ ಗುಡಿಸಲಲ್ಲೇ ಜಾಗ ಸಾಕೆ.</span><br /><span class=""></span><br /><span class="">ನನ್ನ ವಿಶಾಲವಾದ ಹೃದಯದಲ್ಲಿ </span><br /><span class="">ನಿನ್ನ ನೆನಪು ಸದಾ ಇರಲಿ </span><br /><span class="">ಅದರ ಒಂದೊಂದು ಬಡಿತದಲ್ಲಿ </span><br /><span class="">ನಿನ್ನ ಹೆಸರು ಹಾಡಾಗಿ ಬರಲಿ </span><br /><span class=""></span><br /><span class="">ಓ ನನ್ನ ಮುದ್ದಿನ ಗೆಳತಿ </span><br /><span class="">ಈ ಹೃದಯಕ್ಕೆ ನೀನೆ ಒಡತಿ </span><br /><span class="">ಇದಕ್ಕಿದ್ದರೆ ಸಮ್ಮತಿ </span><br /><span class="">ನೀನಾಗುವೆ ನನ್ನ ಶ್ರೀಮತಿ.</span><br /></span><span style="font-size:78%;"><span class=""></span></span><br /><span style="font-size:78%;"><span class=""></span></span><br /><span style="font-size:78%;"><span class=""></span></span><br /><span style="font-size:78%;"><span class=""></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-31235562499342464212009-06-30T01:35:00.000-07:002009-07-27T04:48:32.946-07:00ನೀ ನನ್ನೆದುರಿಗಿನ ಅದ್ಭುತ ಕಣೋ<span style="font-size:130%;"><span>ಇದು</span> <span>ತೀರ</span> <span>ಇತ್ತೀಚಿಗೆ</span> <span>ನಡೆದದ್ದು</span>. <span>ಅಂದರೆ</span> <span>ಮೊನ್ನೆ</span> <span>ಮೊನ್ನೆಯದು</span>. <span>ಆವತ್ತು</span> <span>ನಾನು</span> <span>ನಮ್ಮ</span> <span>ಕಾಲೇಜಿನಲ್ಲಿ</span> <span>ಎಗ್ಸಾಂ</span> <span>ನಡೀತಾ</span> <span>ಇತ್ತು</span>. <span>ನಾನು</span> <span>ಎಗ್ಸಾಂ</span> <span>ಡ್ಯೂಟಿ</span> <span>ನಲ್ಲಿದ್ದೆ</span>. <span>ಸುಮಾರು</span> <span>ಹನ್ನೊಂದುವರೆ</span> <span>ಅಸ್ಟೋತ್ತಿಗೆ</span> <span>ನಂಗೊಂದ್</span> <span>ಫೋನ್</span> <span>ಬಂತು</span>. <span>ಫೋನ್</span> <span>ಮಾಡಿದ್ದು</span> <span>ನಂ </span><span>ದೇವೇಂದ್ರಪ್ಪ</span> <span>ಸರ್</span> <span>ಅಂತ</span>. <span>ನಾನ್</span> <span>ಅವರನ್ನ</span> <span>ದೇವು</span> <span>ಅಂತಲೇ</span> <span>ಪ್ರೀತಿಯಿಂದ</span>, <span>ಆತ್ಮೀಯತೆಯಿಂದ</span> <span>ಕರೆಯುವದು</span>. <span>ಕಾರಣ</span> <span>ನನಗೂ </span><span>ಅವರಿಗೂ</span> <span>ಸುಮಾರು</span> <span>ಏಳೆಂಟು</span> <span>ವರ್ಷದ</span> <span>ಗೆಳೆತನ</span> <span>ಕಾರಣವಿರಬಹುದು</span>. <span>ಏನೇ</span> <span>ಇರಲಿ</span>, <span>ನನಗೆ</span> <span>ದೇವು</span> <span>ಕರೆ</span> <span>ಮಾಡಿ</span> <span>ಎಲ್ಲಿದಿಯೋ</span><span> ಅಂದ</span>. <span>ಇಲ್ಲಿ</span> <span>ಎಗ್ಸಾಂ</span> <span>ಡ್ಯೂಟಿನಲ್ಲಿದೀನಿ</span> <span>ಯಾಕೋ</span> <span>ಅಂದೆ</span>. <span>ಬೇಗ</span> <span>ಬಾರೋ</span>, <span>ಪೊಲಿಟಿಕಲ್</span> <span>ಸೈನ್ಸ್</span> <span>ಮಲ್ಲಿಕಾರ್ಜುನ</span> <span>ಬಂದಿದಾನೆ</span> <span>ಅಂತ</span><span>ಹೇಳಿದಾಗ</span>, <span>ಆಯಿತು</span> <span>ಬರ್ತೀನಿ</span> <span>ಅಂದಿದ್ದೆ</span>. <span>ಆದರೆ</span> ....... <span>ಆ</span> <span>ಮಲ್ಲಿಕಾರ್ಜುನ</span> <span>ಅಂದ್ರೆ</span> <span>ಯಾರು</span> <span>ಅಂತ</span> <span>ಗೊತ್ತಾಗಿರಲಿಲ್ಲ</span>. <span>ಅದಕ್ಕಾಗಿಯೇ</span><span> ಏನೋ</span> <span>ಸ್ವಲ್ಪ</span> <span>ಸೋಮಾರಿತನ</span> <span>ಮಾಡಿ</span>, <span>ಹೋದರಾಯಿತು</span> <span>ಅಂತ</span> <span>ಹೇಳಿ</span> <span>ತಡವಾಗಿ</span> <span>ಅಂದ್ರೆ</span> <span>ಹತ್ಹತ್ರ</span> <span>ಒಂದ್</span> <span>ಘಂಟೆಯಾಗಿತ್ತು</span> <span>ನಾ</span><span>ಬಂದಾಗ</span>. ಅಲ್ಲಿ <span>ಆಶ್ಚರ್ಯ</span> <span>ಅನ್ನೋದು</span> <span>ನನಗಾಗಿ</span> <span>ಕಾದಿತ್ತು</span> <span>ಅನ್ಸತ್ತೆ</span>. <span>ಹೌದು</span>..... <span>ಖಂಡಿತ</span> <span>ಆಶ್ಚರ್ಯ</span> <span>ಆಯ್ತು</span>. <span>ಅದೇನೆಂದರೆ</span> <span>ನಾ</span><span>ಕಂಡ</span> <span>ಅದ್ಭುತ</span> <span>ವ್ಯಕ್ತಿಯೊಬ್ಬ</span> <span>ಅಲ್ಲಿ</span> <span>ಕೂತಿದ್ದ</span>. <span>ನನ್ನ</span> <span>ದ್ವ್ಹನಿಯಿಂದಲೇ</span> <span>ಆ</span> <span>ವ್ಯಕ್ತಿ</span> <span>ನನ್ನ</span> <span>ಪರಿಚಯ</span> <span>ಕಂಡುಕೊಂಡ</span>. <span>ನನ್ನ</span> <span>ಮುಟ್ಟಲು</span><span> ಪ್ರಯತ್ನಿಸಿ</span> <span>ತನ್ನ</span> <span>ಕೈಗಳನ್ನ</span> <span>ಮಗುವಿನ</span> <span>ರೀತಿ</span> <span>ಆ</span> <span>ಕಡೆ</span>, <span>ಈ</span> <span>ಕಡೆಯಲ್ಲಾ</span> <span>ಅಲ್ಲಾಡಿಸಲು</span> <span>ಪ್ರಾರಂಭಿಸಿದ</span>. <span>ಕೊನೆಗೆ</span> <span>ನಾನೇ</span> <span>ಕೈ</span> <span>ಮುಟ್ಟಿ </span><span>ನಾನಿರುವ</span> <span>ಜಾಗ</span> <span>ತಿಳಿಸಿದೆ</span>. <span>ಅವನು</span> <span>ನನ್ನೆಡೆಗೆ</span> <span>ನೋಡುತ್ತಾ</span> .......? <span>ನಿಷ್ಕಲ್ಮಶ</span> <span>ನಗೆ</span> <span>ನಕ್ಕು</span> <span>ಏನಪ್ಪಾ</span> <span>ಹೇಗಿದ್ದೀಯ</span>? <span>ಎಸ್ಟ್</span> <span>ವರ್ಷ</span><span>ಆಯ್ತು</span> <span>ನಿಮ್ಮನ್ನೆಲ್ಲ</span> <span>ನೋಡಿ</span> ....? ......<span>ಹಾಂ</span> .....<span>ಅಂತೆಲ್ಲ</span> <span>ಏನೇನೋ</span> <span>ಬಡಬಡಿಸಿದ</span>. <span>ಏನಂದ್ರೆ</span> <span>ಇಸ್ಟೋತ್ತಂಕ</span> <span>ಪ್ರಶಾಂತ</span> <span>ಅಂದ್ರೆ</span><span> ಯಾರು</span> <span>ಅಂತ</span> <span>ಗೊತ್ತಾಗಿರಲಿಲ್ಲ</span> <span>ಕಣೋ</span>. <span>ಇಲ್ಲೇ</span> <span>ಈಗ</span> <span>ನಿನ್ನ</span> <span>ಧ್ವನಿ</span> <span>ಕೇಳಿದ</span> <span>ಮೇಲೆ</span> <span>ಗೊತ್ತಾಗ್ತಾ</span> <span>ಇದೆ</span> <span>ಅಂತ</span> <span>ಅಂದ</span> <span>ನನ್</span> <span>ಗೆಳೆಯ</span>.<br /></span> <div align="left"><span class="" style="font-size:130%;"><span class=""><span class="">ಹೌದು</span></span>, ನೀವಂದುಕೊಂಡಿದ್ದು ನಿಜ. ನನ್ನ ಗೆಳೆಯ ಆ ರೀತಿಯಲ್ಲಾ ಆಡಲಿಕ್ಕೆ ಕರಣ ಒಂದೇ. ಅದೇನೆಂದರೆ ಪ್ರಪಂಚದ ದೃಷ್ಟಿಯಲ್ಲಿ ಮತ್ತು ದೈವ ಸೃಷ್ಟಿಯಲ್ಲಿ ಆತ ದೈಹಿಕವಾಗಿ "ಅಂಧ"ನಾಗಿದ್ದಾನೆ. ಅವನಿಗೆ ತನ್ನ ಸ್ನೇಹಿತರನ್ನು ನೋಡಲು ಸಾದ್ಯವಿಲ್ಲ, ಈ ಜಗತ್ತನ್ನು, ಈ ಜಗತ್ತಿನಲ್ಲಿರುವ ಸೌಂದರ್ಯವನ್ನು, ವಿಸ್ಮಯವನ್ನು, ಇಲ್ಲಿನ ಕ್ರೌರ್ಯವನ್ನು, ಮೋಸ ವಂಚನೆಯನ್ನು, ಕೊಲೆ ಸುಲಿಗೆಯನ್ನು ನೋಡಲು ಸಾದ್ಯವಿಲ್ಲ. ಅಂತಹ ವ್ಯಕ್ತಿಯೊಬ್ಬ ನನ್ನ ಗೆಳೆಯ. ಬಹಳ ವರ್ಷಗಳ ನಂತರ ಭೇಟಿಯಾದೆ. ಸರಿಸುಮಾರು ನಾಲ್ಕು ವರ್ಷದ ನಂತರ.</span></div><div align="left"><span class="" style="font-size:130%;"><span class="">ಇದೆ</span> ನಾಲ್ಕೈದು ವರ್ಷದ ಹಿಂದೆ....................</span></div><div align="left"><span class="" style="font-size:130%;">ನಾನು ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ , ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಮಾಡುತ್ತಿದ್ದರೆ ನನ್ನ ಗೆಳೆಯ ಅಲ್ಲೇ ರಾಜ್ಯಶಾಸ್ತ್ರ ಅದ್ಯಾಯನ ಮಾಡುತ್ತಿದ್ದ. ಅವನನ್ನು ನೋಡಿದ ದಿನದಿಂದ ನನಗನ್ನಿಸಿದ್ದು ಅವನೊಂದು ಭೂಮಿಮೆಲಿನ ಅದ್ಭುತ ಜೀವಿ ಅಂತ. ಈ ಜಗತ್ತಿನ ಯಾರನ್ನಾದರು ಅವನು ನಿಮಿಷಮಾತ್ರದಲ್ಲಿ ಸೆರೆ ಹಿಡಿಯಬಲ್ಲವನಾಗಿದ್ದ. ನೋಡಿ, ನಮಗೂ ನನ್ನ ಗೆಳೆಯನ ವಿಭಾಗದವರಿಗೂ ಯಾವಾಗಲು ಒಂದು ವಿಷಯದಲ್ಲಿ ಸದಾ ಜಿದ್ದಾ ಜಿದ್ದಿ. ಅದು ವಾಲಿಬಾಲ್ ಆಟದಲ್ಲಿ. ಅವನ ಗೆಳೆಯ ಪ್ರವೀಣ ವಾಲಿಬಾಲ್ನ ಧೈತ್ಯ ಪ್ರತಿಬೆ. ನಮ್ಮದೂ ಒಂಥರಾ ಒಳ್ಳೆ ಟೀಮೆ ಆಗಿತ್ತು. ನಾವಿಬ್ಬರೂ ಯಾವಾಗಲೂ ಅಂತರ ವಿಭಾಗದ ಆಟದಲ್ಲಿ ಮುಖಾಮುಕಿ. ಕಣ್ಣು ಕಾಣದ....? ನನ್ನ ಗೆಳೆಯ ಎಲ್ಲರನ್ನು ಧ್ವನಿಯ ಮೂಲಕ ಇವರೇ ಎಂದು ಗುರುತಿಸುತ್ತಿದ್ದ. ಪಂದ್ಯ ನಡೆಯುತ್ತಿದ್ದರೆ ಸಾಕಸ್ಟು ರೋಷ ಇರುತ್ತಿತ್ತು. ಆ ಸಮಯದಲ್ಲಿ ಈ ಗೆಳೆಯನ ಬಿರುಸು ಮಾತುಗಳು. ಅವನು ಅವನ ಟೀಮ್ಗೆ ಹೇಗೆ ಹುರುಪು ತುಂಬುತ್ತಿದ್ದ ಅಂದ್ರೆ .... ಆಹಾ ಎಂಥಾ ಹೊಡೆತಾ ಹೊಡೆದ್ಯೋ ಪ್ರವೀಣ, ಭೇಷ್ ಕಣೋ. ನೀ ಹುಟ್ಟಿದ್ದು ಸಾರ್ಥಕ ಕಣೋ. ಅಲ್ನೋಡು ಕಾರ್ನರಲ್ಲಿ ಕಾಳಿ (ಕೆಲ ಆತ್ಮೀಯರು ಕರೆಯುವ ನನ್ನ ಹೆಸರದು ) ಇದಾನೆ, ತುಂಬಾ ಎಗರಾಡ್ತಾ ಇದಾನೆ. ಅವನ ತಲೆ ಮೇಲೆ ಹೊಡ್ಯೋ. ಹೀಗೆಲ್ಲ ಹೇಳ್ತಾ ಇದ್ರೆ ಏ ನಿಂಗೆ ಕಣ್ಣು ಕಾಣೋಲ್ಲ ಅಂದ್ರೆ ನಾವು ನಂಬೋಲ್ಲ ಅಂತಿದ್ವಿ. ಇನ್ನು ನನ್ನ ಗೆಳೆಯ ಚೆಸ್ ಆಟದ ದೊರೆ. ಅವನನ್ನ ಗೆದ್ದವರಾರೂ ಅಲ್ಲಿರಲಿಲ್ಲ. ಅಸ್ಟ್ರಮಟ್ಟಿಗೆ ಚೆಸ್ ಸಾಮ್ರಾಜ್ಯದ ರಾಜ ಅವನು. ಹ್ಞಾ... ಮತ್ತೆ ಕೇಳಿ, ಆಗ ಹಾಸ್ಟೆಲ್ನಲ್ಲಿ ಒಂದೇ ಎಸ್ಟಿಡಿ ಬೂತ್. ಅದರಲ್ಲೂ ಮರದ ನೆರಳು ಅದೂ ಇದೂ ಅಂತ ಸ್ವಲ್ಪ ಕತ್ತಲು. ಅದರಲ್ಲಿ ಬಾಗಿಲು ಹಾಕ್ಕೊಂಡು ಮಾತಾಡೋ ಅಭ್ಯಾಸ ಒಳಗೆ ಪೂರ್ತಿ ಕತ್ತಲು. ನಂಬರ್ ಹೊಡಿಲಿಕ್ಕು ಕಷ್ಟ. ಆ ಸಮಯದಲ್ಲಿ ಈ ಗೆಳೆಯನೆ ದಾರಿ 'ದೀಪ' ಇವನು ಫೋನ್ ಮೇಲೆ ಒಂದ್ ಕೈ ಇಟ್ಟು ಬೆರಳುಗಳನ್ನ ಚಲಿಸಿದನೆಂದರೆ ಅದು ಗುರಿ ತಪ್ಪದ ರಾಮನ ಬಾಣ. ನಿಮಗೆ ತಿಳಿದಿರಲಿ ಕಣ್ಣಿರುವ ನಮ್ಮಂತ ಕಮಂಗಿಗಳಿಗೆ ಇವನೇ ಸರ್ವ ಜ್ಯೋತಿ. ಇನ್ನೊಂದು ವಿಷ್ಯ ನೆನಪಿರಲಿ "ನನಗೆ ಕಣ್ಣಿದೆ ನಾ ಎಲ್ಲಿ ಬೇಕಾದರೂ ಜಿಗಿಯಬಲ್ಲೆ ಅಂತ ಬೀಗಿದ ಕುದುರೆಗಳಿಗೆ ಜಿಗಿಯಬೇಕಾದ ಜಾಗದಲ್ಲಿ ಕಣ್ಣು ಕಾಣದಾಗಿತ್ತು. ಅಲ್ಲಿ ನನ್ನ ಗೆಳೆಯ ಬಂಗಾರದ ಪದಕ ಗೆದ್ದ". ಅಂದರೆ ಇವನೇ ಆ ವರ್ಷದ ರ್ಯಾಂಕ್ ಸ್ಟೂಡೆಂಟ್. ಈಗ ಹೇಳಿ ಇವನೊಬ್ಬ ಅದ್ಭುತ ಜೀವಿ ಅಲ್ಲವೇ? ಈ ಅದ್ಭುತ ಜೀವಿ ಯಾರು ಗೊತ್ತಾ? "ಮಲ್ಲಿಕಾರ್ಜುನ ಅಂತ".<br />ಆಶ್ಚರ್ಯ ಕಣೋ, ೪-೫ ವರ್ಷ ನಾ ನಿನ್ನ ಮಾತಾಡಿಸಿರಲ್ಲಿಲ್ಲ. ಈಗಲೂ ನೀ ನನ್ನ ಧ್ವನಿ ಗುರ್ತಿಸಿದೆಯಲ್ಲ. ಅದು ಹೇಗೋ? ಅಲ್ಲಿ ನಾವೆಲ್ಲ ಮಲ್ಲಿ ಹೋಗೋ, ಬಾರೋ ಅಂತಿದ್ವಿ ಪ್ರೀತಿಯಿಂದ. ಆದರೆ ಇವತ್ತು ಹಾಗನ್ಲಿಕ್ಕೆ ಸಾದ್ಯಾನೆ ಆಗ್ಲಿಲ್ಲ ಕಣೋ. ನೆನಪಿದಿಯ ದಿಡೀರ್ ಅಂತ "ಏನ್ರಿ ಸರ್" ಅಂದೆ. ಎಲ್ಲಾರು"ನೆಟ್ , ಸ್ಲೆಟ್" ಅಂದ್ರೆ ಹೆದರಿ ಕಿಲೋಮೀಟರ್ ದೂರ ಇರುವಾಗ ನೀನು ಅದ್ಯಾವಾಗಲೋ ಎರಡನ್ನೂ ಮುಗಿಸಿ ಪದವಿ ಕಾಲೇಜ್ನಲ್ಲಿ ಲೆಕ್ಚರರ್ ಆಗಿದಿಯಲ್ಲ ನೀನೊಬ್ಬ ನಿಜವಾದ ಸಾದಕ ಕಣೋ. ಅಲ್ಲಾ ಕಣೋ ಇಲ್ಲೇ ಇರುವ ನಿನ್ನಂತಹ ಸಾದಕನ ಬಗ್ಗೆ ಮಾತಾಡೋದು ಬಿಟ್ಟು ದೂರದಲ್ಲಿರೋ ಕಾಣದ, ಕಾಣದವರ ಬಗ್ಗೆ ಹೌದಾ? ಅಬ್ಬಾ? ಅಂತೀವಲ್ಲಾ ನಮಗೇ ನಾವು ಯಾವುದರಲ್ಲಿ ಹೊಡ್ಕೊಬೇಕು ಹೇಳು.ನಿನ್ನ ಇಂಗ್ಲಿಷ ಪದಗಳು, ಆ ಹುಡುಗಾಟಿಕೆಯ ಮಾತುಗಳು, ಹಳೆಯ ನೆನಪುಗಳು ವಾ.... ಹ್ . ನಿನ್ನ ಜೋತೆಗಿದ್ರೆ ನಾವು ಪ್ರಪಂಚ ಗೆಲ್ಲಬಹುದೇನೋ? ಅನ್ಸತ್ತೆ. ಏನಂದೆ .....? ನಿಮಗೆಲ್ಲ ಅನ್ಸೋದ್ ಅಸ್ಟೇ. ಗೆಲ್ಲೋಕ್ಕಾಗಲ್ಲ ಅಂದ್ಯಾ?. ಗೆಲ್ಲೋದು ನಿನ್ನನ್ತೋನು ಮಾತ್ರ ಅಂದ್ಯ?. ಹೌದು ನೂರಕ್ಕೆ ನೂರರಸ್ಟ್ ಸತ್ಯ ಕಣೋ ನಿನ್ ಮಾತು.<br /></span><span style="font-size:130%;">ಹಾಗೆ </span><span style="font-size:130%;">ಮಾತಾಡ್ತಾ </span><span style="font-size:130%;">ಮಾತಾಡ್ತಾ </span><span style="font-size:130%;">ಊಟಕ್ಕೆ </span><span style="font-size:130%;">ಹೋದ್ರೆ </span><span style="font-size:130%;">ಏನು </span><span style="font-size:130%;">ನೀಟಾಗಿ </span><span style="font-size:130%;">ಊಟ </span><span style="font-size:130%;">ಮಾಡಿದ್ಯೋ </span><span style="font-size:130%;">ನೀನು. </span><span style="font-size:130%;">ಸ್ವಲ್ಪವೂ </span><span style="font-size:130%;">ಅನ್ನ </span><span style="font-size:130%;">ಚೆಲ್ಲಲಿಲ್ಲ </span><span style="font-size:130%;">ಕೆಳಗೆ. </span><span style="font-size:130%;">ಜೊತೆಗೆ </span><span style="font-size:130%;">ಬೇಳೆ </span><span style="font-size:130%;">ಬೆಂದಿಲ್ಲ </span><span style="font-size:130%;">ಅಂತ </span><span style="font-size:130%;">ಸರಿಯಾಗಿ </span><span style="font-size:130%;">ಹೇಳಿದ್ಯಲ್ಲ </span><span style="font-size:130%;">ಅದು </span><span style="font-size:130%;">ಹೇಗೋ </span><span style="font-size:130%;">ಗೆಳೆಯ. </span><span style="font-size:130%;">ನಿನ್ನ </span><span style="font-size:130%;">ಕಲ್ಪನೇಲಿ </span><span style="font-size:130%;">ಬೇಳೆ </span><span style="font-size:130%;">ಹೇಗಿರತ್ತೆ? </span><span style="font-size:130%;">ಹೌದು </span><span style="font-size:130%;">ನೀನು </span><span style="font-size:130%;">ನನ್ನನ್ನ </span><span style="font-size:130%;">ಯಾವ </span><span style="font-size:130%;">ರೀತಿ </span><span style="font-size:130%;">ಕಲ್ಪಿಸಿಕೊಂಡಿದಿಯ? </span><span style="font-size:130%;">ಜಗತ್ತು, </span><span style="font-size:130%;">ಈ </span><span style="font-size:130%;">ಪರಿಸರನ್ನೆಲ್ಲ </span><span style="font-size:130%;">ನಿನ್ನ </span><span style="font-size:130%;">ಸ್ಮೃತಿ </span><span style="font-size:130%;">ಪಟಲದಲ್ಲಿ </span><span style="font-size:130%;">ಯಾವ </span><span style="font-size:130%;">ರೀತಿಯಲ್ಲಿ </span><span style="font-size:130%;">ಊಹಿಸಿಕೊಂಡಿದಿಯ? </span><span style="font-size:130%;">ಸ್ವಲ್ಪ </span><span style="font-size:130%;">ಹೇಳ್ತಿಯ. </span><span style="font-size:130%;">ಅಲ್ಲ </span><span style="font-size:130%;">ಕಣೋ </span><span style="font-size:130%;">ನಾವೆಲ್ಲ </span><span style="font-size:130%;">ಅದು </span><span style="font-size:130%;">ಬೇಕು </span><span style="font-size:130%;">ಇದು </span><span style="font-size:130%;">ಬೇಕು </span><span style="font-size:130%;">ಅಂತ </span><span style="font-size:130%;">ಕಂಡಿದ್ದರ </span><span style="font-size:130%;">ಹಿಂದೆಲ್ಲ </span><span style="font-size:130%;">ಓಡ್ತಿವಿ. </span><span style="font-size:130%;">ಆದ್ರೆ </span><span style="font-size:130%;">ನಮಗದೆಲ್ಲ </span><span style="font-size:130%;">ಎಸ್ಟೋ </span><span style="font-size:130%;">ಸಾರಿ </span><span style="font-size:130%;">ಬರೀ </span><span style="font-size:130%;">ಮರೀಚಿಕೆ </span><span style="font-size:130%;">ಅಸ್ಟೆ. </span><span style="font-size:130%;">ನೀನ್ </span><span style="font-size:130%;">ಏನನ್ನೂ </span><span style="font-size:130%;">ಕಾಣಲ್ಲ ......? </span><span style="font-size:130%;">ಆದರೂ </span><span style="font-size:130%;">ಎಂಥೆನ್ಥವೆಲ್ಲ </span><span style="font-size:130%;">ನಿನ್ನ </span><span style="font-size:130%;">ಕಾಲಡಿ </span><span style="font-size:130%;">ಬಿದ್ದಿವೆ. </span><span style="font-size:130%;">ನಂಗೊತ್ತು </span><span style="font-size:130%;">ಕಣೋ </span><span style="font-size:130%;">ಇದಕ್ಕೆಲ್ಲ </span><span style="font-size:130%;">ಕಾರಣ </span><span style="font-size:130%;">ನಿನ್ನ </span><span style="font-size:130%;">ಸಾಮರ್ಥ್ಯ, </span><span style="font-size:130%;">ಶ್ರಮ </span><span style="font-size:130%;">ಅಂತ. </span><span style="font-size:130%;">ಗೆಳೆಯ </span><span style="font-size:130%;">ಇನ್ನೊಂದ್ </span><span style="font-size:130%;">ವಿಷ್ಯ </span><span style="font-size:130%;">ಹೇಳಲಾ? </span><span style="font-size:130%;">ಅವತ್ತು </span><span style="font-size:130%;">ನೀ </span><span style="font-size:130%;">ನಮ್ಮ </span><span style="font-size:130%;">ಕಾಲೇಜಿನ </span><span style="font-size:130%;">ಮೆಟ್ಟಿಲುಗಳನ್ನ </span><span style="font-size:130%;">ಹತ್ತುವಾಗ</span> <span style="font-size:130%;">ಅಕ್ಷರಶಃ </span><span style="font-size:130%;">ನಾನು </span><span style="font-size:130%;">ಭಯ</span><span style="font-size:130%;">ಪಟ್ಟೆ. </span><span style="font-size:130%;">ಕಾರಣ </span><span style="font-size:130%;">ಎಲ್ಲಿ </span><span style="font-size:130%;">ಎಡವಿ </span><span style="font-size:130%;">ಬೀಳುತ್ತಿಯೋ </span><span style="font-size:130%;">ಅಂತ </span><span style="font-size:130%;">ಸದಾ </span><span style="font-size:130%;">ನಿನ್ನ </span><span style="font-size:130%;">ಪಾದದ </span><span style="font-size:130%;">ಕಡೆಗೇ </span><span style="font-size:130%;">ನೋಡುತ್ತಿದ್ದೆ. </span><span style="font-size:130%;">ನೀ </span><span style="font-size:130%;">ಎಲ್ಲೂ </span><span style="font-size:130%;">ಎಡವಲೂ </span><span style="font-size:130%;">ಇಲ್ಲ </span><span style="font-size:130%;">ಬೀಳಲೂ </span><span style="font-size:130%;">ಇಲ್ಲ. </span><span style="font-size:130%;">ಬದಲಾಗಿ </span><span style="font-size:130%;">ಜೋರಾಗಿ </span><span style="font-size:130%;">ಗಹಗಹಿಸಿ </span><span style="font-size:130%;">ನಗುತ್ತಾ, .. </span><span style="font-size:130%;">ಏ </span><span style="font-size:130%;">ಮೂರ್ಖ </span><span style="font-size:130%;">ಸರಿಯಾಗಿ </span><span style="font-size:130%;">ದಾರಿ </span><span style="font-size:130%;">ನೋಡ್ತಾ </span><span style="font-size:130%;">ನಡಿಯೋ </span><span style="font-size:130%;">ಬಿದ್ದೀಯ? </span><span style="font-size:130%;">ಅಂತ </span><span style="font-size:130%;">ಹೇಳ್ತಿದಿಯೇನೋ </span><span style="font-size:130%;">ಅನ್ನಿಸ್ತು. </span><span style="font-size:130%;">ಹೌದು </span><span style="font-size:130%;">ಕಣೋ </span><span style="font-size:130%;">ನಿನ್ನ </span><span style="font-size:130%;">ಅನಿಸಿಕೆ </span><span style="font-size:130%;">ನಿಜ. </span><span style="font-size:130%;">ನೀನೀ </span><span style="font-size:130%;">ಜಗತ್ತಿಗೆ </span><span style="font-size:130%;">ನನಗಿಂತ</span><span style="font-size:130%;">ಲೂ </span><span style="font-size:130%;">ಮೊದಲು </span><span style="font-size:130%;">ಬಂದವನು. </span><span style="font-size:130%;">ಎಲ್ಲೋ </span><span style="font-size:130%;">ಯಾವತ್ತೋ </span><span style="font-size:130%;">ಒಂದು </span><span style="font-size:130%;">ದಿನ </span><span style="font-size:130%;">ಸಿಕ್ಕಾಗ </span><span style="font-size:130%;">ದೇವು </span><span style="font-size:130%;">ಹೇಳಿದ್ದನಂತೆ, </span><span style="font-size:130%;">ನಮ್ಮ </span><span style="font-size:130%;">ಕಾಲೇಜ್ </span><span style="font-size:130%;">ಹೆಸರು </span><span style="font-size:130%;">ದಯಾನಂದ </span><span style="font-size:130%;">ಸಾಗರ್ </span><span style="font-size:130%;">ಅಂತ. </span><span style="font-size:130%;">ಕುಮಾರಸ್ವಾಮಿ </span><span style="font-size:130%;">ಲೇಔಟ್, </span><span style="font-size:130%;">ಬನಶಂಕರಿ </span><span style="font-size:130%;">ಹತ್ರ </span><span style="font-size:130%;">ಇದೆ </span><span style="font-size:130%;">ಅಂತ. </span><span style="font-size:130%;">ಇಸ್ಟ್ಅನ್ನೇ </span><span style="font-size:130%;">ಹೇಳಿದ್ದಂತೆ. </span><span style="font-size:130%;">ಅಸ್ಟೇ </span><span style="font-size:130%;">ಮಾಹಿತಿ </span><span style="font-size:130%;">ಇಟ್ಟುಕೊಂಡು </span><span style="font-size:130%;">ಹುಡುಕುತ್ತಾ </span><span style="font-size:130%;">ಹುಡುಕುತ್ತಾ ..... </span><span style="font-size:130%;">ಅಲ್ಲಲ್ಲಾ </span><span style="font-size:130%;">ಸಲೀಸಾಗಿ </span><span style="font-size:130%;">ಬಂದಿದಿಯಲ್ಲ </span><span style="font-size:130%;">ನೀನು </span><span style="font-size:130%;">ನಿಜವಾಗಿ </span><span style="font-size:130%;">ಅಂಧ......? </span><span style="font-size:130%;">ಹೌದಾ?. </span><span style="font-size:130%;">ಆಮೇಲೆ </span><span style="font-size:130%;">ಕೆ </span><span style="font-size:130%;">ಆರ್ </span><span style="font-size:130%;">ರೋಡ್ </span><span style="font-size:130%;">ಇನ್ನೂ </span><span style="font-size:130%;">ಚಿಕ್ಕದಾಗೇ </span><span style="font-size:130%;">ಇದೆ </span><span style="font-size:130%;">ಅಂತ </span><span style="font-size:130%;">ಮಾತಿನ </span><span style="font-size:130%;">ಮದ್ಯೆ </span><span style="font-size:130%;">ಅಂದ್ಯಲ್ಲ </span><span style="font-size:130%;">ನೀನು </span><span style="font-size:130%;">ನಿಜವಾಗಿ...? </span><span style="font-size:130%;">ಇಂಥ </span><span style="font-size:130%;">ಮಹಾ </span><span style="font-size:130%;">ನಗರದಲ್ಲಿ </span><span style="font-size:130%;">ನೀನೊಬ್ಬನೇ </span><span style="font-size:130%;">ನಿರ್ಭಯವಾಗಿ </span><span style="font-size:130%;">ಓಡಾಡ್ತಿಯಲ್ಲ </span><span style="font-size:130%;">ಓ </span><span style="font-size:130%;">ಗೆಳೆಯ </span><span style="font-size:130%;">ನೀನು </span><span style="font-size:130%;">ನಿಜವಾಗಿ ...?<br /></span><span style="font-size:130%;">ಏ ಗೆಳೆಯ ನಾ ನಿನಗೆ ಇಲ್ಲಿ ಪದೇ ಪದೇ ಅಂಧ ಅಂದೆ ಅಂತ ಅನ್ಯತಾ ಭಾವಿಸಬೇಡ ಕಣೋ.ನೀ ನಿಜವಾಗಿ ಅಂಧ ಅಲ್ಲ ಕಣೋ. ಅಸ್ಟ್ ನೀಟಾಗಿ ಬಟ್ಟೆ ಹಾಕ್ಕೊಂಡ್ ಇನ್ಶರ್ಟ್ ಮಾಡಿ, ಸ್ವಚ್ಚವಾಗಿ, ಕಣ್ಣಿಗೆ ಗ್ಲಾಸ್ ಹಾಕ್ಕೊಂಡ್ ಸುಂದರವಾಗಿರೋ ನೀನು ಅಂಧನ ಮುಖವಾಡ ಹಾಕ್ಕೊಂಡು ಭೂಮಿಗೆ ಬಂದಿರೋ ಗಂಧರ್ವ ಕಣೋ. ನಿಜವಾಗಿಯೂ ನೀ ಗಂಧರ್ವ ಕಣೋ.</span></div>prashihttp://www.blogger.com/profile/17424449836173486264noreply@blogger.com3tag:blogger.com,1999:blog-357559050894046621.post-88129552236719497082009-06-26T04:44:00.000-07:002010-10-20T21:54:26.495-07:00ಅಜ್ಜೀ......<a href="https://blogger.googleusercontent.com/img/b/R29vZ2xl/AVvXsEjjdejRwZewMem4EnbXkokNc0dd3UnT3J2YyKF2z_OQaoOGb374P8e_7OdETY5yY7pF-rxtdQkUOnIL3jG5kArMJFKoHJzLdSRAjs7B3tSlNjyJQmXQF4weq3LZqs3lLgUyywC3D2Le7g/s1600/PH7DD~61.JPG"><img id="BLOGGER_PHOTO_ID_5530356781230898530" style="DISPLAY: block; MARGIN: 0px auto 10px; WIDTH: 240px; CURSOR: hand; HEIGHT: 320px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjjdejRwZewMem4EnbXkokNc0dd3UnT3J2YyKF2z_OQaoOGb374P8e_7OdETY5yY7pF-rxtdQkUOnIL3jG5kArMJFKoHJzLdSRAjs7B3tSlNjyJQmXQF4weq3LZqs3lLgUyywC3D2Le7g/s320/PH7DD~61.JPG" border="0" /></a><br /><div><span style="font-size:130%;">ಇದು ನಂಬಲಸಾದ್ಯವಾದರು ನಂಬಲೇಬೇಕಾದ ಸತ್ಯ. ನಾನು ನನ್ನ ಅಜ್ಜಿ ಊರಾದ {ಅಮ್ಮನ ಅಮ್ಮ } ಜಡ್ದಗದ್ದೆಯಲ್ಲಿಬೆಳೆದವನು. ಆದ್ದರಿಂದ ನನ್ನ ತಂದೆಯ ಮನೆಗೆ ನಾನೊಬ್ಬ ಅಥಿತಿ ತರ. ಅಲ್ಲಿನವರೆಲ್ಲಾ ನನಗೆ ನೆಂಟರಂತೆ. ನನಗರಿವಿರುವಂತೆ ನನ್ನ ತಂದೆಯ ತಾಯಿಯನ್ನು ನನ್ನ ಸ್ವಂತ ಅಜ್ಜಿ ಅಂತ ತಿಳುವಳಿಕೆ ಬಂದಿದ್ದು ಬಹುಶಃ ನಾನು ನಾಲ್ಕೋ ಐದನೇ ಕ್ಲಾಸ್ನಲ್ಲಿ ಇದ್ದಾಗ ಅನ್ಸತ್ತೆ. ಅಲ್ಲೀವರೆಗೂ ಅವರ ಒಡನಾಟ ಆಸ್ಟಕಸ್ಟೆ. ಆಮೇಲೂ ಕೂಡಾ ಅಂದರೆ ಪಿ ಯೂ ಸಿ ಹಂತದವರೆಗೂ ಹಾಗೋ ಹೀಗೋ ಅನ್ನೂ ರೀತಿ ಅವರ ಮೇಲೆ ಪ್ರೀತಿ. ಆದರೆ ನಂತರದ ದಿನಗಳಲ್ಲಿ ನನ್ನಜ್ಜಿ ನನಗೆ ಅತ್ಯಂತ ಪ್ರಿಯವೆನಿಸಿದರು. ಇದಕ್ಕೆ ಕಾರಣ ನನ್ನ ಮುದ್ದಿನ ಅಜ್ಜಿ {ಅಮ್ಮನ ಅಮ್ಮ } ಯನ್ನು ಕಳೆದುಕೊಂಡದ್ದಾಗಿರಬಹುದು. ಆ ನನ್ನಜ್ಜಿ ತೋರಿಸುತ್ತಿದ್ದ ಪ್ರೀತಿ ಈ ಅಜ್ಜಿಯಿಂದ ಸಿಗುತ್ತಿತ್ತಲ್ಲ ಅದಕ್ಕೆ. ಮೊದಮೊದಲು ನೆಂಟನಂತಿದ್ದ. ನನಗೆ ಈಗ ನಾನೂ ಮನೆಯ ಸದಸ್ಯ ಅನ್ನೋ ಸಂಪೂರ್ಣ ತಿಳುವಳಿಕೆ ಬಂದಿದೆ. ಹಾಗಾಗಿ ನನ್ನ ಕುಟುಂಬದ ಬಗ್ಗೆ ವಿಶೇಷ ಆಸಕ್ತಿ ನನಗೆ. ನನಗೆ ನೆನಪಿರುವ ಹಾಗೆ ಈ ನನ್ನಜ್ಜಿ ಬದುಕು ವಿಸ್ಮಯ, ಅದ್ಭುತ ಅಂದ್ರೆ ತಪ್ಪಾಗಲಾರದು. ಸರಳ ಆದರೆ ಅತ್ಯಂತ ಕಷ್ಟ ಜೀವಿ. ನಮ್ಮೂರಿನಲ್ಲಿ ಈಗಲೂ ಒಣಕಟ್ಟಿಗೆಯಿಂದಲೇ ಅಡಿಗೆ ಇನ್ನಿತರ ಕೆಲಸಗಳು ನಡೆಯುವುದು. ಬೆಸಿಗೆಯಾಯಿತೆಂದರೆ ಸಾಕು ಕೊಟ್ಟಿಗೆಗೆ ದರಗು ತಂದು ಹಾಕಬೇಕು. ಜಾನುವಾರುಗಳಿಗೆ ಮಲಗಲು ಸಹಕಾರಿಯಾಗಲಿ ಅಂತ ಅಂದರೂ ಕೂಡಾ ಅದರ ಹಿಂದೆ ಗೊಬ್ಬರ ಮಾಡುವ ಉದ್ದೇಶವಿದೆ. ಮಳೆಗಾಲ ಶುರುವಾದರೆ ಆ ಬಿರುಗಾಳಿ ಮಳೆಯಲ್ಲೂ ಧೈತ್ಯಾಕಾರದ, ದೇಹಕ್ಕೆ ದುಪ್ಪಟ್ಟು ಭಾರದ ಗೊರಬು ಹಾಕಿಕೊಂಡು ನಾಟಿ ಮಾಡಬೇಕು. ಗದ್ದೆಗೆ, ತೋಟಕ್ಕೆ ಗೊಬ್ಬರ ಹಾಕಬೇಕು, ಬೇಸಾಯ ಮಾಡ್ಬೇಕು ಜ್ಯೋತೆಗೆ ಮನೆಯಲ್ಲೂ ಕೆಲಸ ಹೀಗೆ ಹತ್ತು ಹಲವು ಕೆಲಸಗಳನ್ನ ನನ್ನಜ್ಜಿ ಮಾಡಿದ್ದು ಕಂಡಿದ್ದೇನೆ. ಆಗೆಲ್ಲ ಅದು ಅಸ್ಟೋನ್ದು ಗಮನಿಸುವ ಅಂಶವಾಗಿರಲಿಲ್ಲ. ಆದರೂ ಅವರು ಧರಗು, ಸೌದೆ ತರುವಾಗ ಮೈಲುಗಳ ದೂರದಿಂದ ಕಾಲಿಗೆ ಮೆಟ್ಟಿಲ್ಲದೆ {ಚಪ್ಪಲಿ } ಕಲ್ಲು, ಇನ್ಚಿಂಚಿಗೊಂದರಂತೆ ನಾನಾ ಜಾತಿಯ ಮುಳ್ಳುಗಳು, ಕೊರಲುಗಲು, ಕ್ರಿಮಿ, ಕೀಟ, ಹಾವು, ಚೇಳು ಎಂಬಿತ್ಯಾದಿ ಅಪಾಯಕಾರಿ ಹಂತಗಳನ್ನೆಲ್ಲ ದಾಟಿ ಬಯಲಿಗೆ ಕಾಲಿಟ್ಟರೆ ಸಾಕು ಅಲ್ಲಿ ಬಿಸಿಲಿಗೆ ಬೆಂದು ಬೆಂದು ಕೆಂಡವಾಗಿರುವ ನೆಲದ ಮೇಲೆ ಬರಿಗಾಲಲ್ಲಿಯೇ ತಲೆಯ ಮೇಲಿರುವ ಭಾರವನ್ನು ಹೊತ್ತುಕೊಂಡೇ ಮನೆ ಸೇರುವ ಅಂದಿನ ಆ ಸ್ಥಿತಿಯನ್ನು ಈಗ ಹಾಗೆ ಯೋಚಿಸಿದರೆನೆ ಮೈ ಜುಂ ಅನ್ಸತ್ತೆ. ಆದರೂ ನನ್ನಜ್ಜಿ ಅಂಜಲಿಲ್ಲ, ಅಳುಕಲಿಲ್ಲ, ಸೋಮಾರಿಯಂತೂ ಅಲ್ಲವೇ ಅಲ್ಲ. </span><br /><p><span style="font-size:130%;"><span class="">ನೋಡಲೇಸ್ಟು ಸಪೂರ ಗೊತ್ತ ನನ್ನಜ್ಜಿ. ಆದರೂ ನನ್ನಂತಹ ಹುಡುಗರು ಮಾಡಲು ಅಂಜುವಂತಹ ಕೆಲಸಗಳನ್ನು ಸಹ ನನ್ನಜ್ಜಿ ಸರಾಗವಾಗಿ ಮಾಡಿದ್ದಾಳೆ. ನನಗಿನ್ನೂ ಹಸಿರಾಗಿದೆ ಆ ಒಂದು ದಿನದ ನೆನಪು. ನನಗಾಗ ಹತ್ತೋ ಹನ್ನೆರಡೋ ವರ್ಷವಿರಬೇಕು ಅನ್ಸತ್ತೆ. ರಜೆಗೆಂದು ನನ್ನಜ್ಜಿ {ಅಮ್ಮನ ಅಮ್ಮ } ಊರಿಂದ ಬಂದಿದ್ದೆ. ಒಂದು ದಿನ ನನ್ನಜ್ಜಿ ಜ್ಯೋತೆಗೆ ಇನ್ನೊಂದಿಸ್ಟು ಹೆಂಗಸರೆಲ್ಲ ಸೇರಿ {ಬಹುಷಃ ನನ್ನ ಅಮ್ಮನೂ ಅವರ ಗುಂಪಿನಲ್ಲಿ ಇದ್ದರೋ? ಸರಿಯಾಗಿ ನೆನಪಿಲ್ಲ} ಕಾಡಿಗೆ ಹೊರಟರು. ಅವರೊಂದಿಗೆ ನಾನೂ ಹಠ ಮಾಡಿ ಹೋಗಿದ್ದೆ. ನಮ್ಮೂರು ಮತ್ತು ಕಾಡಿನ ಮದ್ಯ ಮಾಲತಿ ನದಿ ಇದೆ. ನದಿಯಾಚೆ ದಾಟಿದ ಸ್ವಲ್ಪ ಸಮಯದಲ್ಲೇ ಬಾನೆಲ್ಲ ಕಪ್ಪಾಗಿ, ಭಯಾನಕ ಗಾಳಿ ಮಳೆಯಾಯಿತು. ಬಾನೆತ್ತರದ ಮರಗಳು ಸರಿಯಾಗಿ ನಿಲ್ಲಲಾಗದೆ ಅತ್ತಿಂದಿತ್ತ ಜೋರಾಗಿ ತೂಗಾಡುತ್ತಿದ್ದವು.ಸೌದೆಗೆ ಬಂದವರೆಲ್ಲ ತರಾತುರಿಯಿಂದ ಇದ್ದಸ್ಟೆ ಸೌದೆಯನ್ನು ಹೊರೆಕಟ್ಟಿ ಹೊತ್ತುಕೊಂಡು ಮನೆಕಡೆ ಹೊರಟರು. ಅಸ್ಟ್ರಲ್ಲಾಗಲೇ ಮಳೆ ಶುರು ಆಗಿ ಅರ್ಧ ಘಂಟೆ ಮೇಲೆ ಆಗಿತ್ತು. ನಾವೆಲ್ಲಾ ಒದ್ದೆ ಮುದ್ದೆಯಾಗಿದ್ವಿ. ನದೀ ದಂಡೆ ಹತ್ರ ಬಂದಾಗ ನದಿ ನೀರು ವಿಪರೀತ ಜಾಸ್ತಿ ಆಗಿತ್ತು. ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ನೀರಿನ ಸೆಳವು ಹೆಚ್ಚಾಗಿದ್ದು ನೀರಿಗಿಳಿಯಲು ಭಯವಾಗಿತ್ತು. ಆದರೆ ವಿಧಿಯಿಲ್ಲ. ಯೋಚಿಸುತ್ತಿದ್ದರೆ ಮತ್ತೆ ನೀರು ಹೆಚ್ಚಾಗುತ್ತದೆ. ದಾಟಲು ಸಾದ್ಯವೇ ಇಲ್ಲ. ಆಗಲೇ ನನ್ನಜ್ಜಿ ಅನುಭವ ಹಾಗು ಧೈರ್ಯದಿಂದ ಒಂದು ಆಯಕಟ್ಟಿನ ಸ್ಥಳದಲ್ಲಿ ನೀರಿಗಿಳಿದರೆ.....! ಸಣ್ಣ ಹುಡುಗ ನನಗೆ ಕುತ್ತಿಗೆಮಟ್ಟದ ನೀರು. ಕಾಲು ಎಸ್ಟೇ ಪ್ರಯತ್ನಿಸಿದರೂ ನೆಲದ ಮೇಲೆ ನಿಲ್ಲುತ್ತಿಲ್ಲ. ತೇಲುವ ಅನುಭವ. ಹೆಜ್ಜೆ ಇಟ್ಟರೆ ಪಾದದಡಿಯಿರುವ ಮರಳು ಕೊರೆದು ಮತ್ತೆ ಮತ್ತೆ ತೆಲುವಂತಾಗುತ್ತಿತ್ತು. ಅಂದೇ ಇರಬೇಕು ಮೊದಲ ಬಾರಿಗೆ ನದಿ ನೀರಿಗೆ ಹೆದರಿದ್ದು. ಆದರೂ ನಾನು ನೀರಿನಲ್ಲಿ ತೇಲಿ ಹೋಗಲಿಲ್ಲ. ಕಾರಣ ನನ್ನಜ್ಜಿ ನನ್ನನ್ನು ಗಿಡುಗನಂತೆ ಭದ್ರವಾಗಿ ತನ್ನ ಪಕ್ಕೆಯಲ್ಲಿ ಅವುಚಿಕೊಂಡಿದ್ದಳು</span><span class="">. ತಲೆಯಲ್ಲಿ ಮಣಭಾರದ ಸೌದೆ ಹೊರೆ, ಜೊತೆಗೆ ನೀರಿನ ವಿಪರೀತ ಸೆಳೆತ, ನನ್ನ ಭಯ ಮಿಶ್ರಿತ ಒದ್ದಾಟ, ಸರಿಯಾಗಿ ಹೆಜ್ಜೆ ಹಾಕಲು ಅಡ್ಡಿಪಡಿಸುವ ಸೀರೆ. ಇದೆಲ್ಲವನ್ನೂ ಸರಾಗವಾಗಿ ನಿಭಾಯಿಸಿ ಆಚೆ ದಡ ಮುಟ್ಟಿಸಿದ್ದ ನನ್ನಜ್ಜಿ ಮುಖದಲ್ಲಿ ಆ ವಯಸ್ಸಿನಲ್ಲೇ ನಾ ಕಂಡಿದ್ದು ದೈವ ಸಮಾನ ಶಕ್ತಿ. ಆಗ ನನ್ನಜ್ಜಿಗೆ ವಯ್ಯಸ್ಸು ಎಷ್ಟು ಇರಬಹುದು ಗೊತ್ತೇ? ಕನಿಸ್ಟ ಅಂದರೂ ಎಪ್ಪತ್ತರಿಂದ ಎಪ್ಪತ್ತೈದಿರಬಹುದು. ನನ್ನಜ್ಜಿಯ ದೇಹ ಬಡಕಲಾದರೆನಂತೆ ಆಕೆಯ ಅಂದಿನ ಭಯಂಕರವಾದ ಬದುಕಿನ ಅನುಭವವೇ ಬಲ ತಂದಿತ್ತು.ಅದೇ ನಮಗೂ ಅವರಿಗೂ ಇರುವ ವ್ಯತ್ಯಾಸ.......? </span></span></p><br /><p><span class=""><span class=""><span style="font-size:130%;">ಮೊನ್ನೆ ಅಂದ್ರೆ ಮೊನ್ನೆ ತಾನೆ ನನ್ನ ತಂದೆ ಹೀಗೆ ದಿನನಿತ್ಯದಂತೆ ಫೋನಲ್ಲಿ ಮಾತಾಡುವಾಗ ಹೇಳಿದ್ದೇನು ಗೊತ್ತ? ನಿಮಗೆಲ್ಲ ಫ್ರೀ ಇದ್ದರೆ ....... ಒಮ್ಮೆ ನಿಮ್ಮಜ್ಜಿನ ಬಂದು ನೋಡ್ಕೊಂಡ್ ಹೋಗಿ ಅಂತ. ಅಂದರೆ... ನನ್ನಜ್ಜಿ ಈಗ ಜೀವನದ ಅಂತಿಮ ದಿನಗಳನ್ನ ಕಾಣುತ್ತಿದ್ದಾರೆ. ಅವರ ಮಾತಿನಂತೆ ಒಂದು ದಿನ ರಜೆ ಹಾಕಿ ನನ್ನಜ್ಜಿನ ನೋಡಲು ನಾನು ನನ್ನಣ್ಣ ಹೋಗಿದ್ದೆವು. ಅವತ್ತೆನಾಯಿತೋ ಏನೋ ಯಾವತ್ತೂ ನನ್ನಜ್ಜಿ ನೋಡಿದಾಗ ಇಲ್ಲದ ದುಃಖ ನನ್ನ ಎದೆಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿತು. ನನ್ನಜ್ಜಿ ಅಸ್ತಿಪಂಜರದಂತಹ ದೇಹದ ಮೇಲೆ ಚರ್ಮದ ಹೊದಿಕೆಯೊಂದಿದೆ ಅಸ್ಟೆ.ಆದರೆ ಅವರ ಕಣ್ಣು ಈಗಲೂ ಸ್ಪಷ್ಟವಾಗಿದೆ, ಮಾತು ತೊದಲಾದರೂ ಸ್ಪಷ್ಟ. ಕಿವಿ ಸ್ವಲ್ಪ ಮಂದ. ನಿಮಗೆ ಗೊತ್ತ? ನನ್ನಜ್ಜಿ ಈಗಲೂ ಇಂಥಾ ಸ್ಥಿತಿಯಲ್ಲೂ ಸೌಚಕ್ಕೆ ತಾನೊಬ್ಬರೇ ಜಲ್ಲೂರಿಕೊಂಡ್ ಹೋಗಿ ಬರ್ತಾರೆ. ಈಗವರ ಆಹಾರ ಕೇವಲ ಹಾಲು, ಕಾಫ್ಫೀ ಸ್ವಲ್ಪ ಸ್ವಲ್ಪ ಸಾರಾಯಿ. ಅಸ್ಟೆ. ನನ್ನಜ್ಜಿಗೀಗ ವಯ್ಯಸ್ಸು ನನ್ನ ತಂದೆಯ ಅಂದಾಜಿನಂತೆ ತೊಂಬತ್ತೈದರಿಂದ ನೂರೆರಡು. ಅವರನ್ನ ನೋಡಿಕೊಂಡು ವಾಪಾಸ್ಸು ಹೊರಡುವ ಮುನ್ನ ಅವ್ರ ಆಶೀರ್ವಾದಕ್ಕಾಗಿ ಆ ದೈವ ಪಾದಕ್ಕೆ ನಮಸ್ಕರಿಸಿದಾಗ ನನ್ನಜ್ಜಿ ಕೇಳಿದ ಪ್ರಶ್ನೆ ಏನು ಗೊತ್ತಾ? ಯಾವತ್ತೂ ಕೇಳದ ಪ್ರಶ್ನೆ ಅದು......"ನೀ ಮತ್ತೆ ಬತ್ತೀಯ?". </span></span></span></p><br /><p><span class=""><span class=""><span style="font-size:130%;">ಅಜ್ಜೀ ...... ನಿನ್ನ ಮಾತಿನ ಅರ್ಥ ಏನೇ. ನಾ ಬಾರುವಾಗ ಚಿಕ್ಕ ಮಕ್ಕಳ ತರ ಟಾಟ ಮಾಡಿದೆಯಲ್ಲ ಅದ್ಯಾಕೆ ಅಜ್ಜಿ? ಇಂಥ ಸ್ಥಿತಿಯಲ್ಲಿ ನಿನ್ನೊಂದಿಗಿಲ್ಲದ ಈ ನಮ್ಮ ಜೀವನದ ಬಗ್ಗೆ ಅಸಹ್ಯ ಅನ್ಸತ್ತ ನಿಂಗೆ ?.ಇದು ಒಂದ್ ಜೀವನನ ನಂದು ..... ಛೀ</span></span></span></p><br /><p><span class=""><span class=""><span style="font-size:130%;"><span class=""><em><strong><span style="color:#3366ff;">ಏನೇ ಆದರು ಅಜ್ಜೀ ನೀನಂದ್ರೆ ನಂಗಿ</span></strong></em></span><em><strong><span style="color:#3366ff;">ಸ್ಟ ಕಣೇ</span></strong></em> </span></span></span></p></div>prashihttp://www.blogger.com/profile/17424449836173486264noreply@blogger.com3tag:blogger.com,1999:blog-357559050894046621.post-88115778167731074102009-06-26T01:37:00.000-07:002009-07-28T04:53:09.018-07:00ಇದು ಮೋಡಕವಿದ ವಾತಾವರಣ<span style="font-size:130%;"><span class="">ಇದಾಗಿದ್ದು ಹೋದ ವರ್ಷ ಅನ್ಸತ್ತೆ . ಹೌದು ಹೋದ ವರ್ಷಾನೇ, ನಾನು ಊರಿಗೆ ಬಂದಿದ್ದೆ ಆಗ. ಸಂಜೆ ಸುಮಾರು ನಾಲ್ಕು ಘಂಟೆ ಅನ್ಸತ್ತೆ. ಅನ್ಸತ್ತೇನು ನಾಲ್ಕು ಘಂಟೇನೆ ಕಣೇ ನಂಗೆ ನೆನಪಿದೆ. ಅವತ್ತು ನಾವಿಬ್ರು ಕೈ ಹಿಡ್ಕೊಂಡ್ ಹಾಯಾಗಿ ಬೇಕಾಗಿದ್ದಕ್ಕಿಂತ ಹೆಚ್ಚಾಗಿ ಬೇಡದಿದ್ದೆ ಮಾತಾಡಿಕೊಂಡು ಹೋಗ್ತಾ ಇದ್ವಿ. ದಿಡೀರ್ ಅಂತ ಮಳೆ ಬರೋ ಹಾಗೆ ಆಯ್ತು . ಈ ಮಲೆನಾಡೇ ಹಾಗೆ ಹೊತ್ತೂ ಗೊತ್ತೂ ಇಲ್ಲ ಮಳೆ ಬರಲಿಕ್ಕೆ. ಹಠಾತ್ತಾಗಿ ಬಾನಲ್ಲಿ ಕಪ್ಪನೆ ಮೋಡ ಕವಿದು ಮಳೆ ಬರಲು ವೇದಿಕೆ ಸಿದ್ದವಾಯ್ತು. ಮೊದಲ ಪಾತ್ರದಾರಿಗಳಂತೆ ರಭಸವಾಗಿ ಗಾಳಿ, ದೂಳು, ಮತ್ತು ಅದರ ಜೊತೆಗೆ ಏನೋ ಒಂಥರಾ ಸುಗಂಧಯುಕ್ತ ಪರಿಮಳ ಸೂಸಿ ಬಂದಾಗ ನಾವಿಬ್ಬರೂ ಸಹ ಪಿಸುಮಾತಿನಲ್ಲೆ ಆಹಾ ಎಸ್ಟೊಂದು ಹಿತಕರವಾಗಿದೆ ಎಂದೆವಲ್ಲ ಇದಾದ್ರು ನೆನಪಿದೆಯೆ ನಿಂಗೆ.ಅದರ ಜ್ಯೋತೆ ಜ್ಯೋತೆಗೆ ಕ್ಷಣ ಕ್ಷಣಕ್ಕೂ ಬದಲಾಗುವ, ಬೀಸುವ ಬಿಸಿ ಬಿಸಿ ತಣ್ಣನೆಯ ಒಂಥರಾ ಬೆಚ್ಚಗಿನ ಗಾಳಿ ಕಚಗುಳಿಯಿಡುತ್ತಿದ್ದಾಗ, ನಾನು ಅತ್ಯಂತ ಪ್ರೀತಿಯಿಂದ, ಮುದ್ದಿನಿಂದ ನಿನಗೊಂದು ಮುತ್ತು ಕೊಡಲಾ? ಅಂದೆ. ಆದರೆ ನಿನ್ನ ಮುಖ ಕೆಂಪೇರಿ ನಾಚಿಕೆಯಿಂದಿರುವಾಗಲೇ ನಿನ್ನ ಉತ್ತರಕ್ಕೂ ಕಾಯದೆ ಸಿಹಿಮುತ್ತನ್ನಿಟ್ಟೆ. ಛೀ... ಏನೋ ಇದು ಅಂತ ಹುಸಿ ಮುನಿಸು ತೋರಿದಾಗ ನಾನಂದ ಮಾತಾದರು ನೆನಪಿದೆಯೆ ನಿಂಗೆ? ಅದೇ ಕಣೇ "ಇದು ಮೋಡಕವಿದ ವಾತಾವರಣ" ಇಂಥಾ ಸಮಯದಲ್ಲಿ ನಿನ್ನಂತಹ ಮುದ್ದು ಜ್ಯೋತೆಯಲ್ಲಿದ್ದರೆ ಮುತ್ತು ಕೊಡುವುದು, ತೆಗೆದುಕೊಳ್ಳುವುದು ಸಹಜ ಕಣೇ ಅಂತ ಅಂದೆ. ತಕ್ಷಣವೇ ನೀನು ಹೌದಾ ಹಾಗಾದರೆ........ ಅಂದವಳೇ ನನ್ನ ಕೆನ್ನೆಗೆ ತಟ್ಟಂತ ಮುತ್ತಿಟ್ಟೆಯಲ್ಲ. ಜ್ಯೋತೆಗೆ ಏನೇ ಇದು ಅಂದ್ರೆ "ಮೋಡಕವಿದ ವಾತಾವರಣ" ಎಂದಸ್ಟೇ ಹೇಳಿ ತಬ್ಬಿಕೊಂಡೆಯಲ್ಲ ಅದಕ್ಕಿಂತ ಬೇರೆ ಸುಖ ಬೇಕಾ ಮುದ್ದು. ಮುದ್ದು, ನಾನಿನ್ನು ಅದ್ರ ಗುಂಗಿನಲ್ಲೇ ಇದ್ದೆ ಅನ್ಸತ್ತೆ ಮೊನ್ನೆ ನೀನು ಫೋನ್ ಮಾಡಿ ಮಾತಿನ ಮದ್ಯೆ ಗೆಳತಿಯರು ಜ್ಯೋತೆಯಲ್ಲಿರುವುದನ್ನು ಮರೆತು ಪ್ರೀತಿಯ ಪರಕಾಸ್ಟೆಯಲ್ಲಿ ಮುತ್ತಿಟ್ಟೆಯಲ್ಲ, ಆಗ ಗೆಳತಿಯರು 'ಏನೇ ಅದು ಅಂದಾಗ ಅವರಿಗೂ "ಈಗ ಮೋಡಕವಿದ ವಾತಾವರಣ" ಅಂತ ಹೇಳಿ ನಾಚಿಕೆಯಿಂದ ಫೋನ್ ಇಟ್ಟೆಯಲ್ಲ........</span><br /><span class=""><span class=""><em><span style="color:#3366ff;">ಅದಕ್ಕೆ ಮುದ್ದು ನೀನಂದ್ರೆ ನಂಗಿ</span></em></span><em><span style="color:#3366ff;">ಸ್ಟ ಕಣೇ......</span></em> </span><br /></span><p></p><p><span style="color:#cc33cc;"><span style="font-size:130%;">ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.</span></span></p>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-56196754205222168792009-06-26T00:47:00.000-07:002010-01-08T23:01:24.170-08:00ಹೆಣ್ಣು ಅಂದ್ರೆ "ಬೆಳಕು" ಅಂತ ತಾನೆ ನೀನಂದಿದ್ದು?<span style="font-size:130%;">ನಿಂಗೆ ನೆನಪಿದೆಯೆ ಮುದ್ದು, ಒಂದ್ ದಿನ ನಾವಿಬ್ರು ಫೋನಲ್ಲಿ ಮಾತಾಡ್ತಾ ಇದ್ದಾಗ ನೀನು ನಿಮ್ಮನೆ ಮಹಡಿ ಮೇಲೆ ನಿಂತು ನಕ್ಷತ್ರ ನೋಡ್ತಾ ನೋಡ್ತಾ ಮಾತಾಡ್ತಿದ್ದೆ. ನಂಗೂ ಮಹಡಿ ಮೇಲೆ ಬಾರೋ ಇಲ್ಲೊಂದ್ ನಕ್ಷತ್ರ ಇದೆ ಎಸ್ಟ್ ಹೊಳಿತಾ ಇದೆ ನೋಡು ಅಂತ ನನ್ನೂ ಮಹಡಿ ಮೇಲೆ ಹೋಗಲು ಹೇಳಿದ್ದೆ. ಆದ್ರೆ ನೀನು ಹೇಳಿದ ನಕ್ಷತ್ರ ಹುಡುಕಲು ಪರದಾಡಿದೆ. ಅಂತೂ ನಿನ್ನತ್ರ ದಡ್ಡ, ನಿನ್ ತಲೆ, ಅದಲ್ಲ ಕಣೋ, ಅದರ ಪಕ್ಕದಲ್ಲಿದೆ ನೋಡು..... ಹೀಗೆ ಏನೇನೋ ಹೇಳಿಸಿಕೊಂಡ ಮೇಲೆ ಕೊನೆಗೂ ನೀನು ನೋಡುತ್ತಿದ್ದ ನಕ್ಷತ್ರವನ್ನೇ ಹೇಗೋ ಗುರುತಿಸಿದೆ.ಹೌದು ಕಣೇ ಅದರ ಪ್ರಕಾಶಮಾನತೆ ಎಸ್ಟಿತ್ತೆಂದರೆ ನೇರವಾಗಿ ದಿಟ್ಟಿಸಿ ನೋಡಲು ಕಷ್ಟ ಆಗ್ತಾ ಇತ್ತು. ನಾವಿಬ್ರೂ ಅದನ್ನೇ ನೋಡ್ತಾ ನೋಡ್ತಾ ಬಹಳ ಹೊತ್ತು ಮಾತಾಡಿದ್ವಿ. ಆಗಲೇ ನೀ ಕೇಳಿದ ಪ್ರಶ್ನೆ ನೆನಪಿದೆಯಾ ನಿಂಗೆ. ಅಲ್ಲ ಕಣೋ ಆ ನಕ್ಷತ್ರದಲ್ಲಿ ನಿಂಗೇನು ಕಾಣುತ್ತಿದೆ ಅಂದೇ. ನನಗೆ ಇತ್ತೀಚಿನ ದಿನದಲ್ಲಿ ಪ್ರಪಂಚವೇ ನೀನಾಗಿದ್ದೆ. ಅಂತಾದ್ದರಲ್ಲಿ ಆ ಹೊಳೆಯೋ ಜ್ಯೋತಿಯಲ್ಲಿ ನನಗೆ ನೀನೇ ಕಾಣುತ್ತಿದ್ದೆ ಜ್ಯೋತೆಗೆ ಅದರ ಹೊಳೆಯೋ ಬೆಳಕಲ್ಲಿ ಸುತ್ತಲಿನ ಪ್ರಪಂಚ ಕತ್ತಲೆಯಾಗಿತ್ತು. ಅದನ್ನೇ ನಾನೂ ನಿಂಗೆ ಹೇಳಿದೆ. ಒಂದು ಕ್ಷಣ ಮೌನವಹಿಸಿದ ನೀನು, ಹೇಯ್ ನಂಗೊತ್ತು ಕಣೋ ನೀನೆಸ್ಟ್ ನನ್ನ ಪ್ರೀತಿಸ್ತಿಯ ಅಂತ, ಯಾವಾಗಲೂ ನನ್ನೇ ನೆನಪಿಸಿಕೊಳ್ತೀಯ ಅಂತ. ಆದ್ರೆ..... ನಕ್ಷತ್ರ ಅಂದ್ರೆ ದೀಪ ಕಣೋ. ದೀಪದ ಬೆಳಕಲ್ಲಿ ಪ್ರಪಂಚ ನೋಡಬೇಕೆ ವಿನಃ ಅದೇ ದೀಪ ನೋಡ್ತಾ ನೋಡ್ತಾ ಪ್ರಪಂಚ ಕತ್ತಲೆಯಾಗ್ಲಿಕ್ಕೆ ಬಿಡಬಾರದು ಅಲ್ವೇನೋ? ಅಂತ ಅಂದ್ಯಲ್ಲ, ಎಂಥಾ ಮಾತೆ ಅದು. ಅದರಲ್ಲಿ ಕೋಟಿ ಅರ್ಥ ಇತ್ತಲ್ವ. ಮುದ್ದು ನೀನ್ ಹೇಳಿದ್ದು ಹೆಣ್ಣು ಅಂದ್ರೆ ಬೆಳಕು ಕೊಡೊ ಜ್ಯೋತಿ ಕಣೋ. ಅದರ ಬೆಳಕಲ್ಲಿ ಬದುಕಬೇಕು. ಅದನ್ನೇ ನೋಡ್ತಾ ನೋಡ್ತಾ ಬಾಳು ಕತ್ಲು ಮಾಡ್ಕೋಬೇಡ ಅಂತ ತಾನೆ ನೀನ್ ಹೇಳಿದ್ದು.<br /><em><span style="color:#3366ff;"><span class="">ಮುದ್ದು ಅದಕ್ಕೆ ನೀನಂದ್ರೆ ನಂಗಿ</span>ಸ್ಟ ಕಣೇ .......</span></em><br /></span><p></p><p><span style="color:#33ff33;"><span style="font-size:130%;">ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.</span></span></p>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-50575090928294395532009-06-25T06:29:00.000-07:002010-01-08T23:00:30.801-08:00ಮುದ್ದು ನಿನಗಿದು ಮೊದಲ ಪತ್ರ<span style="font-size:130%;">ನೂರಾರು ಭಾವನೆಗಳಿಗೆ, ನೂರಾರು ಕನಸುಗಳಿಗೆ ಆಸರೆಯಾಗಿದ್ದ ನನ್ನ ಮನಸ್ಸಲ್ಲಿ ದಿಡೀರನೆ ಬಂದೆರಗಿದ ಬದುಕಿನ ಬವಣೆಗಳನ್ನ, ಅವುಗಳನ್ನೆದುರಿಸುವ ಧಾವಂತದಲ್ಲಿ ನಿರಾಸೆ, ನೋವು, ಆಘಾತ, ಅವಮಾನ ಅನ್ನೋಬಿರುಗಾಳಿ ಬೀಸಿ ನನ್ನ ಬಾವನೆಗಳನ್ನ, ಕನಸುಗಳನ್ನ ಒಣಗಿಸಿ ತರಗೆಲೆಗಳಂತೆ ಧರೆಗಿಳಿಸಿದ್ದವು. ಒಣಗಿದ ಮರದಂತೆ, ಮೌನ ಸ್ಮಶಾನದಲ್ಲಿ ಏಕಾಂಗಿ ಪಿಶಾಚಿಯಂತೆ, ಹರೆಯದಲ್ಲೇ ಮುದಿಯಾದಂತಿತ್ತು ನನ್ನ ಮನಸ್ಸು. ಇಂಥಹ ದುಷ್ಪರಿಣಾಮದ ಪರಿಚಯವಾದ ದಿನದಿಂದಲೇ ಮನಸ್ಸಿಗೆ ಮುದ ನೀಡಲು ಪರಿ ಪರಿಯಾಗಿ ಪ್ರಯತ್ನಿಸಿದೆ. ಪ್ರಯತ್ನ ಮಾತ್ರ ನನ್ನದಾಗಿತ್ತು. ಫಲ ನನ್ನಿಂದ ಬಲು ದೂರದಲ್ಲಿ ನಿಂತು "ತು" ನಿನ್ನ ಅಂತಿತ್ತು. ನಿರಾಸೆಯ ಬೀಜಾಸುರ ನನ್ನೊಳಗಿನ ಅಲ್ಪ ಸ್ವಲ್ಪ ಆಸೆಗಳನ್ನ ಅಟ್ಟಾಡಿಸಿಕೊಂಡು ನಿರ್ಭಯವಾಗಿ, ನಿರಾತಂಕವಾಗಿ ನುಂಗುವಂತಹ ಸಮಯದಲ್ಲಿ ನನಗೊಂದು ರೋಮಾಂಚನದ ಅನುಭವವಾಯ್ತು. ತೊಟ್ಟಿಲಲ್ಲಿದ್ದ ಮಗುವೊಂದು ಎದೆಗೆ ಒದ್ದ ಅನುಭವ. ಆಗ ತಾನೇ ಚಿಗುರಿದ ಎಲೆಯನ್ನು ಸ್ಪರ್ಶಿಸಿದ ಅನುಭವ. ಎಳೆಗರುವಿನ ಹಣೆಗೆ ಮುತ್ತಿಟ್ಟ ಖುಷಿಯ ಅನುಭವ. ಏನಿದು? ಏನಾಶ್ಚರ್ಯ? ಏನಾಗಿದೆ..... ಅಲ್ಲ ಅಲ್ಲ ಏನಾಗುತ್ತಿದೆ ಅನ್ನೋಸ್ಟರಲ್ಲಿ ನನಗರಿವಿಲ್ಲದೆ ನನ್ನ ಹೃದಯದೊಳಗೊಂದು ಕೋಗಿಲೆ ನುಸಿಳಿತ್ತು. ಅದು ನಿರಂತರವಾಗಿ ಕುಹೂ ಕುಹೂ ಅಂತಿತ್ತು. ಆ ಕೋಗಿಲೆಯ ಆಗಮನವೇ ನನ್ನ ಮನಸ್ಸಿಗೆ ಮರುಜನ್ಮ ನೀಡಿದ್ದು. ಅದರ ಕುಹೂ ಕುಹೂ ದನಿಯೇ ನನ್ನ ಮನಸ್ಸನ್ನ ಮುಗಿಲ ಗಲ್ಲಿ ಗಲ್ಲಿಗೂ ಹಾರಾಡುವಂತೆ ಮಾಡಿದ್ದು. ಆ ಕೋಗಿಲೆ ಯಾರು ಗೊತ್ತಾ? ನೀನೇ ಕಣೇ. ಕುಹೂ ದನಿ ಯಾರದ್ದು ಗೊತ್ತಾ? ನಿಂದೇ ಕಣೇ. ನನ್ನೊಳಗೇ ಬಾಡಿ ಹೋಗಿದ್ದ ಭಾವನೆಗಳು ಬದುಕುಳಿದಿದ್ದು ನಿನ್ನಿಂದ ಕಣೇ. ಕಣ್ಣುಗಳಿಗೆ ಕೋಲ್ಮಿಂಚಿನ ಬೆಳಕು ನೀಡಿ, ಕಣ್ಮರೆಯಾಗಿದ್ದ ಕನಸುಗಳನ್ನ ಹುಡುಕಿ ಕರೆತಂದದ್ದು ನೀನು. ಹೌದು ಕಣೇ ನೀನೇ ಅದು. ನಿನ್ನಿಂದಲೇ ಅದೆಲ್ಲ. ನನ್ನ ಮನಸ್ಸಿಗಾದ ವಸಂತಗಾಲ ನಿನ್ನಿಂದ ಕಣೇ.<br /><span class=""><em><span style="color:#3366ff;">ಏಯ್ ಮುದ್ದುಮರಿ ಅದಕ್ಕೆ ನೀನಂದ್ರೆ ನಂಗಿಸ್ಟ ಕಣೇ.........</span></em> </span><br /></span><p></p><p><span style="color:#cc0000;"><span style="font-size:130%;">ಹೇಗಿದೆ?, ಇದು ನನ್ನ ಕಲ್ಪನೆಯ ಪ್ರೇಮಿಗಳ ಕಥೆ.</span></span></p>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-52855261346923715372009-06-16T08:29:00.000-07:002009-07-28T05:00:23.998-07:00ಪ್ರೀತಿ ಅಂದರೆ..........<span style="font-size:130%;">ಇಲ್ಲಿ ಪ್ರೀತಿಯನ್ನು ನದಿಗೆ ಹೋಲಿಸಿ ಪ್ರೇಮಿಗಳನ್ನ ಅಂದರೆ ಹುಡುಗನನ್ನ ಮೀನಿಗೆ ಮತ್ತು ಹುಡುಗಿಯನ್ನ ನೀರ ಮೇಲಿನ ಗುಳ್ಳೆ ಗೆ ಹೋಲಿಸಿ ಒಂದು ಕವನ ರಚಿಸಿದ್ದೇನೆ.ಇದೊಂಥರಾ ವಿಚಿತ್ರ ಕಲ್ಪನೆ. ಓದಿ......<br /><br />ಪ್ರೀತಿ ಅಂದರೆ ನೀರ ಮೇಲಿನ<br />ಗುಳ್ಳೆ ಅಂತಾರೆ<br />ನಿಜ ಕಣೇ ಆ ಗುಳ್ಳೆನೆ ನೀನು<br /><span class="">ನಿನ್ನನ್ನೇ ನಾ ಪ್ರೀತಿಸಿದೆ.</span><br /><span class=""></span><br /><span class="">ನೀರಲ್ಲಿ ಹಾಯಾಗಿ ತೇಲುತ್ತಿದ್ದ </span><br /><span class="">ನಿನ್ನನ್ನು ನಾ ಕಂಡೆ ದೂರದಿಂದ </span><br /><span class="">ಎಕೆಂದೇ ತಿಳಿಯದು ನಿನ್ನ ಕಂಡಾಗ ವಿಚಿತ್ರ ಆನಂದ </span><br /><span class="">ಶುರು ಮಾಡಿದೆ ನಾ ನಿನ್ನ ಪ್ರೀತಿಸಲು ಹೃದಯದಿಂದ. </span><br /><span class=""></span><br /><span class="">ನೀ ನೀರ ಮೇಲೆ ಅಣಕಿಸುತ್ತ, ನೆಗೆಯುತ್ತಾ </span><br /><span class="">ಮುಂದೆ ಮುಂದೆ ಹೋದೆ </span><br /><span class="">ನಾ ದೂರದಿಂದಲೇ ಜಿಂಕೆಯಂತೆ </span><br /><span class="">ಜಿಗಿಯುತ್ತಾ ಹಿಂದೆ ಹಿಂದೆ ಬಂದೆ.</span><br /><span class=""></span><br /><span class="">ನಿನ್ನ ಮುಟ್ಟಿ ಮಾತಾಡಿಸಬೇಕೆಂಬ ಆಸೆ </span><br /><span class="">ಮತ್ತೆಲ್ಲೋ ನಿನ್ನ ಜೊತೆಗೆ ಬದುಕಬೇಕೆಂಬ ಆಸೆ </span><br /><span class="">ಅದನ್ನ ನೆನೆದರೆ ನೀರಲ್ಲೂ ಬೆಚ್ಚನೆಯ ಅನುಭವ </span><br /><span class="">ಅದಕ್ಕಿಂತಲೂ ಹೆಚ್ಚಾಗಿ ಏನಾಗುವುದೋ ಎಂಬ ಭಯ.</span><br /><span class=""></span><br /><span class="">ಒಂದು ಕ್ಷಣ ಮರೆಯಾದೆ ನೀ ಕಾಣದೆ </span><br /><span class="">ಆಗ ನಾ ನಿನ್ನದೇ ಚಿಂತೆಯಲ್ಲಿ ಗಲಿಬಿಲಿಯಾದೆ</span><br /><span class="">ನೋಡಿದರೆ ನೀ ನಿಂತಿದ್ದೆ ಜೋಗದ ಧರೆಯ ಮೇಲೆ </span><br /><span class="">ಅಲ್ಲಿಗೂ ನಾ ಓಡಿ ಬಂದೆ ಕುಣಿದಾಡುತ್ತಲೇ.</span><br /><span class=""></span><br /><span class="">ಸನಿಹದಿಂದಲೇ ಜೋರಾಗಿ ನಾ ನಿನ್ನ ಪ್ರೀತಿಸುವೆ ಎಂದೆ </span><br /><span class="">ಅಸ್ಟ್ರಲ್ಲಾಗಲೇ ನೀ ಜಲಪಾತದ ಮದ್ಯದಲ್ಲಿ ಹಾರಾಡುತಿದ್ದೆ</span><br /><span class="">ನಿನ್ನ ಗುಂಗಲ್ಲೇ ನಾನೂ ಜಿಗಿದೆ </span><br /><span class="">ಕ್ಷಣ ಮಾತ್ರದಲ್ಲೇ ನಾ ಜಲಪಾತದ ತಳದಲ್ಲಿದ್ದೆ.</span><br /><span class=""></span><br /><span class="">ನಿನ್ನೊಂದಿಗಿನ ಮಧುರ ನೆನಪಲ್ಲೇ ನಾ ಹೆಣವಾಗಿದ್ದೆ</span><br /><span class="">ಎಲ್ಲಿಂದಲೋ ಹಾರಾಡುತ್ತಾ ನೀ ನನ್ನ ಮೇಲೆ ಬಿದ್ದೆ </span><br /><span class="">ಆ ಸುಂದರ ಕ್ಷಣ ನೀ ನನ್ನ ದೇವತೆಯಾಗಿದ್ದೆ </span><br /><span class="">ನಾ ನಿನಗೆ ಸಾವಿನಲ್ಲೂ ಮೆತ್ತನೆಯ ತೇರಾಗಿದ್ದೆ.</span><br /><span class=""></span><br /><span class="">ಹೌದು ಗೆಳತಿ ನೀ ನೀರ ಮೇಲಿನ ಗುಳ್ಳೆಯಾಗಿದ್ದೆ </span><br /><span class="">ನಾ ನಿನ್ನೊಂದಿಗೆ ಬದುಕುವ ಮೀನಾಗಿದ್ದೆ </span><br /><span class="">ಸಾಯುವಾಗಲೂ ನಾ ನಿನ್ನೊಂದಿಗೆ ಪ್ರೀತಿಯ ಸವಿಯುಂಡೆ</span><br /><span class="">ನೋಡೀಗ ಸತ್ತ ಮೇಲೂ ನಾ ಸುಂದರ ಸ್ವರ್ಗ ಕಂಡೆ.</span><br /></span><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"></span>prashihttp://www.blogger.com/profile/17424449836173486264noreply@blogger.com2tag:blogger.com,1999:blog-357559050894046621.post-41741001536686354242009-06-16T07:15:00.000-07:002009-07-28T05:02:15.577-07:00ಕನಸಿನ ರಾಣಿ<span style="font-size:130%;">ನನ್ನ ಕಣ್ಣಗೊಂಬೆಯಲ್ಲಿ<br />ಅಡಗಿರುವ ಏ ಹುಡುಗಿಯೇ<br />ನನ್ನ ಕಣ್ಣೆದುರಿಗೆ ಬಂದುಬಿಡು<br />ಅಲ್ಯಾಕೆ ಅಡಗಿರುವೆ.<br /><span class=""></span><br /><span class="">ನೀ ನನ್ನ ಕಣ್ಣೋಳಗಿದ್ದರೆ</span><br /><span class="">ಕುರುಡಾಗಬಹುದು ಜೀವನ</span><br /><span class="">ಒಮ್ಮೆ ಬಂದುಬಿಡು ಕಣ್ಣೆದುರಿಗೆ </span><br /><span class="">ಬೆಳಕಾಗಲೆಂದು ನನ್ನ ಜೀವನ. </span><br /><span class=""></span><br /><span class="">ಕನಸಿನ ರಾಣಿಯೆಂದು </span><br /><span class="">ಕರೆಯುವೆ ನಾ ನಿನ್ನನ್ನು </span><br /><span class="">ಕಣ್ಣೋಳಗೆನೆ ಮಿಂಚಿ ಮರೆಯಾಗಬೇಡ </span><br /><span class="">ಮಿಂಚು ಹುಳದ ಹಾಗೆ ನೀನು.</span><br /><span class=""></span><br /><span class="">ಕಣ್ಣೊಳಗೆ ನೀ ಅವಿತಿದ್ದರೆ </span><br /><span class="">ಹೇಗೆ ನೋಡಲಿ ನಾ ನಿನ್ನ </span><br /><span class="">ಆದರೂ ನೋಡಲು ಪ್ರಯತ್ನಿಸಿದೆ </span><br /><span class="">ಕನ್ನಡಿಯಲ್ಲಿ ಕಣ್ಣಿಟ್ಟು ನಿನ್ನ.</span><br /><span class=""></span><br /><span class="">ಬೇಕು ಬೇಕೆಂದೇ ನಾ ಕಣ್ಣೀರಿಟ್ಟೆ</span><br /><span class="">ಅದರ ಹನಿಯಲ್ಲಾದರೂ ನೀ ಕಾಣುವೆಯೆಂದು </span><br /><span class="">ಅದರಲ್ಲೂ ನೀ ಕಾಣಲಿಲ್ಲ </span><br /><span class="">ನೀ ಕಾಣುವುದಾದರು ಎಂದು, ಹೇಗೆಂದು.</span><br /><span class=""></span><br /><span class="">ಕಣ್ಣೋಳಗಡೆ ಮುಖ ತೋರದೇನೆ </span><br /><span class="">ಕುಣಿದಾಡುತ್ತಿರುವೆ ನೀನು </span><br /><span class="">ನನ್ನ ಮನಸೆಲ್ಲ ಬಿರುಗಾಳಿಯಾಗಿದೆ</span><br /><span class="">ಹೇಳೇ ನಿನ್ನ ಹೆಸರಾದರು ಏನು.</span><br /><span class=""></span><br /><span class="">ಸುಮ್ಮನೆ ಹೀಗೆಲ್ಲ ಸತಾಯಿಸಬೇಡ </span><br /><span class="">ಸತ್ತು ಹೋಗುವೆನು ನಾನು </span><br /><span class="">ಒಮ್ಮೆ ಎದುರಿಗೆ ಬಂದು ಬಿಡು </span><br /><span class="">ಇಲ್ಲವೇ ನೀ ನನ್ನ ಕೊಂದುಬಿದು.</span><br /></span><span style="font-size:85%;"><span class=""></span></span><br /><span style="font-size:85%;"><span class=""><span class=""></span></span></span><br /><span style="font-size:85%;"><span class=""></span></span><br /><span style="font-size:85%;"><span class=""><span class=""></span></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-30107428577403454142009-06-16T06:00:00.000-07:002009-07-28T04:55:30.819-07:00ನಮ್ಮೂರದು ಆಗುಂಬೆ<span style="font-size:130%;">ನಮ್ಮೊರದು ಆಗುಂಬೆ<br />ವಿಶ್ವಕ್ಕೆ ಅದೊಂದು ಗೊಂಬೆ<br />ನೋಡಲದೊಂದು ರಂಭೆ<br />ಆದ್ದರಿಂದ ನಾವದರ ಕೈಗೊಂಬೆ<br /><br />ಈ ಪರಿಸರದಲ್ಲಿ ಪ್ರಾಣಿಗಳ ಓಡಾಟ<br />ನಮ್ಮ ಜೊತೆಯಲ್ಲೇ ಅವುಗಳ ಒಡನಾಟ<br />ನೀ ಮಾಡಿದ್ದರೆ ಪ್ರಾಣಿಗಾಗಿ ಹುಡುಕಾಟ<br />ಬಂದು ನೋಡು ನಮ್ಮೂರಲ್ಲಿ ಅವುಗಳಾಟ<br /><span class=""></span><br /><span class="">ಆಗುಂಬೆಯ ನಿಸರ್ಗ </span><br /><span class="">ಪ್ರಾಣಿ ಪಕ್ಷಿಗಳಿಗೆ ಸ್ವರ್ಗ </span><br /><span class="">ಇಲ್ಲೂ ಉಂಟು ಕಾಡುಮೃಗ </span><br /><span class="">ನೋಡಬೇಕೆಂದರೆ ಬಾ ಆಗುಂಬೆ ಮಾರ್ಗ </span><br /><span class=""></span><br /><span class="">ಅಲ್ಲಿನ ದುಂಬಿಯ ಜೇಂಕಾರಕ್ಕೆ </span><br /><span class="">ನಾಟ್ಯವಾಡಿದಳು ಇಂದ್ರನ ಮೇನಕೆ</span><br /><span class="">ಅಲ್ಲಿ ಸಹ್ಯಾದ್ರಿ ಇರುವುದು ಅದರ ಸಂಕೇತಕ್ಕೆ </span><br /><span class="">ನೀನೊಮ್ಮೆ ಬಾ ಅದ ನೋಡಲಿಕ್ಕೆ </span><br /><span class=""></span><br /><span class="">ಆಗುಂಬೆಯಲ್ಲಿದೆ ನೋಡು ಸೂರ್ಯಾಸ್ತಮಾನ </span><br /><span class="">ಆದ್ದರಿಂದ ಅದಕ್ಕೆ ವಿಶ್ವವ್ಯಾಪಿ ಸ್ಥಾನಮಾನ </span><br /><span class="">ಕೈ ಬೀಸಿ ಕರೆಯುತಿದೆ ಅದು ನಿನ್ನನ್ನ </span><br /><span class="">ಬಂದು ಆಸ್ವಾದಿಸು ಆ ಚಲುವನ್ನ</span><br /><span class=""></span><br /><span class="">ಭರ್ ಅಂತ ಬಿದ್ದರೆ ಮಳೆ </span><br /><span class="">ಭಯ ಹುಟ್ಟಿಸುವ ಸುನಾಮಿ ಅಲೆ</span><br /><span class="">ಅಲ್ಲಿ ಬೀಳುವ ಭಯಾನಕ, ಸುಂದರ ಮಳೆ </span><br /><span class="">ಮೂರನೇ ಅತಿ ಹೆಚ್ಚು ಇಡೀ ದೇಶದಲ್ಲೆ</span><br /><span class=""></span><br /><span class="">ಆಗುಂಬೆಯಲ್ಲಿನ ಸೋಇಯ್ ಗುಡುವ ಗಾಳಿ </span><br /><span class="">ಮೈಕೊರೆಯುವ ಆ ವಿಚಿತ್ರ ಚಳಿ </span><br /><span class="">ನವ ದಂಪತಿಗಳಿಗೆ ಮಾಡಿದರೆ ಓಕಳಿ</span><br /><span class="">ಹದಿಹರೆಯದವರಿಗಂತೂ ಅದೊಂತರ ಚಿಕಳಿ</span><br /><span class=""></span><br /><span class="">ಆಗುಂಬೆಯಲ್ಲಿರುವುದು ಬರೀ ಶ್ರೀಗಂಧ </span><br /><span class="">ಅಲ್ಲಿ ಹೂ, ಹಣ್ಣುಗಳದ್ದೇ ಸೌಗಂಧ </span><br /><span class="">ಎನ್ಹೆಳಲಿ ನಮ್ಮೂರಿನ ಅಂದ ಚಂದ</span><br />ನನಗಂತೂ ಅಲ್ಲಿ ಹುಟ್ಟಿದ್ದಕ್ಕೆ ಪರಮಾನಂದ<br /><br />ಅಲ್ಲಿನ ಆ ಮನೋಹರ ಕಣಿವೆ<br />ನೋಡುತ್ತಾ ನಿಂತರೆ ಬೆರಗುಗೊಳಿಸುತ್ತವೆ<br />ಕಣ್ಣುಗಳು ಮತ್ತೆ ಮತ್ತೆ ನೋಡಲು ಹಂಬಲಿಸುತ್ತವೆ<br />ಸಾಗರೋಪಾದಿಯಲ್ಲಿ ಜನ ಬರುವುದು ಅದಕ್ಕಾಗಿಯೇ ಅಲ್ಲವೇ?<br /><br />ಅಲ್ಲಿನ ಆ ಪರಿಸರದ ಸಿರಿ<br />ನಾ ನಿಮಗೆ ಹೇಳಿದರೆ ಪರಿ ಪರಿ<br />ನಿಮಗಾಗಬಹುದು ಕಿರಿಕಿರಿ<br />ಅದಕ್ಕೆ ನೀವೇ ಬಂದು ಒಮ್ಮೆ ಸವಿಯಿರಿ<br /><br />ಸಹೃದಯದವರು ಅಲ್ಲಿನ ಮುಗ್ದ ಜನ<br />ಅವರಿಗೆ ಆ ಹಸಿರಿನದೆ ಗುಣಗಾನ<br />ಹೆಮ್ಮೆಯುಂಟು ಅಲ್ಲಾಗಿದ್ದಕ್ಕೆ ಜನನ<br />ಆಸೆಯುಂಟು ಅಲ್ಲಾಗುವುದಕ್ಕೆ ಮರಣ.<br /></span><span style="font-size:85%;"></span><br /><br /><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"><span class=""></span></span><br /><br /><span style="font-size:85%;"><span class=""></span></span>prashihttp://www.blogger.com/profile/17424449836173486264noreply@blogger.com0tag:blogger.com,1999:blog-357559050894046621.post-39429213492490724682009-06-16T01:31:00.000-07:002010-01-08T22:59:28.559-08:00ನನ್ನ ಬಗ್ಗೆ ಇನ್ನೊಂದಿಸ್ಟ್ ಮಾತು<span style="font-size:130%;">ನನ್ ಹೆಸರು ಗೊತ್ತಲ್ಲ ನಿಮಗೆ ಪ್ರಶಾಂತ್ ಅಂತ. ನನ್ ತಂದೆ ಹೆಸರು ಚಂದ್ರಪ್ಪ ಗೌಡ ಎಸ್ ಎ. ತಾಯಿ ಕಲಾವತಿ ಅಂತ.ನಂಗೆ ಇಬ್ಬರು ಅಣ್ಣ ಒಬ್ಬ ತಮ್ಮ ಇದಾನೆ.ಜೊತೆಗೆ ಅಜ್ಜಿ ಇದಾರೆ.ಇದು ನಮ್ಮ <span class="">ಕುಟುಂಬ.ಹುಟ್ಟೂರು ಶೀರೂರು. ಇದು ತೀರ್ಥಹಳ್ಳಿ ತಾಲ್ಲೋಕು ಶಿವಮೊಗ್ಗ ಜಿಲ್ಲೆಯಲ್ಲಿದೆ.</span>ಈ ಊರು ತೀರ್ಥಹಳ್ಳಿ ಮತ್ತು ನಿಸರ್ಗದ ತವರೂರೆನ್ನಬಹುದಾದ ಆಗುಂಬೆಯ ಮಾರ್ಗಮದ್ಯದಲ್ಲಿ ಸಿಗುವಂತಹ ಸುಂದರವಾದ ಊರು.ಆದರೆ ನಾನು ಬೆಳೆದಿದ್ದು, ಓದಿದ್ದು, ನನ್ನ ಒಡನಾಟ ಮತ್ತು ನಾ ಹೊತ್ತಿರುವ ನೆನಪಿನ ಮೂಟೆಯಲ್ಲಿ ಹೆಚ್ಚಿನ ಪಾಲು ನನ್ನ ಅಜ್ಜಿ ಊರಾದ ಜಡ್ದಗದ್ದೆಯದ್ದು. ಇದು ಸಹ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪವಿದೆ. ಇದು ನನ್ನ ಅಚ್ಚು ಮೆಚ್ಚಿನ ಹಾಗು ಸದಾ ಸ್ಮರಿಸುವ ಊರು.ಈ ಊರಿನಲ್ಲಾದ ನನ್ನ ಬಾಲ್ಯದ ಅನುಭವಗಳನ್ನು ಮೆಲಕು ಹಾಕಿಕೊಂಡರೆ ಮತ್ತೆ ಅದೇ ಊರಿನಲ್ಲಿ ಅದೇ ಸ್ನೇಹಿತರ ಜೊತೆ ಕುಣಿದಾಡಬೇಕು ನಲಿದಾಡಬೇಕು ಅನ್ಸತ್ತೆ. ಹಾಗೇ ನನ್ನಜ್ಜಿ (ಅಮ್ಮನ ತಾಯಿ), ಅಜ್ಜ, ಮಾವಂದಿರು, ಅತ್ತೆ, ಅವರ ಮಕ್ಕಳು, ನೆರೆಹೊರೆಯವರು, ಆ ಪರಿಸರ, ಅವರ ಸಂಸ್ಕೃತಿ, ಅವರ ಕೃಷಿ ಕೆಲಸ ಕಾರ್ಯಗಳು, ಆ ಮಳೆಗಾಲ, ಕೊರೆಯುವ ಚಳಿಗಾಲ, ಉರಿ ಬಿಸಿಲಿನ ಬೆಸಿಗೆಗಾಲ, ಆ ನನ್ನ ಶಾಲೆ, ಆ ಶಾಲೆಗೆ ಹೋಗೋ ಮೂರು ಕಿಲೋಮೀಟರ್ ದಾರಿ, ಹಳ್ಳ, ಗದ್ದೆಬೈಲು, ಕಾಡುಕೋಳಿ ಹಿಂಡು, ನವಿಲುಗರಿಗಳು, ಶಾಲೆವರೆಗೂ ಬಿಟ್ಟುಬರೋ ನಮ್ಮೂರಿನ ನಾಯಿಗಳು. ಚಂದ ಚಂದ ಹುಡುಗಿಯರೂ ಆಹಾ ಎಂಥೆಂಥಾ ಮಧುರ ಅನುಭವಗಳವು. ಹೇಳಿ ಆ ಊರನ್ನ ನಾ ಮರೆಯಲು ಸಾದ್ಯಾನ? ಖಂಡಿತ ಆಗಲ್ಲ. ಈ ಎಲ್ಲದರ ಬಗ್ಗೆ ಬರಿತೀನಿ.ಆ ಸುಂದರ ಅನುಭವಗಳನ್ನ ಈ ಮೂಲಕ ಮತ್ತೆ ಈ ಮೂಲಕ ಮತ್ತೆ ಮತ್ತೆ ಮೆಲಕು ಹಾಕ್ಕೊಳ್ತಿನಿ ಆದರೆ ನನ್ನ ಭಾಷಾ ಬಳಕೆ ನಿಮಗೆ ಕಿರಿಕಿರಿ ಅನ್ನಿಸಿದರೆ ನೇರವಾಗಿ ಹೇಳಿ. ಮಲೆನಾಡಿನ ಆಡು ಭಾಷೆಯಲ್ಲಿ ಹಿರಿಯರಿಗೆ ತುಂಬಾನೆ ಗೌರವ ಇರತ್ತೆ. ಆದರು ನಾವು ಅಮ್ಮಂಗೆ, ಅಜ್ಜಿಗೆ, ಅಥವಾ ಮನೆಯ ಯಾರೇ ಸದಸ್ಯರಿಗೆ ಪ್ರೀತಿಯಿಂದ "ಕಣೇ, ಹೋಗೆ, ಬಾರೆ", ಈ ಥರದ ಮಾತು ರೂಡಿಯಲ್ಲಿದೆ. ಇಂಥಾ ಪದಗಳು ಅತ್ಯಂತ ಪ್ರೀತಿಪೂರ್ವಕ ಮಾತುಗಳು. ದಯವಿಟ್ಟು ಅನ್ಯತಾ ಭಾವಿಸಬೇಡಿ. ಹಾಗೇ ನಾ ಬರೆಯುವಾಗ ಅಲ್ಲಲ್ಲಿ ಘಟನೆಗಳು, ವಿಷಯಗಳು ಹಿಂದೆ ಮುಂದೆ ಆಗಬಹುದು. ಹಾಗಿದ್ದರೂ, ಬರೆಯಬೇಕೆಂಬ ಮನಸ್ಸಿಗೆ ಇದೊಂದು ಮೊದಲ ಮೆಟ್ಟಿಲು ಅಂತ ಭಾವಿಸಿದ್ದೇನೆ. ಇದರಲ್ಲಿ ಹೆಚ್ಚು ವಾತ್ಸವತೆ ಇದ್ದರೂ ಅಲ್ಲಲ್ಲಿ ಕಾಲ್ಪನಿಕ ವಿಚಾರಗಳು ಮನರಂಜನೆಗಾಗಿಯೋ, ಅಥವಾ ವಿಷಯ ಗಂಬೀರತೆಗಾಗಿಯೋ ಬಂದಿರಬಹುದಾಗಿದೆ.ನನಗನ್ನಿಸಿದ್ದನ್ನು ನನ್ನದೇ ಧಾಟಿಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ. ಹ್ಞಾ.... ಇನ್ನೊಂದು ವಿಷಯ, ಈ ನನ್ನ ಬ್ಲಾಗಿನ ಶೀರ್ಷಿಕೆಯಲ್ಲಿ "ನೀನಂದ್ರೆ ನಂಗಿಷ್ಟ ಕಣೇ" ಅಂತಿದೆ. ಇಲ್ಲಿ ನನ್ನಜ್ಜಿ ಇರಬಹುದು, ದೂರದಲ್ಲಿ ನಿಂತು ಕೈ ಬೀಸಿ, ನಗು ಬಿಸಾಕಿದ ಗೆಳತಿ ಇರಬಹುದು, ನನ್ನ ಕಲ್ಪನೆಯಲ್ಲಿನ ಪ್ರೇಯಸಿ ಇರಬಹುದು, ಅಥವಾ ನನ್ನ ಹೃದಯಕ್ಕೆ ಹತ್ತಿರವಾದ ಯಾರೇ ಇರಬಹುದು. ಹಾಗೇನೇ ಇಲ್ಲಿ ಬರೆಯಲು ಸಾಕಸ್ಟ್ ವಿಷಯಗಳಿವೆ. ಆದರೆ ಯಾವುದು ಮೊದಲು ಯಾವುದು ನಂತರ ಅನ್ನೋ ಗೊಂದಲವಿದೆ. ಇದೆಲ್ಲ ಸ್ವಲ್ಪ ಸಮಯದ ನಂತರ ತನಗೆ ತಾನಾಗೇ ಮತ್ತು ನಿಮ್ಮ ಸಲಹೆಗಳಿಂದ ಸರಿಯಾಗುತ್ತದೆಂಬ ಧೃಡ ನಂಬಿಕೆ ನನಗಿದೆ. ಇಲ್ಲಿ ಪ್ರಥಮವಾಗಿ ನನ್ನ ಕೆಲವು ಕವಿತೆಗಳನ್ನ ಬರೆಯುತ್ತೇನೆ. ಹಂತಹಂತವಾಗಿ ಗಂಬೀರವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನನ್ನ ಕವಿತೆಗಳು, ಬರಹಗಳ ಬಗ್ಗೆ ನಿಮಗೇನನ್ನಿಸುತ್ತದೆ ಅದನ್ನ ನೇರವಾಗಿ ತಿಳಿಸಿ ಅಂತ ತಮ್ಮಲ್ಲಿ ವಿನಮ್ಬ್ರವಾಗಿ ಕೇಳಿಕೊಳ್ಳುತ್ತೇನೆ. ಸ್ನೇಹಿತರೇ.... ಬರೆಯಬೇಕು ಎಂದುಕೊಂಡಾಗ ಈ ರೀತಿಯ (ಬ್ಲಾಗ್) ದಾರಿ ತೋರಿಸಿದ ನನ್ನೊಬ್ಬ ಗೆಳೆಯನಿಗೆ, ಆತ ಈಗ ಏನೋ ಸಾದಿಸುವ ತುದಿತದಲ್ಲಿದ್ದಾನೆ. ಅವನಿಗೆ ಆ ದಾರಿಯಲ್ಲಿ ಯಶಸ್ಸು ಸಿಗಲಿ ಅಂತ ಈ ಮೂಲಕ ಶುಭ ಹಾರೈಸುತ್ತೇನೆ. ಹಾಗೆಯೇ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲೆಂದು ಬಯಸುತಾ ನನ್ನ ಬರವಣಿಗೆ ಪ್ರರಂಬಿಸುತ್ತೇನೆ.<br /></span><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"><span class=""></span></span><br /><span style="font-size:85%;"><span class=""></span></span>prashihttp://www.blogger.com/profile/17424449836173486264noreply@blogger.com3